ಕಾರವಾರ : ನಾಳೆ ಹಸೆಮಣೆ ಏರಬೇಕಿದ್ದ ಯುವಕ ಕೋವಿಡ್ ಸೋಂಕಿಗೆ ಬಲಿ
Team Udayavani, May 3, 2021, 11:24 PM IST
ಕಾರವಾರ : ಮದುವೆಯ ಮುನ್ನ ದಿನ ಯುವಕನೊಬ್ಬ ಕೋವಿಡ್ ಸೋಂಕಿಗೆ ಬಲಿಯಾದ ಘಟನೆ ಕಾರವಾರದ ನಂದನಗದ್ದಾದಲ್ಲಿ ನಡೆದಿದೆ.
ರೋಷನ್ ಪಡವಳಕರ್ (30) ಮೃತ ಯುವಕ. ರೋಷನ್ ಕಳೆದ ತಿಂಗಳ ಹಿಂದೆಯಷ್ಟೇ ಪುಣೆಯಿಂದ ಮದುವೆಯ ನಿಮಿತ್ತ ಬಂದಿದ್ದರು. ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೀಗ ಕೋವಿಡ್ ರೋಷನ್ ನನ್ನು ಬಲಿ ಪಡೆದುಕೊಂಡಿದೆ.
ಅಂದುಕೊಂಡಂತೆ ಆಗಿದ್ದರೆ ರೋಷನ್ ನಾಳೆ ಹಸೆಮಣೆ ಏರಬೇಕಿತ್ತು.ಅವರ ವಿವಾಹ ನಾಳೆ ನಿಗದಿಯಾಗಿತ್ತು.ಪುಣೆಯಿಂದ ಬಂದಾಗ ಅನಾರೋಗ್ಯಕ್ಕೆ ಒಳಗಾದ ರೋಷನ್ ಸ್ಥಳೀಯ ಖಾಸಗಿ ಕ್ಲಿನಿಕ್ ನಲ್ಲಿ ಪರೀಕ್ಷಿಸಿದಾಗ ಟೈಫಾಯ್ಡ್ ಇರಬಹುದು ಎಂದು ಹೇಳಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಸೋಮವಾರ ಅನಾರೋಗ್ಯ ಹೆಚ್ಚಾದಾಗ, ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ರೋಷನದ ಕೊನೆಯುಸಿರು ಎಳೆದಿದ್ದಾರೆ. ಬಳಿಕ ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ಇರುವುದಯ ದೃಢವಾಗಿದೆ.