ಕೋಡಿ ಕಡಿದ ನದಿಬಾಗ ಗ್ರಾಮಸ್ಥರು
ಪ್ರತಿ ಮಳೆಗಾಲದಲ್ಲಿ ಸಮುದ್ರದ ಅಲೆಯ ರಭಸಕ್ಕೆ ಮುಚ್ಚಿ ಹೋಗುವ ಹಳ್ಳದ ಹಿನ್ನೀರ ಪ್ರದೇಶ
Team Udayavani, Jun 14, 2021, 5:43 PM IST
ಅಂಕೋಲಾ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳದ ಹಿನ್ನೀರು ಏರುತ್ತಿದ್ದು, ಈ ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿರುವ ಕಾರಣ ನದಿಬಾಗ ಗ್ರಾಮಸ್ಥರೆಲ್ಲ ಹಳ್ಳ ಸಮುದ್ರ ಸೇರುವ ಕೋಡಿ ಕಡಿದು ದಾರಿ ಮಾಡಿ ಕೊಟ್ಟಿದ್ದಾರೆ.
ತಾಲೂಕಿನ ನದಿಬಾಗ ಪ್ರದೇಶದಲ್ಲಿ ರವಿವಾರ ಸಂಜೆ ಗ್ರಾಮದ ಯುವಕರು ಹಿರಿಯರು ಸೇರಿ ಕೋಡಿ ಕಡಿದಿದ್ದಾರೆ. ಬೇಸಿಗೆಯಲ್ಲಿ ಹಳ್ಳ ಹರಿದು ಸಮುದ್ರ ಸೇರುವ ಕೋಡಿ ಸಮುದ್ರದ ಅಲೆಯ ರಭಸಕ್ಕೆ ಉಸುಕಿನಿಂದ ಮುಚ್ಚಿ ಹೊಗುತ್ತದೆ. ಅದನ್ನು ಮಳೆಗಾಲದಲ್ಲಿ ಹಳ್ಳದ ಹಿನ್ನೀರಿನ ಪ್ರದೇಶವಾದ ಕೃಷಿ ಜಮೀನು ಹಾಗೂ ತಟದಲ್ಲಿರುವ ಮನೆಗಳಿಗೆಲ್ಲ ನೀರು ಒಳನುಗ್ಗುತ್ತದೆ.
ವಂದಿಗೆ, ಹೊಸಗದ್ದೆ, ಬೆಟ್ಟದ ಮೇಲಿನಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಇದೇ ಹಳ್ಳದಿಂದ ಸಮುದ್ರ ಸೇರಬೇಕು. ಆರಂಭದ ಮಳೆಗೆ ಹಳ್ಳ ತುಂಬುತ್ತಿರುವುದನ್ನು ಕಂಡು ನದಿಬಾಗ ಗ್ರಾಮಸ್ಥರು ಪ್ರತಿವರ್ಷ ಕೋಡಿ ಕಡಿಯುತ್ತಾರೆ. ಸುಮಾರು ಹತ್ತು ಗಂಟೆ ಕೆಲಸ ಮಾಡಿ ಹಳ್ಳದ ಹಿನ್ನೀರನ್ನು ಸಮುದ್ರದ ಒಡಲಿಗೆ ಸೇರಿಸುತ್ತಾರೆ.
ಬೊಬ್ರವಾಡಾ ಗ್ರಾಪಂ ಕೋಡಿ ಕಡಿಯುವುದಕ್ಕೆ ಸಹಾಯಧನವಾಗಿ ಹತ್ತು ಸಾವಿರ ರೂ. ಕೊಡುವುದು ಬಿಟ್ಟರೆ ಸರಕಾರದಿಂದ ಇನ್ನಾವುದೇ ಅನುದಾನ ಬರುತ್ತಿಲ್ಲ. ಇದು ನಾಲ್ಕು ಗ್ರಾ.ಪಂ.ಗೆ ಸಂಬಂಧಿಸಿದ್ದಾದರು ಒಂದೇ ಗ್ರಾ.ಪಂ ಮಾತ್ರ ಇದರಲ್ಲಿ ಬಾಗಿಯಾಗುತ್ತದೆ. ಕೋಡಿ ಕಡಿಯುವುದು ಒಂದು ಅಪಾಯದ ಕೆಲಸವಾದರು ಗ್ರಾಮಸ್ಥರು ಈ ಕಾರ್ಯ ಮಾಡಿ ಜನರ ಆತಂಕ ದೂರ ಮಾಡುತ್ತಾರೆ. ಬೊಬ್ರವಾಡಾ ಗ್ರಾ.ಪಂ ಅಧ್ಯಕ್ಷೆ ಸೀಮಾ ನಾಯ್ಕ, ಸದಸ್ಯ ನಾಗೇಂದ್ರ ನಾಯ್ಕ, ಮಾಜಿ ಸದಸ್ಯ ಅರುಣ ನಾಯ್ಕ, ಲೋಹಿತ ಆನಂದು ಬಂಟ, ದೀಪಾ ನಾಯ್ಕ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ