ಹೆಚ್ಚಿದ ಸಂಚಾರ; ಮರೆತರು ಅಂತರ
Team Udayavani, Apr 9, 2020, 3:04 PM IST
ಹಳಿಯಾಳ: ಪಟ್ಟಣದ ಬ್ಯಾಂಕ್ವೊಂದರ ಬಳಿ ಜನಜಂಗುಳಿ
ಹಳಿಯಾಳ: ಕಳೆದೆರಡು ದಿನಗಳಿಂದ ಪಟ್ಟಣದಲ್ಲಿ ಜನಸಂಚಾರ ಹೆಚ್ಚಿದ್ದು, ಬೈಕ್ ಗಳ ಓಡಾಟ ಮಿತಿ ಮೀರಿರುವುದು ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಜನಧನ ಖಾತೆಗೆ 500 ರೂ. ಹಾಕಿದ್ದು ಅದನ್ನು ಬೇಗ ತೆಗೆದುಕೊಳ್ಳದಿದ್ದರೆ ವಾಪಸ್ ಹೋಗುತ್ತದೆ ಎಂಬ ವದಂತಿ ನಂಬಿ ಜನರು ಬ್ಯಾಂಕ್ಗಳಿಗೆ ಮುಗಿಬೀಳುತ್ತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಿದ್ದಾರೆ. ಪುರಸಭೆಯಿಂದ ಹಾಲು, ತರಕಾರಿ, ಕಿರಾಣಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ಸುಮಾರು 300 ಪಾಸ್ ಗಳನ್ನು ನೀಡಲಾಗಿದೆ. ಎಪಿಎಮ್ಸಿಯಿಂದ ರೈತರಿಗೆ 70ಕ್ಕೂ ಹೆಚ್ಚು ಪಾಸ್, ತಹಶೀಲ್ದಾರ್ ಕಚೇರಿಯಿಂದ 150ಕ್ಕೂ ಹೆಚ್ಚು ಪಾಸ್ ಪೂರೈಸಲಾಗಿದೆ. ಕೆಲವರು ಪಾಸ್ಗಳ ದುರುಪಯೋಗ ಪಡೆದು ವಿನಾಕಾರಣ ಸುತ್ತಾಡುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಐದು ಪ್ರಮುಖ ಸ್ಥಳ ಗುರುತಿಸಿ ನಾಕಾಬಂಧಿ ಮಾಡಿ ಜನರ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಮಂಗಳವಾರ ಹಾಗೂ ಬುಧವಾರ ಸ್ವತಃ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರೇ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿದ್ದು ಪರಿಶೀಲನೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ