ಅನುಷ್ಠಾನ ವಿಳಂಬದಿಂದ ವೆಚ್ಚದಲ್ಲಿ ಹೆಚ್ಚಳ

•ಗಂಗಾವಳಿ ನದಿಗೆ ಕಿರು ಕಿಂಡಿ ಅಣೆಕಟ್ಟು ನಿರ್ಮಿಸದಿದ್ದರೆ ನೀರು ಸಮಸ್ಯೆ ನಿವಾರಣೆ ಕಷ್ಟ

Team Udayavani, May 15, 2019, 2:02 PM IST

uk-ydy-1..

ಕಾರವಾರ: ಗಂಗಾವಳಿ ನದಿಯ ನೀರಿನ ಮಟ್ಟ (ಹೊನ್ನಾಳಿ ಜಲ ಸಂಗ್ರಹಗಾರದ ಸಮೀಪದ ಚಿತ್ರ)

ಕಾರವಾರ: ಕುಡಿಯುವ ನೀರಿಗಾಗಿ ಗಂಗಾವಳಿ ನದಿಗೆ ಹೊನ್ನಳ್ಳಿ ಬಳಿ 9 ರಿಂದ 10 ಮೀಟರ್‌ ಎತ್ತರದ ಕಿರು ಕಿಂಡಿ ಅಣೆಕಟ್ಟು (ವೆಂಟೆಡ್‌ ಬ್ಯಾರೇಜ್‌) ಕಟ್ಟುವ ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. 100 ಕೋಟಿ ರೂ. ವೆಚ್ಚದ ಯೋಜನೆ 158 ಕೋಟಿ ರೂ.ದಾಟಿದೆ.

ಗಂಗಾವಳಿ ಬಲದಂಡೆಗೆ ಬರುವ ಗುಂಡಬಾಳ, ಎಡದಂಡೆಗೆ ಬರುವ ಅಗಸೂರು ಮಧ್ಯೆ ವೆಂಟೆಡ್‌ ಡ್ಯಾಮ್‌ ನಿರ್ಮಿಸಬೇಕಿದ್ದು, ಇದಕ್ಕಾಗಿ 35 ಹೆಕ್ಟೇರ್‌ ಅರಣ್ಯ ಭೂಮಿ ವಶಪಡಿಸಿಕೊಳ್ಳಬೇಕಿದೆ. ಇದಕ್ಕೆ ಪರ್ಯಾಯವಾಗಿ ಅರಣ್ಯಭೂಮಿ ಬೆಳಸಲು 35 ಹೆಕ್ಟೇರ್‌ ನೀಡಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಹುಡುಕಾಟ ನಡೆಸಿದೆ. ಅಲ್ಲದೇ 19 ಹೆಕ್ಟೇರ್‌ ಅರಣ್ಯೇತರ ಭೂಮಿ ಬೇಕಿದ್ದು, ಅದನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ನಗರ ನೀರು ಸರಬರಾಜು ಮಂಡಳಿಗೆ ನೀಡಬೇಕಿದೆ. ಗಂಗಾವಳಿ ಕಿರು ಅಣೆಕಟ್ಟಿಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಬಜೆಟ್‌ನಲ್ಲಿ ಹಣ ನೀಡಿದೆ. ಯೋಜನಾ ನೀಲನಕ್ಷೆ ನೀರು ಸಬರಾಜು ಮಂಡಳಿಯಿಂದ ರಾಜ್ಯದ ಅರಣ್ಯ ಇಲಾಖೆ ಉನ್ನತಾಧಿಕಾರಿಗಳ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಮುಂದಿದೆ. ಅರಣ್ಯ ಭೂಮಿಗೆ 35 ಹೆಕ್ಟೇರ್‌ ಪರ್ಯಾಯ ಜಾಗ ಸಿಕ್ಕರೆ, ಯೋಜನೆ ಜಾರಿಗೆ ಸಂಬಂಧಿತ ನೀಲನಕ್ಷೆ ಸಚಿವ ಸಂಪುಟದ ಮುಂದೆ ಬರಲಿದೆ.

ಕಿರು ಕಿಂಡಿ ಅಣೆಕಟ್ಟಿನ ನಿರ್ಮಾಣದಿಂದ ಮುಳುಗಡೆಯಾಗುವ ಭೂಮಿ 35 ಹೆಕ್ಟೇರ್‌ ಅರಣ್ಯ ಪ್ರದೇಶ. ಖಾಸಗಿಯವರ ಭೂಮಿ 19 ಹೆಕ್ಟೇರ್‌. ಈ ಸಮಸ್ಯೆಗೆ ಪರಿಹಾರ ಸಿಕ್ಕ ತಕ್ಷಣ ಯೋಜನೆಗೆ ಗ್ರೀನ್‌ ಸಿಗ್ನಲ್ ಸಿಗಲಿದೆ. ಐಎನ್‌ಎಸ್‌ ಕದಂಬ(ಸೀಬರ್ಡ್‌ ನೌಕಾನೆಲೆ) ವೆಂಟೆಡ್‌ ಡ್ಯಾಮ್‌ ನಿರ್ಮಾಣಕ್ಕೆ ತನ್ನ ಪಾಲಿನ 75 ಕೋಟಿ ರೂ.ನೀಡಲು ಸಹಮತ ವ್ಯಕ್ತಪಡಿಸಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ.

ದೇವಕಾರು ಬಳಿ 100 ಹೆಕ್ಟೇರ್‌ ಭೂಮಿ: ಗಂಗಾವಳಿ ನದಿಗೆ ಕಿರುಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ದೇವಕಾರು ಗ್ರಾಮವನ್ನೇ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಪರ್ಯಾಯವಾಗಿ ನೀಡಬಹುದಾಗಿದೆ. ಕೆಪಿಸಿ ದೇವಕಾರು ಬಲಿ ಕಿರು ಜಲವಿದ್ಯುತ್‌ ಯೋಜನೆಗೆ ಯೋಜಿಸಿದ ಸ್ಥಳ ದೇವಕಾರು ಫಾಲ್ಸ್ ಬಳಿಯ ಸ್ಥಳ. ಆದರೆ ಕೆಪಿಸಿ ಕೊಡಸಳ್ಳಿ, ಕದ್ರಾ ಬಳಿ ಅಣೆಕಟ್ಟು ನಿರ್ಮಾಣವಾಗುವ ವೇಳೆ ದೇವಕಾರು ಗ್ರಾಮದ ಬಳಿಯ ಅತೀ ಎತ್ತರದಿಂದ ಬೀಳುವ ಫಾಲ್ಸ್ ಮೇಲೆ ಕಣ್ಣಿಟ್ಟಿತ್ತು. ಅಲ್ಲಿ 35 ಮೆಗಾ ವ್ಯಾಟ್ ಸಾಮರ್ಥ್ಯದ ಜಲವಿದ್ಯುತ್‌ ಯೋಜನೆ ನಿರ್ಮಿಸಲು ಕೆಪಿಸಿ ಯೋಜಿಸಿತ್ತು. ನಂತರ ದಿನಗಳಲ್ಲಿ ಆ ಯೋಜನೆ ಕೈಬಿಟ್ಟಿತು. ದೇವಕಾರಿಗೆ ಕೈಗಾ ಕಡೆಯಿಂದ ಇದ್ದ ಭೂ ಮಾರ್ಗವನ್ನು ಸುರಕ್ಷತೆಗಾಗಿ ಬಂದ್‌ ಮಾಡಲಾಗಿದ್ದು, ದೇವಕಾರು ಗ್ರಾಮಸ್ಥರಿಗೆ ಪರಿಹಾರ ನೀಡಿ, ಭೂಮಿ ವಶಕ್ಕೆ ಪಡೆಯಲಾಗಿದೆ. ಆದರೂ ಕೆಲ ಕುಟುಂಬಗಳು ಅಲ್ಲಿವೆ. ಅಲ್ಲಿನ ನೂರು ಹೆಕ್ಟೇರ್‌ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬಹುದಾಗಿದೆ. ಶಿರವಾಡ ಬಳಿ ಹೆದ್ದಾರಿ ಹಾಗೂ ನಗರ ಬೆಳವಣಿಗೆ ಉದ್ದೇಶಕ್ಕಾಗಿ ಪರ್ಯಾಯವಾಗಿ ನೀಡಲಾಗಿದ್ದ ಅರಣ್ಯ ಭೂಮಿಯನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಗೆ ನೀಡಿದೆ. ಆದರೆ ಹೆದ್ದಾರಿ ಅಗಲೀಕರಣ ಹೈದರಘಾಟ್ ಮೂಲಕ ಶಿರವಾಡ ಮಾರ್ಗ ಇದ್ದ ಯೋಜನೆ ಕೈ ಬಿಡಲಾಗಿದೆ. ಹಾಗಾಗಿ ಜಿಲ್ಲಾಡಳಿತ ಅಂಗೈಯಲ್ಲೇ ಇರುವ ಬೆಣ್ಣೆಯನ್ನು ಅರಣ್ಯ ಇಲಾಖೆಗೆ ನೀಡಿ, ಗಂಗಾವಳಿ ಕಿರು ಕಿಂಡಿ ಅಣೆಕಟ್ಟು ಯೋಜನೆಯನ್ನು ಸರ್ಕಾರಕ್ಕೆ ಹೇಳಿ ಜಾರಿ ಮಾಡಿಸಿಕೊಂಡರೆ ಅಂಕೋಲಾ, ಕಾರವಾರ ನಗರಗಳ ಜನರ ನೀರಿನ ಬವಣೆ ನೀಗಲಿದೆ.

ಬತ್ತಿದ ನದಿ:ಗಂಗಾವಳಿ ನದಿ ನೀರಿನ ಮಟ್ಟ ದಿನೇದಿನೇ ಕುಸಿಯುತ್ತಿದೆ. ಇನ್ನು ಎಂಟು ದಿನಕ್ಕೆ ಬೇಕಾಗುವಷ್ಟು ಮಾತ್ರ ನೀರು ಇದೆ. ನದಿಯಲ್ಲೇ ಗುಂಡಿಗಳನ್ನು ತೋಡಿ ಅದನ್ನು ನೀರು ಸಂಗ್ರಹಗಾರಕ್ಕೆ ನೀರು ಸರಬರಾಜು ಮಂಡಳಿ ಸಾಗಿಸುತ್ತಿದೆ. ನಂತರ ನೀರನ್ನು ಪೈಪ್‌ಲೈನ್‌ ಮೂಲಕ ನಗರ ಪಟ್ಟಣಗಳಿಗೆ ಸಾಗಿಸಲಾಗುತ್ತಿದೆ.

ಕಾರವಾರ, ಸೀಬರ್ಡ್‌ ನೌಕಾನೆಲೆ ಸಿಬ್ಬಂದಿ ವಸತಿ ಪ್ರದೇಶ, ಆದಿತ್ಯ ಬಿರ್ಲಾ ವಸತಿ ಪ್ರದೇಶ, ಅಂಕೋಲಾ, ಗೋಕರ್ಣಕ್ಕೆ ಗಂಗಾವಳಿ ನದಿ ನೀರೇ ಆಸರೆ. ಆದರೆ ಗಂಗಾವಳಿಗೆ ಜಲಸಂಗ್ರಹಗಾರ ವಿರುವ ಅಗಸೂರು ಸಮೀಪದ ಹೊನ್ನಳ್ಳಿಯ ಜಲ ಸಂಗ್ರಹಗಾರದಲ್ಲಿ ನೀರು ಸಂಗ್ರಹಿಸಲು ಹರಸಾಹಸ ಪಡಲಾಗುತ್ತಿದೆ. ನದಿಗೆ ಅಕ್ರಮವಾಗಿ ಹಾಕಿಕೊಂಡಿರುವ ಪಂಪ್‌ಸೆಟ್‌ಗಳನ್ನು ಕಡಿತ ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೂ ನದಿಯ ನೀರು ಕಾರವಾರ, ಐಎನ್‌ಎಸ್‌ ಕದಂಬ ನೌಕಾನೆಲೆಗೆ ಸಾಕಾಗುತ್ತಿಲ್ಲ. ನೌಕಾನೆಲೆ ಜನವಸತಿಗೆ 30 ಲಕ್ಷ ಲೀಟರ್‌ ದಿನವೊಂದಕ್ಕೆ ಬೇಕಾಗಿದೆ. ಕಾರವಾರಕ್ಕೆ 10 ಲಕ್ಷ ಲೀಟರ್‌, ಅಂಕೋಲಾಕ್ಕೆ 10 ಲಕ್ಷ ಲೀಟರ್‌, ಬಿಣಗಾದಲ್ಲಿನ ಆದಿತ್ಯ ಬಿರ್ಲಾ ಕಂಪನಿಯ ಸಿಬ್ಬಂದಿ ವಸತಿಗೆ 10 ಲಕ್ಷ ಲೀಟರ್‌ ನೀರು ಪ್ರತಿದಿನ ಬೇಕಾಗಿದೆ. ಇದನ್ನು ಬೇಸಿಗೆಯಲ್ಲಿ ಸಹ ಆತಂಕವಿಲ್ಲದೇ ನೀರು ಸರಬರಾಜು ಮಾಡಬೇಕಾದರೆ ಗಂಗಾವಳಿ ನದಿಗೆ ಕಿರು ಅಣೆಕಟ್ಟನ್ನು ಹೊನ್ನಳ್ಳಿ ಬಳಿ ನಿರ್ಮಿಸುವುದೊಂದೇ ದಾರಿ. ಆದರೆ ಕಿರು ಅಥವಾ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನೇಕ ಅಡ್ಡಿ ಆತಂಕಗಳು ಇವೆ. ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆ ನೀಗಿಸಲು ಗಂಗಾವಳಿಯನ್ನು ಕಾಪಾಡಲು ಜಿಲ್ಲಾಡಳಿತ, ಜನತೆ ನೀರಿನ ಮಹತ್ವ ಸಾರುವ ಆಂದೋಲನವನ್ನೇ ರೂಪಿಸಬೇಕಿದೆ.

•ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.