ಜೇನು ಹಬ್ಬ: ಮಕ್ಕಳಿಗೆ ಜೇನು ಕೃಷಿ ಮಾಹಿತಿ
Team Udayavani, May 23, 2019, 5:18 PM IST
ಜೋಯಿಡಾ: ಜೇನು ಕೃಷಿಕರಿಗೆ ಶಿರಸಿ ಪ್ರಕೃತಿ ಸಂಸ್ಥೆಯ ಪಾಂಡುರಂಗ ಹೆಗಡೆ ಮಾಹಿತಿ ನೀಡಿದರು.
ಜೋಯಿಡಾ: ತಾಲೂಕಿನ ಡೇರಿ ಗ್ರಾಮದಲ್ಲಿ ಪ್ರಕೃತಿ ಸಂಸ್ಥೆ ಶಿರಸಿ ಮತ್ತು ಜೇನು ಸಾಕಣಿಕೆದಾರರ ಸಂಘ ಡೇರಿ ಸಂಯುಕ್ತ ಆಶ್ರಯದಲ್ಲಿ ಜೋಯಿಡಾ ತಾಲೂಕಿನ ಪ್ರಥಮ ಜೇನು ಹಬ್ಬ ಆಚರಿಸಲಾಯಿತು.
ಡೇರಿಯಾ, ಕಾಟೇಲ, ವಾಗಬಂಧ, ಮುಡಿಯಾ, ಗೋಡಶೇತ ಮೈನೋಳ ಮತ್ತು ಲಾಂಡೆ ಗ್ರಾಮದ ಜೇನು ಕೃಷಿಕರು ಹಬ್ಬದಲ್ಲಿ ಭಾಗವಹಿಸಿದ್ದರು. ಪ್ರಕೃತಿ ಸಂಸ್ಥೆ§ಯ ಪಾಂಡುರಂಗ ಹೆಗಡೆ ಜೇನು ಸಾಕಣಿಕೆ ವೈಜ್ಞಾನಿಕವಾಗಿ ಮತ್ತು ಲಾಭದಾಯಕವಾಗಿ ಮಾಡುವುದರ ಕುರಿತಿ ಮಾಹಿತಿ ನೀಡಿದರು. ಜೇನು ಕೃಷಿಕ ಯಲ್ಲಾಪುರದ ಧರ್ಮೇಂದ್ರ ಹೆಗಡೆ ಜೇನು ಪೆಟ್ಟಿಗೆಯಿಂದ ಜೇನು ಸಾಕಣಿ ಮತ್ತು ಅದರ ವೃದ್ಧಿ ಹಾಗೂ ರಕ್ಷಣೆ ಕುರಿತು ಮಾಹಿತಿ ನೀಡಿದರು.
ಜೋಯಿಡಾ ತಾಲೂಕು ಕುಣಬಿ ಸಮಾಜ ಅಧ್ಯಕ್ಷ ಜಯಾನಂದ ಡೇರೇಕರ ಜೋಯಿಡಾ ತಾಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿರುವ ಕುಣಬಿ ಸಮುದಾಯದವರು ತಮ್ಮ ಕೃಷಿಯೊಂದಿಗೆ ಜೇನು ಸಾಕಣಿಕೆ ಮೂಲಕ ಕುಟುಂಬದ ಆದಾಯ ಹೆಚ್ಚಿಸಲು ಇರುವ ಅವಕಾಶಗಳ ಕುರಿತು ವಿವರಿಸಿದರು. ಜಿಪಂ ಸದಸ್ಯ ರಮೇಶ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಯಲ್ಲಾಪುರದ ಜೇನು ಕೃಷಿಕ ಆರ್. ಜಿ. ಹೆಗಡೆ, ಕರ್ನಾಟಕ ಮುಕ್ತ ವಿವಿಯ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಆರ್. ಪೂರ್ಣಿಮಾ, ಡೇರಿಯಾ ಗ್ರಾಮದ ಹಿರಿಯರಾದ ನಾನಾ ಡೇರೇಕರ, ಡೇರಿಯಾ ಗ್ರಾಮದ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಕೃತಿ ಸಂಸ್ಥೆಯ ಆರ್.ಪಿ. ಹೆಗಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?