ಬೆಳೆ ಸಮೀಕ್ಷೆಗೆ ಜಿಪಿಎಸ್‌ದೇ ಸಮಸ್ಯೆ!

ಸಂಪೂರ್ಣ ತೋಟ ಸುತ್ತಾಡಿ ಹೈರಾಣಾದ ರೈತರು

Team Udayavani, Aug 23, 2020, 1:43 PM IST

uk-tdy-3

ಸಾಂದರ್ಭಿಕ ಚಿತ್ರ

ಶಿರಸಿ: ರೈತರ ಪಹಣಿಯಲ್ಲಿ ಬೆಳೆಗಾರರೇ ಬೆಳೆ ನೋಂದಣಿ ಮಾಡಲು ಅನುಕೂಲವಾಗುವಂತೆ ಸಿದ್ಧ ಪಡಿಸಲಾದ ಬೆಳೆ ಸರ್ವೇ ಆ್ಯಪ್‌ನ್ನು ವಾರದೊಳಗೆ ರಾಜ್ಯದ ಸುಮಾರು 70 ಸಾವಿರಕ್ಕೂ ಅಧಿಕ ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದಾರೆ.

ಆದರೆ, ದೇಶದಲ್ಲೇ ಪ್ರಥಮ ಬಾರಿಗೆ ರೈತರ ಕೈಗೆ ಪಹಣಿ ದಾಖಲೆಗೆ ಸರಕಾರ ಅವಕಾಶ ನೀಡಿದೆ. ಆದರೆ, ಬಳಕೆ ಹೊತ್ತಿನಲ್ಲಿ ಒಂದಿಷ್ಟು ಕಿರಿಕಿರಿ,ಗೊಂದಲಗಳ ಜೊತೆಗೇ ತ್ರಾಸು ಇದೆ. ಆದರೆ, ಸ್ಮಾರ್ಟ್‌ ಮೊಬೈಲ್‌ನಲ್ಲಿ ಬೆಳೆ ದಾಖಲಿಸಲು ಬೆಳೆಗಾರಮುಂದಾದರೆ ಆರಂಭದಲ್ಲೇ ಹಲವು ವಿಘ್ನ ಉಂಟಾಗುತ್ತಿವೆ. ರೈತರಿಗೆ ಇಡೀ ತೋಟ ಓಡಾಟ ಮಾಡುವಂತಾಗಿದೆ.

ಮರಳಿ ಯತ್ನ ಮಾಡು!: ಬೆಳೆ ಸರ್ವೇ ಆ್ಯಪ್‌ ಡೌನ್‌ಲೋಡ್‌ ಆದ ಬಳಿಕ ಹೆಸರು, ಮೊಬೈಲ್‌ ನಂಬರ್‌ ದಾಖಲಿಸಿದ ಬಳಿಕ ಒಟಿಪಿ ಬರುತ್ತದೆ. ಅಲ್ಲಿ ತನಕ ಇಂಟರ್‌ನೆಟ್‌ ನೆಟ್‌ವರ್ಕ್‌ ಇದ್ದರೂ ನಾಲ್ಕು ಸಂಖ್ಯೆಯ ಓಟಿಪಿ ದಾಖಲಿಸಲು ಮುಂದಾದರೆ ಮೊಬೈಲ್‌ ಗೆ ಇಂಟರ್‌ನೆಟ್‌ ಸಿಕ್ತಿಲ್ಲ ಎಂದು ಆಂಗ್ಲ ಭಾಷೆಯಲ್ಲಿ ಹೇಳುತ್ತದೆ! ಈ ಸಮಸ್ಯೆಯಿಂದ ಎಷ್ಟೋಮಾದರಿಯ ಸ್ಮಾರ್ಟ್‌ ಮೊಬೈಲ್‌ ಆ್ಯಪ್‌ ಬಳಕೆಯಿಂದ ದೂರ ಉಳಿಯುವಂತೆಯೂ ಆಗಿದೆ ಎಂಬ ಅಸಮಾಧಾನದ ಮಾತುಗಳೂ ಕೇಳಿ ಬಂದಿವೆ. ಕೆಲವು ಮೊಬೈಲ್‌ಗೆ ಹತ್ತಾರು ಸಲ ದಾಖಲಿಸಿದ ಬಳಿಕ, ಪುನಃ ಓಟಿಪಿ ಪಡೆದ ಬಳಿಕ ನಂಬರ್‌ ಬರುವದೂ ಆಗಿದೆ!

ತೋಟ ಅಲೆಸುತ್ತೆ!: ಮಳೆಗಾಲ ಆಗಿದ್ದರಿಂದ ಅಡಕೆ, ತೋಟ, ಭತ್ತದ ಗದ್ದೆ ಓಡಾಟ ಮಾಡುವುದೂ ಕಷ್ಟವೇ. ಆದರೆ, ಕೈಲಿ ಮೊಬೈಲ್‌ ಹಿಡಿದುಕೊಂಡು ಸರ್ವೇ ನಂಬರ್‌ ದಾಖಲಿಸಿ ಫೋಟೊ ಹಾಗೂ ಇತರ ವಿವರ ದಾಖಲಿಸಲು ಒಮ್ಮೆ ಬಂತೆಂದು ನಿಂತಲ್ಲೇ ನಿಂತರೂ ನೀವು ನಿಮ್ಮ ಕೃಷಿ ಭೂಮಿಯ ಒಳಗೆ ಹೋಗಿ ಎಂಬ ಹೇಳಿಕೆ ಬರುತ್ತದೆ. ಒಂದು ಬೆಳೆ ದಾಖಲಿಸಿದ ಬಳಿಕ ಮತ್ತೂಂದು ಬೆಳೆ ದಾಖಲಿಸು ಇಡೀ ತೋಟ ಓಡಾಟ ಮಾಡಿದರೂ ಜಿಪಿಎಸ್‌ ಲಿಂಕ್‌ ಸಿಗದೇ ಒದ್ದಾಟ ಮಾಡಬೇಕಾಗಿದೆ. ಒಂದು ಬೆಳೆಯ ಮಾಹಿತಿ ಭರಣ ಮಾಡಲು ಒಂದು ತಾಸು ಜಿಪಿಎಸ್‌ ಹುಡುಕಾಟ ನೆಡಸಬೇಕಾಗುತ್ತದೆ. ಇದರ ಜೊತೆಗೆ ಬೆಳೆ ವಿವರಗಳ ಕೋಡ್‌ ಹುಡುಕಿ ದಾಖಲಿಸಲು ಸಮಯಬೇಕು.

ಯಾವುದು ಮುಖ್ಯ ಬೆಳೆ?: ಮೊಬೈಲ್‌ ಆ್ಯಪ್‌ ಬಳಸುವ ರೈತರಲ್ಲಿ ಇನ್ನೊಂದು ಗೊಂದಲ ಬೆಳೆಗಾರರಲ್ಲಿ ಮೂಡಿದೆ. ಮುಖ್ಯ ಬೆಳೆ ಹಾಗೂ ಅಂತರ ಬೆಳೆಗಳ ಮಾಹಿತಿ ದಾಖಲಿಸಲು ಎರಡರಡಿಯೂ ಒಂದೇ ಬರಲಿದೆ. ಮುಖ್ಯ ಬೆಳೆ/ ಅಂತರ ಬೆಳೆ ಎರಡೂಒಂದೇ ತೋರಲಿದೆ. ಅಡಕೆ ಮುಖ್ಯ  ಬೆಳೆಯಾದರೆ ಅದರ ಜೊತೆಗೆ ಕಾಳು ಮೆಣಸು, ಏಲಕ್ಕಿ, ಕೊಕ್ಕೋ ಕೂಡ ಮುಖ್ಯ ಬೆಳೆಯಷ್ಟೇ ದಾಖಲಿಸಲು ಅವಕಾಶ ಇದೆ. ಮೊದಲೆಲ್ಲ ಎಕರೆ ಅಡಕೆ ಜೊತೆಗೆ ಮೆಣಸು, ಏಲಕ್ಕಿ, ಕಾಳು ಮೆಣಸುಗಳನ್ನು 5, 10 ಗಂಟಾದಲ್ಲಿ ದಾಖಲಿಸಲಾಗುತ್ತಿತ್ತು. ಆದರೆ, ಈಗ ಕ್ಷೇತ್ರ ವಿಸ್ತಾರ ಕೂಡ ಆಗಲಿದೆ. ಸ್ವತಃ ಫೋಟೊ ಕೂಡ ಬಯಸುವುದರಿಂದ ಪುರಾವೆಗಳಿಗೆ ತೊಂದರೆ ಇಲ್ಲ. ಇನ್ನು ಒಂದು ಮಾಹಿತಿ ತಪ್ಪು ದಾಖಲಾದರೂ, ಮೊಬೈಲ್‌ ನಂಬರ್‌ ತಪ್ಪು ದಾಖಲಿಸಿದರೂ ಬೆಳೆ ದರ್ಶಕದಲ್ಲಿ ಅದೇ ನಂಬರ್‌ ಉಳಿಯುವ ಅಪಾಯವೂ ಇದೆ.

ಮಳೆಯ ಕಾರಣದಿಂದ ಜಿಪಿಎಸ್‌ ತೊಂದರೆ ಆಗುತ್ತಿರಬಹುದು. ಆದರೆ, ಇಡೀ ತೋಟ ಓಡಾಟ ಮಾಡಿ ನೂರಾರು ಸಲ ಚೆಕ್‌ ಮಾಡಬೇಕಾಗುತ್ತದೆ. ಒಂಥರಾ ಕಿರಿಕಿರಿ ಆಗಬಹದು. ಮುಖ್ಯ ಬೆಳೆ ಸಮಸ್ಯೆ ಕೂಡ ಇದೆ. ಅಡಕೆ ಇದ್ದಲ್ಲಿ ಮುಖ್ಯಬೆಳೆ ಕಾಳು ಮೆಣಸು ಆಗುವ ಅಪಾಯವಿದೆ. -ಹೆಸರು ಹೇಳಲಿಚ್ಛಿಸದ ಅಧಿಕಾರಿ

ಪಹಣಿಯಲ್ಲಿ ಒಂದು ಗಿಡ ಕೂಡ ದಾಖಲಿ ಸಲು ಅವಕಾಶ ಇರುವದು ಬೆಳೆಗಾರರ ನೆಮ್ಮದಿಗೆ ಕಾರಣವಾಲಿದೆ. ಇದು ಭವಿಷ್ಯದ ಬೆಳೆಸಾಲ, ಬೆಳೆವಿಮೆಗಳಿಗೆ ಅವಕಾಶ ಸಿಗಲಿ. -ಗಣಪತಿ ವೆಂ. ಹೆಗಡೆ ಸಾಲೇಕೊಪ್ಪ, ರೈತ

 

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.