ಸಿವಿಲ್ ಕಾಮಗಾರಿಯಲ್ಲಿ ದುಡಿದದ್ದು ಜಿಎಸ್ಟಿ ಪಾಲು
Team Udayavani, Aug 30, 2019, 12:11 PM IST
ಕಾರವಾರ: ಎಸ್ಸಿಎಸ್ಟಿ ಗುತ್ತಿಗೆದಾರರ ತಾಲೂಕು ಸಂಘಟನೆ ಅಧ್ಯಕ್ಷ ದೀಪಕ್ ಕುಡಾಳಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾರವಾರ: ದಲಿತ ಸಮುದಾಯದ ಗುತ್ತಿಗೆದಾರರು ಸಿವಿಲ್ ಕಾಮಗಾರಿಗಳಲ್ಲಿ ದುಡಿದದ್ದರ ಹೆಚ್ಚಿನ ಪಾಲು ಜಿಎಸ್ಟಿ ಕಟ್ಟಲು ಹೋಗುತ್ತದೆ. ಇದನ್ನು ಸರ್ಕಾರ ಸರಿಪಡಿಸಬೇಕು. ಗುತ್ತಿಗೆ ಪಡೆಯಲು ನಾವು ಸಂಘಟಿತರಾಗಬೇಕಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದ ಸಂಘಟನೆ ಕಟ್ಟುವ ಚಿಂತನೆ ನಡೆದಿದೆ ಎಂದು ಎಸ್ಸಿಎಸ್ಟಿ ಗುತ್ತಿಗೆದಾರರ ತಾಲೂಕು ಸಂಘಟ ನೆ ಅಧ್ಯಕ್ಷ ದೀಪಕ್ ಕುಡಾಳಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಪಯೋಗಿ ಇಲಾಖೆ ಎಸ್.ಆರ್ ದರದ ಕಾಮಗಾರಿ ನೀಡಿದ್ದು, ಉದಾಹರಣೆಗೆ ಹತ್ತು ಲಕ್ಷದ ಕಾಮಗಾರಿ ಮಾಡಿದರೆ ಅದರಲ್ಲಿ ಶೇ.2 ಜಿಎಸ್ಟಿ ಕಡಿತಗೊಳಿಸುತ್ತಾರೆ, ನಂತರ ನಮ್ಮ ಕಡೆಯಿಂದ ಶೇ.10 ರಷ್ಟು ಜಿಎಸ್ಟಿ ತುಂಬಲು ಹೇಳುತ್ತಾರೆ. ಹಾಗಾಗಿ ದುಡಿದ ಹಣವೆಲ್ಲಾ ಜಿಎಸ್ಟಿ ಪಾಲಾಗುತ್ತದೆ. ಇದರ ವಿರುದ್ಧ ಹೋರಾಟ ರೂಪಿಸಲು ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘಟನೆ ಜಿಲ್ಲಾ ಮಟ್ಟದಲ್ಲಿ ಬಲಪಡಿಸಲು ಯೋಚನೆ ನಡೆದಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ದಲಿತ ಗುತ್ತಿಗೆದಾರರು ಒಗ್ಗಟ್ಟಾಗಬೇಕಿದೆ ಎಂದು ಕುಡಾಳಕರ್ ಹೇಳಿದರು.
2019 ಮಾರ್ಚ್ ನಂತರ ಬಂದಿರುವ ಕಾಮಗಾರಿಯಲ್ಲಿ (ಕಟ್ಟಡ ಕಾಮಗಾರಿ ಹೊರತು ಪಡಿಸಿ) ಉಳಿದ ಕಾಮಗಾರಿಗಳಿಗೆ ಶೇ.12 ರಷ್ಟು ಜಿಎಸ್ಟಿ ನೀಡಿರುತ್ತಾರೆ. ಆದರೆ ಎಸ್ಸಿಎಸ್ಟಿ ಗುತ್ತಿಗೆದಾರರಿಗೆ ಮಾರ್ಚ್ 2019ರ ಹಿಂದಿನ ಕಾಮಗಾರಿಗಳಿಗೆ ಜಿಎಸ್ಟಿ ಕೈಬಿಡಬೇಕು ಎಂದು ಆಗ್ರಹಿಸಿದರು.
2015-16 ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿದ್ದಾಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಶೇ.24.75ರ ಅನುಪಾತದಲ್ಲಿ 50 ಲಕ್ಷದ ವರೆಗಿನ ಸರ್ಕಾರಿ ಕಾಮಗಾರಿಯನ್ನು (ಪಿಡಬ್ಲೂಡಿ, ಜಿ.ಪಂ. ತಾ.ಪ. ನಗರಸಭೆ ಇತ್ಯಾದಿ ಇಲಾಖೆ) ನೀಡಲು ಆದೇಶ ಹೊರಡಿಸಿದ್ದು ಅದಕ್ಕೆ ನಾವು ಸ್ವಾಗತಿಸುತ್ತಿದ್ದೇವೆ.
ಸರ್ಕಾರಿ ಆದೇಶದ ಪ್ರಕಾರ ಕಾಮಗಾರಿಯ ಶೇ.25ರಷ್ಟು ಸಮಾನಾಂತರ ಕಾಮಗಾರಿ ಪ್ರಮಾಣ ಪತ್ರ ನೀಡಲು ಸೂಚಿಸಿದ್ದು, ಇದರಿಂದಾಗಿ ದಲಿತ ಗುತ್ತಿಗೆದಾರರಿಗೆ ಕಾಮಗಾರಿ ಟೆಂಡರ್ ಹಾಕಲು ತೊಂದರೆಯಾಗುತ್ತಿತ್ತು. ಇದರಿಂದಾಗಿ ಕಾಮಗಾರಿಯ ಟೆಂಡರ್ 1, ಟೆಂಡರ್ 2 ಕರೆ ನೀಡಿ 3ನೇ ಕರೆಯನ್ನು ಸಾಮಾನ್ಯ ಗುತ್ತಿಗೆದಾರರಿಗೆ ನೀಡುತ್ತಿದ್ದರು.
ಇದೀಗ ನೀಡಿರುವ ಆದೇಶದ ಪ್ರಕಾರ ಸಮಾನಾಂತರ ಕಾಮಗಾರಿ ರದ್ದುಗೊಳಿಸಿ ಯಾವುದೇ ಕಾಮಗಾರಿ ಪ್ರಮಾಣ ಪತ್ರವನ್ನು ನೀಡಿ ಕೆಲಸವನ್ನು ಮಾಡಲು ಅವಕಾಶ ನೀಡಿರುತ್ತಾರೆ ಎಂದರು.
ತೊಂದರೆ ನಿವಾರಣೆಗೆ ಸಂಘಟನೆ: ಅದೇ ರೀತಿಯಾಗಿ ಅನೇಕ ತೊಂದರೆಗಳ ನಿವಾರಣೆಗೆ ದಲಿತ ಗುತ್ತಿಗೆದಾರರು ಕಾರವಾರ ತಾಲೂಕಿನಲ್ಲಿ ಸಂಘಟನೆ ಮಾಡಿಕೊಂಡಿರುತ್ತೇವೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಎಸ್ಸ್ಸಿಎಸ್ಟಿ ಗುತ್ತಿಗೆದಾರರು ಆಯಾ ತಾಲೂಕಿನಲ್ಲಿ ಸಂಘಟನೆ ರಚಿಸಿ ಜಿಲ್ಲಾ ಸಂಘಟನೆಯನ್ನು ಮಾಡಲು ಸಹಕರಿಸಬೇಕಿದೆ.
ಹೆಚ್ಚಿನ ವಿವರಗಳಿಗೆ ದೀಪಕ ಕುಡಾಳಕರ 9448628953, ಕಾರ್ಯದರ್ಶಿ ಎಲಿಷಾ ಯಲಕಪಾಟಿ 9036837532 ಇವರನ್ನು ಸಂಪರ್ಕಿ ಸಬೇಕೆಂದು ವಿನಂತಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರವಾರ ತಾಲೂಕಿನ ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಲಿಷಾ ಯಲಕಪಾಟಿ, ಉಪಾಧ್ಯಕ್ಷ ಧರ್ಮರಾಯ ಮುಡಸಾಲೆ, ಖಜಾಂಚಿ ಪ್ರಕಾಶ ವಡ್ಡರ, ಸದಸ್ಯರಾದ ಭೋಜರಾಜ ದೊರೆಸ್ವಾಮಿ, ರೋಹಿತ ವೆಂಕಟೇಶ, ಚಿನ್ನಾ ಬಾಬು ಯಲಕಪಾಟಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..