ನೌಕಾನೆಲೆ 2ನೇ ಹಂತ 2023ಕ್ಕೆ ಪೂರ್ಣ

•ವಿಸ್ತರಣೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಭೂಮಿ ವಶ•32 ಯುದ್ಧ ನೌಕೆ ನಿಲ್ಲಿಸಲು ಹೆಚ್ಚಿನ ಸ್ಥಳಾವಕಾಶ •11334 ಎಕರೆ ಸೀಬರ್ಡ್‌ ನೌಕಾನೆಲೆಗೆ ವಶ•6 ಸಾವಿರ ಉದ್ಯೋಗ ಸೃಷ್ಟಿ•20000 ಕೋಟಿ ವೆಚ್ಚದಲ್ಲಿ ಕಾಮಗಾರಿ

Team Udayavani, Jul 27, 2019, 1:55 PM IST

uk-tdy-3

ಕಾರವಾರ: ಐಎನ್‌ಎಸ್‌ ಕದಂಬ ಮುಖ್ಯಸ್ಥ-ಫ್ಲಾಗ್‌ ಆಫೀಸರ್‌ ಮಹೇಶ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾರವಾರ: ಸೀಬರ್ಡ್‌ ನೌಕಾನೆಲೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರ್‍ನಾಲ್ಕು ವರ್ಷಗಳು ಬೇಕು. ಆದರೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಭೂಮಿಯನ್ನು ಮೊದಲೇ ವಶಪಡಿಸಿಕೊಂಡಿದ್ದು, ಹೆಚ್ಚುವರಿ ಭೂಮಿ ಬೇಕಿಲ್ಲ ಎಂದು ಐಎನ್‌ಎಸ್‌ ಕದಂಬದ ಮುಖ್ಯಸ್ಥ ಹಾಗೂ ಫ್ಲಾಗ್‌ ಆಫೀಸರ್‌ ಕರ್ನಾಟಕ ಮಹೇಶ್‌ ಸಿಂಗ್‌ ಹೇಳಿದರು.

ಸೀಬರ್ಡ್‌ ನೌಕಾನೆಲೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26 ಕಿಮೀ ಕಡಲಿನ ಅಂಚಿಗೆ ಚಾಚಿಕೊಂಡಿರುವ ಸೀಬರ್ಡ್‌ ನೌಕಾನೆಲೆ ಭಾರತದಲ್ಲೇ ಅಷ್ಟೇ ಅಲ್ಲ, ಏಷ್ಯಾ ಖಂಡದಲ್ಲೇ ಅತ್ಯಂತ ಬೃಹತ್ತಾದ ನೌಕಾನೆಲೆ ಆಗಲಿದೆ. 11334 ಎಕರೆ ಪ್ರದೇಶವನ್ನು ಸೀಬರ್ಡ್‌ ನೌಕಾನೆಲೆಗೆ ವಶಪಡಿಸಿಕೊಳ್ಳಲಾಗಿದೆ. ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡಾಗ ಕದಂಬ ನೌಕಾನೆಲೆಯಲ್ಲಿ 32 ಯುದ್ಧ ನೌಕೆಗಳು ಹಾಗೂ ಸಬ್‌ ಮರೀನ್ಸ್‌ ನಿಲ್ಲಲು ಅವಕಾಶವಿದೆ. 2025ರ ವೇಳೆಗೆ ನೌಕಾನೆಲೆ ಸಂಬಂಧಿತ ವಿಮಾನ ನಿಲ್ದಾಣ ಕಾಮಗಾರಿ ಮುಗಿದು, ಕಾರ್ಯಾಚರಣೆ ಆರಂಭಿಸಲಿದೆ. ಆಗ 50 ಯುದ್ಧ ನೌಕೆಗಳು ಹಾಗೂ ಸಬ್‌ ಮರೀನ್ಸ್‌ ನಿಲ್ಲಲು ಅವಕಾಶವಿದೆ. ಅಷ್ಟು ವಿಸ್ತಾರವಾದ ನೌಕಾನೆಲೆ ಇದಾಗಿದೆ ಎಂದರು.

ಕಾರ್ಗಿಲ್ ವಿಜಯೋತ್ಸವಕ್ಕೆ 20 ವರ್ಷ ತುಂಬುತ್ತಿದ್ದು, ಭಾರತದ ನೆಲವನ್ನು ಪಾಕಿಸ್ತಾನದಿಂದ ಮರಳಿ ಪಡೆಯಲಾಯಿತು. ಆ ವಿಜಯೋತ್ಸವಕ್ಕೆ 20 ದಶಕಗಳು ತುಂಬುತ್ತಿವೆ. ಹಾಗಾಗಿ ನೇವಿ ಸೇರಿದಂತೆ ಭಾರತದ ಎಲ್ಲಾ ಪಡೆಗಳು ಸಂಭ್ರಮ ಆಚರಿಸುತ್ತಿವೆ. ಯುದ್ಧದಲ್ಲಿ ಗೆಲುವು ಸಾಧಿಸಲು ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ನೆನೆಯುತ್ತೇವೆ ಎಂದರು.

5 ಸಾವಿರ ಉದ್ಯೋಗ: 2006ರಲ್ಲಿ ಸೀಬರ್ಡ್‌ ನೌಕಾನೆಲೆಯ ಪ್ರಥಮ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, 1986ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡನೇ ಹಂತದ ಕಾಮಗಾರಿಗಳು 2023ಕ್ಕೆ ಮುಗಿದಾಗ 4 ಸಾವಿರದಿಂದ 5 ಸಾವಿರ ಉದ್ಯೋಗಿಗಳು ಐಎನ್‌ಎಸ್‌ ಕದಂಬ ಸೇರಿಕೊಳ್ಳಲಿದ್ದಾರೆ. ಕಾರವಾರದ ಜನತೆ ನೇವಿಯ ನೌಕರರಿಗೆ ಆಹಾರ ಸೇರಿದಂತೆ ಇನ್ನಿತರೆ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಕಾರವಾರ ಈ ಕಾರಣದಿಂದ ವೇಗವಾಗಿ ಬೆಳೆಯುತ್ತಿದೆ. ಪರೋಕ್ಷ ಉದ್ಯೋಗಗಳು ಹೆಚ್ಚಲಿವೆ. ನೇವಿ ಸಂಬಂಧಿತ ಕೈಗಾರಿಕೆಗಳು ಬೆಳೆಯಲು ಸಾಕಷ್ಟು ಅವಕಾಶವಿದೆ. ಕಾರ್ಪೊರೇಟ್ ಹೌಸ್‌ಗಳು ಸಹ ಬರಲಿವೆ ಎಂದರು.

ಎರಡನೇ ಹಂತದ ಕಾಮಗಾರಿಗೆ 20000 ಕೋಟಿ ವೆಚ್ಚವಾಗುತ್ತಿದೆ. ಹಲವು ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಈಗಾಗಲೇ ಸ್ಥಳೀಯರಿಗೆ ಮತ್ತು ನಿರಾಶ್ರಿತ ಕುಟುಂಬಗಳಿಗೆ ಶೇ.60ರಷ್ಟು ಉದ್ಯೋಗಗಳು ಯೋಜನೆಯ ಪ್ರಥಮ ಹಂತದಲ್ಲಿ ದೊರೆತಿವೆ. ಸೀಬರ್ಡ್‌ ನೌಕಾನೆಲೆ ಎರಡನೇ ಹಂತ ಪೂರ್ಣಗೊಂಡಾಗ ಅದರ ಕಾರ್ಯಾಚರಣೆ ಈಗಿನದಕ್ಕಿಂತ 3 ಪಟ್ಟು ಹೆಚ್ಚಲಿದೆ. ಶಿಪ್‌ ರಿಪೇರಿ ಯಾರ್ಡ್‌ಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಶಿಪ್‌ ರಿಫೇರ್‌ ಯಾರ್ಡ್‌ ಸಂಬಂಧ ವಸ್ತು ಪೂರೈಕೆ ಹಾಗೂ ತಾಂತ್ರಿಕ ಕೌಶಲ್ಯವನ್ನು ಯುವಕರು ಪಡೆಯಬೇಕಿದೆ. ಕರ್ನಾಟಕದ ಕರಾವಳಿ 320 ಕಿಮೀ ಉದ್ದಕ್ಕೆ ಇದೆ. ಇದನ್ನು ಸೇರಿದಂತೆ ಪಶ್ಚಿಮದ ಕಡಲನ್ನು ನೇವಿ ಕಾಯುತ್ತಿದೆ. ಕರ್ನಾಟಕ ಕರಾವಳಿಯಲ್ಲಿ 101 ಹಳ್ಳಿಗಳಿವೆ. 24 ದ್ವೀಪಗಳಿವೆ. 117 ಶಿಪ್‌ಲ್ಯಾಂಡಿಂಗ್‌ ಸ್ಟೇಶನ್‌ಗಳಿವೆ ಎಂದರು.

ಐಎನ್‌ಎಸ್‌ ಕದಂಬದ ಅಧಿಕಾರಿಗಳಾದ ಸೀಬರ್ಡ್‌ ಎರಡನೇ ಹಂತದ ಅನುಷ್ಠಾನಾಧಿಕಾರಿ ಕಿರಣಕುಮಾರ್‌ ರೆಡ್ಡಿ, ಕದಂಬ ನೆಲೆ ಆ್ಯಡಿಶನಲ್ ಕಮಾಂಡರ್‌ ಎ.ಪಿ. ಕುಲಕರ್ಣಿ, ವಿಕ್ರಮಾದಿತ್ಯ ನೌಕೆ ಕಮಾಂಡರ್‌ ಪುರುವರಿ ದಾಸ್‌, ಪಿಆರ್‌ಒ ಅಜಯ್‌ ಕಪೂರ್‌ ಇದ್ದರು.

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

D. K. Shivakumar ಆಸ್ತಿ ಮಾರಿ ಜನರಿಗೆ 15 ಲಕ್ಷ ಕೊಡಲಿ: ಯತ್ನಾಳ್‌

D. K. Shivakumar ಆಸ್ತಿ ಮಾರಿ ಜನರಿಗೆ 15 ಲಕ್ಷ ಕೊಡಲಿ: ಯತ್ನಾಳ್‌

1-asdadad

Government ನೀತಿಗಳಿಂದಾಗಿ ಯಕ್ಷಗಾನ ಕ್ಷೇತ್ರ ಇಂದು ಕಷ್ಟಕ್ಕೆ ಸಿಲುಕಿದೆ:ಡಾ.ಜಿ.ಎಲ್.ಹೆಗಡೆ

Sirsi: ಶಾಸಕ ಶಿವರಾಮ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ…

Sirsi: ಶಾಸಕ ಶಿವರಾಮ ಹೆಬ್ಬಾರ್ ಪುತ್ರ ಕಾಂಗ್ರೆಸ್ ಸೇರ್ಪಡೆ…

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.