ಮಂಜುಗಣಿಯಲ್ಲಿ ಜಯತೀರ್ಥ ಮೇವುಂಡಿ ಗಾನ ನಾದ ಸೇವೆ
Team Udayavani, Nov 29, 2021, 2:34 PM IST
ಶಿರಸಿ: ತಾಲೂಕಿನ ಶ್ರೀ ಕ್ಷೇತ್ರ ಮಂಜಗುಣಿಯ ವೆಂಕಟ್ರಮಣ ದೇವಸ್ಥಾನದ ಸಭಾ ಮಂಟಪದಲ್ಲಿ ಗಾನ ಸೇವಾ ಕಾರ್ಯಕ್ರಮ ನಡೆಯಿತು.
ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿಯವರು ಕಳೆದ ಅನೇಕ ವರ್ಷಗಳಿಂದ ಗಾಯನ ಸೇವಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದು ಇದೇ ಸಂದರ್ಭದಲ್ಲಿ ಅನೇಕ ಗಾಯಕರು, ಮೇವುಂಡಿಯವರ ಶಿಷ್ಯ ಬಳಗವು ಪಾಲೊಳ್ಳುವುದು ವಿಶೇಷವಾಗಿದೆ.
ಬಾಲ ಪ್ರತಿಭೆ ಹುಬ್ಬಳ್ಳಿಯ ಕು. ರೇವತಿ ಹಾಗೂ ಪ್ರಗತಿ ಇವರ ಗಾಯನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಭಕ್ತಿಗಾನ ಕಾರ್ಯಕ್ರಮ ಮುಂಜಾನೆ ಆರು ಘಂಟೆಯಿಂದ ಆರಂಭಗೊಂಡು ಇಳಿಹೊತ್ತು ಆರುಘಂಟೆಯವರೆಗೆ ನಡೆಯಿತು.
ಸೇವೆಯಲ್ಲಿ ವಾಣಿ ರಮೇಶ ಯಲ್ಲಾಪುರ, ವಿಭಾ ಹೆಗಡೆ, ಚೈತನ್ಯ ಪರಬ್, ಐರಾ ಆಚಾರ್ಯ ಉಡುಪಿ, ಲಲಿತ್ ಮೇವುಂಡಿ ಇನ್ನಿತರರು ನಡೆಸಿದ ಗಾಯನ ಸೇವೆ ದೇವಸ್ಥಾನದ ಕಲ್ಲಿನ ಸಭಾ ಮಂಟಪದಲ್ಲಿ ಹೊಸದೊಂದು ವಾತಾವರಣ ಸೃಷ್ಠಿಸಿತು.
ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಳ್ಳಿ, ಭರತ ಹೆಗಡೆ ಹೆಬ್ಬಲಸು ಸಹಕರಿಸಿದರೆ ತಬಲಾ ವಾದನದಲ್ಲಿ ಗುರುರಾಜ ಹಗಡೆ ಆಡುಕಳ, ಯೋಗೀಶ ಭಟ್ಟ ಬೆಂಗಳೂರು ಮತ್ತು ಸಂಜೀವ ಜೋಶಿ ಹಾಗೂ ತಬಲಾ ಪಕ್ವಾಜ್ ನಲ್ಲಿ ಗಣೇಶ ಗುಂಟ್ಕಲ್ ಸಾಥ್ ನೀಡಿದರು.
ಸೇವೆಯ ಕೊನೆಯ ಹಂತವಾಗಿ ಪಂ.ಜಯತೀರ್ಥರ ಗಾನ ಸೇವೆಗೆ ಪ್ರಕಾಶ ಹೆಗಡೆ ಕಲ್ಲಾರೆಮನೆ ಮುರಳಿಯ ನಾದದ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.
ಗಾನ ಸೇವೆಗೆ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಪ್ರಶಂಸಿಸಿ ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಭಟ್ಟ ಅವರು ದೇವರ ಪ್ರಸಾದ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್