2.65 ಲಕ್ಷದಲ್ಲಿ 1.50 ಲಕ್ಷ ಕುಟುಂಬಕ್ಕಷ್ಟೇ ಉದ್ಯೋಗ ಚೀಟಿ: ಒಂಬುಡ್ಸಮನ್ ಅಸಮಾಧಾ‌ನ


Team Udayavani, Sep 15, 2021, 2:35 PM IST

Job voucher

ಶಿರಸಿ: ಜಿಲ್ಲೆಯಲ್ಲಿ‌ 2.65 ಲಕ್ಷ‌ ಕುಟುಂಬಗಳಿದ್ದು ಕೇವಲ 1.50 ಲಕ್ಷ‌ ಕುಟುಂಬಗಳಿಗೆ‌ ಮಾತ್ರ ಉದ್ಯೋಗ ಚೀಟಿ‌ ನೀಡಲಾಗಿದೆ. ಉಳಿದ ಎಲ್ಲಾ ಅರ್ಹ ಕುಟುಂಬಕ್ಕೂ‌ ಉದ್ಯೋಗ ಚೀಟಿ‌ ನೀಡಬೇಕಿತ್ತು ಎಂದು  ಉದ್ಯೋಗ‌ಖಾತ್ರಿ‌ ಯೋಜನೆಯ ಒಂಬುಡ್ಸಮನ್ ಆರ್.ಜಿ.ನಾಯ್ಕ ಅಸಮಧಾನಿಸಿದರು.

ಬುಧವಾರ ತಾಲೂಕು ಪಂಚಾಯತ್‌ ನಲ್ಲಿ ನಡೆದ ನರೇಗಾ‌ ಒಂಬುಡ್ಸಮನ್ ಸಭೆಯಲ್ಲಿ‌ ಮಾತನಾತನಾಡಿದ ಅವರು, ಜಿಲ್ಲೆಯಲ್ಲಿ ಅರ್ಧದಷ್ಟು ಕುಟುಂಬಕ್ಕೂ ಉದ್ಯೋಗ ಚೀಟಿ ಇಲ್ಲ. ಸರಕಾರಿ ನೌಕರಿ ಹೊರತುಪಡಿಸಿ ಎಲ್ಲರಿಗೂ ಉದ್ಯೋಗ ಚೀಟಿ ಕೊಡಬಹುದು ಎಂದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೋಟದ ಏರಿ, ಹೊಸ ತೋಟ ನಿರ್ಮಾಣ, ಜಲ‌ಸಂರಕ್ಷಣೆ, ಆಟದ‌ ಮೈದಾನ ಸೇರಿದಂತೆ 260 ಮಾದರಿಯ ಕಾಮಗಾರಿ‌ ನಡೆಸಲು ಅವಕಾಶ ಇದೆ. ಅನುಷ್ಠಾನ ಅಧಿಕಾರಿಗಳು ಇದರ ಬಗ್ಗೆ‌ ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದರು.

ನಿಯಮ ಬಿಟ್ಟು‌ ಕೆಲಸ‌ ಮಾಡಲು ಅವಕಾಶ‌ ಇಲ್ಲ. ಯಾವ ಬಾಜುರಾಯ ಹೇಳಿದರೂ  ನಿಯಮ ಬಿಟ್ಟು ಕೆಲಸ‌‌ ಮಾಡಬಾರದು. ಕಳಪೆ‌ ಕಾಮಗಾರಿ, ಜೆಸಿಬಿ ಬಳಸಿದರೆ ದೂರು ನೀಡಿದರೆ‌ ಕ್ರಮ ಕೈಗೊಳ್ಳಲು ಸಿದ್ದ ಎಂದ  ಅವರು‌ ಬನವಾಸಿಯಲ್ಲಿ ಕೆರೆ ಹೂಳೆತ್ತಲು ಜೆಸಿಬಿ ಬಳಸಿದ ಕುರಿತು ದೂರಿದೆ‌ ಎಂದರು.

ಯಲ್ಲಾಪುರ‌ ಕಿರವತ್ತಿಯಲ್ಲಿ 4 ಕೋ.ರೂ. ಕೆಲಸ ಮಾಡಿದ್ದಾರೆ. ಶಿರಸಿಯಲ್ಲಿ‌ 32 ಪಂಚಾಯತಿಯಿಂದ 7 ಕೋ.ರೂ. ಕಾಮಗಾರಿ‌ ಮಾತ್ರ ಆಗಿದೆ. 75 ಕೋ.ರೂ. ಕ್ರಿಯಾ ಯೋಜನೆ ಇದೆ. ಒಂದು ಆಕಳು, ಅದರ ಒಂದು ಕರು ಇದ್ದರೂ ಕೊಟ್ಟಿಗೆ ನಿರ್ಮಾಣ ಮಾಡಲು ಸಾಧ್ಯ ಎಂದರು.

ಇದನ್ನೂ ಓದಿ:ಬಂಟರ ಸಂಘ ಮುಂಬಯಿ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ಪುರಸ್ಕಾರ ಪ್ರದಾನ

ಗ್ರಾಮೀಣ ಭಾಗದಲ್ಲಿ  ‌ಅಕೌಶಲ‌ ಕಾರ್ಮಿಕರಿಗೆ ಕೆಲಸ‌ ಕೊಡಲು, ಮಹಿಳಾ ಸಬಲೀಕರಣಕ್ಕೆ, ಸಾಮಾಜಿಕ ನ್ಯಾಯ ಕೊಡಲು ಉದ್ಯೋಗ ಖಾತ್ರಿ ಯೋಜನೆ‌ ಇದಾಗಿದೆ. ಸ್ವಾವಲಂಬಿ‌ ಬದುಕಲು, ವಲಸೆ ತಪ್ಪಿಸಲು ಇದು‌ ನೆರವಾಗಲಿದೆ. ಹಳ್ಳಿಯೇ ದೇಶದ ತಳಪಾಯ ಎಂದ ಅವರು,ಒಂಬುಡ್ಸಮನ್ ಗೆ ರಾಜ್ಯ ಸರಕಾರ ನಿಯಂತ್ರಿಸುವಂತಿಲ್ಲ. ಇದಕ್ಕೆ ಕಾನೂನು ಬದ್ದ ಅನುಮತಿ‌ ಇಲ್ಲ ಎಂದೂ ಹೇಳಿದರು.

ಉದ್ಯೋಗ ಚೀಟಿ‌ ಪಡೆಯಲು 18 ವರ್ಷ ಹಾಗೂ ಗ್ರಾಮೀಣ‌ ಭಾಗದಲ್ಲಿ ‌ಇರಬೇಕು. ಸರಕಾರಿ ನೌಕರರಿಗೆ ಕೊಡುವಂತಿಲ್ಲ. ಏಕೆಂದರೆ‌ ಸರಕಾರಿ ನೌಕರ 24 ಗಂಟೆ‌ ನೌಕರ ಇರಬೇಕು. ಉದ್ಯೋಗ ಖಾತ್ರಿಗೆ ಗ್ರಾಪಂ‌ ಅನುಷ್ಠಾನ ಅಧಿಕಾರಿಗಳು ಕೆಲಸ‌ ಮಾಡಬೇಕು. ನಮ್ಮವರಲ್ಲಿ ಈ ಬಗ್ಗೆ ಆಸಕ್ತಿ ಇಲ್ಲ.‌ ಗುತ್ತಿಗೆದಾರರ ಕ್ರಿಯಾಯೋಜನೆ ಕೈ ಬಿಡಿ, ಜನರ ಯೋಜನೆ ಸೇರಿಸಿ ಎಂದೂ ಹೇಳಿದರು. ಈ ವೇಳೆ ಇಓ ಏಫ್‌.ಜಿ.ಚಿಣ್ಣನವರ, ಗ್ರಾ.ಪಂ. ಪಿಡಿಓಗಳು ಇದ್ದರು.

ಟಾಪ್ ನ್ಯೂಸ್

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.