ಜೋಯಿಡಾ : ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್ ವೇಳೆ ತಪ್ಪಿದ ಭಾರೀ ಅನಾಹುತ

ಉಳಿದ ರ‍್ಯಾಫ್ಟ್ ತಂಡಗಳ ಸಮಯೋಚಿತ ಸ್ಪಂದನೆ

Team Udayavani, Apr 15, 2022, 3:26 PM IST

1-dfsfsf

ಜೋಯಿಡಾ : ಪ್ರವಾಸೋದ್ಯಮಕ್ಕೆ ಮೂಲ ಶಕ್ತಿಯಾದ ಕಾಳಿ ನದಿಯ ಇಳವಾ ಎಂಬಲ್ಲಿ ಪ್ರವಾಸಿಗರನ್ನು ಹೊತ್ತುಕೊಂಡು ಹೋಗುತ್ತಿದ್ದ ರ‍್ಯಾಫ್ಟ್ ಒಂದು ನೀರು ರಭಸವಾಗಿ ದುಮ್ಮುಕ್ಕುವಲ್ಲಿ ಕಲ್ಲಿಗೆ ತಾಗಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಪಕ್ಕದಲ್ಲೆ ಇದ್ದ ರ‍್ಯಾಫ್ಟ್ ತಂಡದವರ ಸಮಯೋಚಿತ ಸ್ಪಂದನೆಯಿಂದ ಆಗಬಹುದಾದ ಅನಾಹುತವೊಂದು ತಪ್ಪಿದ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿಯ ಇಳವಾ ಎಂಬಲ್ಲಿ ಗುರುವಾರ ನಡೆದಿದೆ. ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಳವಾದಲ್ಲಿ ಮಿಕ್ಕುಳಿದ ರ‍್ಯಾಫ್ಟ್ ಗಳು ಇಲ್ಲದೇ ಇರುತ್ತಿದ್ದಲ್ಲಿ ದೊಡ್ಡ ಅನಾಹುತವಾಗುತ್ತಿತ್ತು. ಇಳಿಜಾರಿನಲ್ಲಿ ಕಲ್ಲಿಗೆ ರ‍್ಯಾಫ್ಟ್ ಸಿಕ್ಕಿ ಹಾಕಿಕೊಂಡಿದೆ. 8 ಜನರು ಇರಬೇಕಾದ ರ‍್ಯಾಫ್ಟ್ ನಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋಗಿದ್ದು, ಇನ್ನೂ ಸುರಕ್ಷಾ ಪರಿಕರವಾದ ಹೆಲ್ಮೆಟ್ ಧರಿಸದೇ ಇರುವುದು ಸಹ ದೊಡ್ಡ ತಪ್ಪೆ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇಳವಾದಲ್ಲಿ ಸಾಕಷ್ಟು ಜಲಸಾಹಸ ಕ್ರೀಡೆ, ಬೋಟಿಂಗ್ ಉದ್ಯಮಗಳ ಚಟುವಟಿಕೆಯಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೇ, ಗಣೇಶಗುಡಿಯಿಂದ ಮೌಳಂಗಿಯವರೆಗೆ ರ‍್ಯಾಫ್ಟಿಂಗ್ ನಡೆಸಲು ಜಂಗಲ್ ಲಾಡ್ಜಸ್ ನವರು ಟೆಂಡರ್ ಕರೆಯುತ್ತಾರೆ. ಜಂಗಲ್ ಲಾಡ್ಜಸ್ ಅಧೀನದಲ್ಲಿ ರ‍್ಯಾಫ್ಟಿಂಗ್ ನಡೆಯುತ್ತದೆ. ಆದರೆ ಗಣೇಶಗುಡಿ, ಇಳವಾ ನದಿ ಹತ್ತಿರದ ಪ್ರದೇಶದಲ್ಲಿ ಜಲಸಾಹಸ ಕ್ರೀಡೆ, ಬೋಟಿಂಗ್ ಮಾಡಲು ಪ್ರವಾಸೋದ್ಯಮ ಇಲಾಖೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಒಂದೊಂದು ಬೋಟಿಗೂ ಒಂದೊಂದು ಪರವಾನಿಗೆ ನೀಡುತ್ತದೆ. ಆದರೆ ಅದು ರ‍್ಯಾಫ್ಟಿಂಗ್ ಗೆ ಅಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆ, ಬೋಟಿಂಗ್ ಗಷ್ಟೆ ಪರವಾನಿಗೆ ಪಡೆದು, ಅದೇ ಪರವಾನಿಗೆಯನ್ನು ಮುಂದಿಟ್ಟುಕೊಂಡು ರ‍್ಯಾಫ್ಟಿಂಗ್ ಮಾಡಲಾಗುತ್ತಿರುವುದು ಇಷ್ಟೆಲ್ಲಾ ರಾದ್ದಾಂತಗಳಿಗೆ ಕಾರಣವಾಗಿದೆ.

ರಭಸವಾಗಿ ನೀರು ಹರಿಯುವಲ್ಲಿ ಮತ್ತು ಏರು ತಗ್ಗುಗಳಿರುವಲ್ಲಿ ಪ್ರವಾಸೋದ್ಯಮ ಇಲಾಖೆಯವರಿಂದ ರ‍್ಯಾಫ್ಟಿಂಗ್ ಗೆ ಪರವಾನಿಗೆ ಇಲ್ಲದಿದ್ದರೂ, ಬೋಟಿಂಗ್, ಜಲಸಾಹಸ ಕ್ರೀಡೆಯ ಪರವಾನಿಗೆಯಲ್ಲಿಯೇ ಕಾನೂನುಬಾಹಿರವಾಗಿ ರ‍್ಯಾಫ್ಟಿಂಗ್ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಪ್ರವಾಸೋದ್ಯಮ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗಣೇಶಗುಡಿಯಿಂದ ಮೌಳಂಗಿಯವರೆಗೆ ರ‍್ಯಾಫ್ಟಿಂಗ್ ನಡೆಸಲು ಟೆಂಡರ್ ಕರೆಯುವ ಜಂಗಲ್ ಲಾಡ್ಜಸ್ ಹಾಗೂ ಅರಣ್ಯ ಇಲಾಖೆಯವರು ಗೊತ್ತಿದ್ದೂ, ಗೊತ್ತಿಲ್ಲದಂತೆ ನಾಟಕವಾಡುತ್ತಿರುವ ಹಿಂದಿನ ಮರ್ಮವೇನು ಎಂಬ ಪ್ರಶ್ನೆ ಎದುರಾಗಿದೆ.

ಒಮ್ಮೆಲೇ  ಹಣ ಮಾಡಬೇಕೆಂಬ ಹಪಾಹಪಿತನದಿಂದ ಇದ್ದ ಬಿದ್ದವರೆಲ್ಲ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ಪಡೆದರೆ ಏನಾಗಬಹುದು ಎನ್ನುವುದಕ್ಕೆ ಇಳವಾದಲ್ಲಿ ನಡೆದ ಈ ಘಟನೆಯೆ ಸಾಕ್ಷಿ. ಇಂತಹ ಘಟನೆಗಳು ನಡೆಯುವಂತಾಗಲೂ ಪ್ರಮುಖ ಕಾರಣ ಜಂಗಲ್ ಲಾಡ್ಜಸ್ ಮತ್ತು ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯ ಹಾಗೂ ಪರವಾನಿಗೆ ನೀಡಿ ಕೈ ತೊಳೆದುಕೊಳ್ಳುತ್ತಿರುವ ಪ್ರವಾಸೋದ್ಯಮ ಇಲಾಖೆ ಎಂದೇ ಹೇಳಲಾಗುತ್ತಿದ್ದು, ಇವೆಲ್ಲವುಗಳ ಹಿಂದೆ ಝಣ ಝಣ ಕಾಂಚಣದ ಲೆಕ್ಕಾಚಾರವೂ ಅಡಗಿದೆ ಎಂಬ ಮಾತು ಚರ್ಚೆಯಲ್ಲಿದ್ದು, ಈ ಇಲಾಖೆಗಳ ದಿವ್ಯ ನಿರ್ಲಕ್ಷ್ಯಕ್ಕೆ ಪ್ರವಾಸೋದ್ಯಮ ಅಪಾಯವನ್ನು ಅಹ್ವಾನಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವರದಿ : ಸಂದೇಶ್.ಎಸ್.ಜೈನ್

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.