ಅಂಕೋಲಾ: ಅಪರಿಚಿತ ವಾಹನ ಢಿಕ್ಕಿಯಾಗಿ ಎರಡು ಆಕಳು ಒಂದು ಕರು ಸಾವು
Team Udayavani, Jul 25, 2022, 6:50 PM IST
ಅಂಕೋಲಾ: ಯಾವುದೋ ಅಪರಿಚಿತ ವಾಹನವೊಂದು ಬಡಿದ ಪರಿಣಾಮ 2 ಆಕಳು ಮತ್ತೊಂದು ಕರು ದುರ್ಮರಣಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ವಂದನಾ ಹೊಟೇಲ್ ಬಳಿ ನಡೆದಿದೆ.
ನಸುಕಿನ 4 ಗಂಟೆಯ ನಂತರ ಯಾವುದೋ ವಾಹನ ಬಡಿದಿರಬಹುದು ಎನ್ನಲಾಗಿದ್ದು ಅಪಘಾತದ ತೀವ್ರತೆಗೆ ಮೂರೂ ದನಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ. ಒಂದು ಆಕಳು ಮತ್ತು ಕರು ಒಂದು ಕಡೆ ಬಿದ್ದಿದ್ದರೆ ಅಲ್ಲಿಂದ 20 ಅಡಿ ದೂರದಲ್ಲಿ ಇನ್ನೊಂದು ತುಂಬು ಗರ್ಭ ಹೊತ್ತ ಆಕಳು ಬಿದ್ದಿದೆ.
ಈ ದನಗಳು ಯಾರದ್ದೆಂದು ತಿಳಿದು ಬಂದಿಲ್ಲ. ಒಂದುವೇಳೆ ಸ್ಥಳೀಯರದ್ದಾಗಿರದಿದ್ದರೆ ಯಾವುದೋ ವಾಹನದಲ್ಲಿ ಸಾಗಿಸುತ್ತಿರುವಾಗ ಮೇಲಿಂದ ಬಿದ್ದಿರಬಹುದೇ ಎಂಬ ಅನುಮಾನವೂ ಬರಲಿದೆ. ದನಗಳು ಯಾವುದೇ ತರಚಿದ ಗಾಯಗಳಾಗಿರದೆ ಮೇಲಿಂದ ಬಿದ್ದು ಸತ್ತಿರುವಂತೆಯೂ ತೋರುತ್ತದೆ. ಎರಡು ವರ್ಷದ ಹಿಂದೆ ಪಿ.ಎಸ್.ಐ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆಯುವ ದನಗಳು ಚಾಲಕರಿಗೆ ಕಾಣಲೆಂದು ದನಗಳ ಕುತ್ತಿಗೆಗೆ ರೇಡಿಯಂ ರಿಫ್ಲೆಕ್ಟರ್ ಗಳನ್ನು ಅಳವಡಿಸಿದ್ದರು. ಅಲ್ಲಿಂದ ಹೆದ್ದಾರಿಯಲ್ಲಿ ದನಗಳ ಅಪಘಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇಂದಿನ ಘಟನೆ ಮತ್ತೆ ಹೆದ್ದಾರಿಯಲ್ಲಿ ಸಂಚರಿಸುವ ದನಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಹೆದ್ದಾರಿ ಸಮೀಪ ಮನೆಗಳಿದ್ದವರು ತಮ್ಮ ದನಗಳನ್ನು ರಾತ್ರಿಯ ವೇಳೆ ಕಟ್ಟಿಹಾಕಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ 1033 ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ನವೀನ್ ಪಡ್ತಿ, ಭಾಗೇಶ ನಾಯ್ಕ, ಬಂಟಾ ನಾಯ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ಸತೀಶ ನಾಯ್ಕ ಹನುಮಟ್ಟಾ, ಲಕ್ಷ್ಮೇಶ್ವರದ ಚಿನ್ನದಗರಿ ಯುವಕ ಸಂಘದವರು ಸಹಕರಿಸಿದರು. ಪುರಸಭೆಯ ಪೌರಕಾರ್ಮಿಕರು ದನದ ಕಳೇಬರವನ್ನು ಸಾಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ