ವಿಶ್ವ ದಾಖಲೆ ಬರೆಯಲು ಸಜ್ಜಾದ ಕೈಗಾ 


Team Udayavani, Oct 24, 2018, 6:00 AM IST

x-26.jpg

ಕಾರವಾರ: ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಬೆಳಗ್ಗೆ ನಾವೆಲ್ಲರೂ ಎದ್ದು ಚಹಾ ಸೇವಿಸುವ ಹೊತ್ತಿಗೆ ರಾಜ್ಯದ ಏಕೈಕ ಅಣು ವಿದ್ಯುತ್‌ ಸ್ಥಾವರ ಕೈಗಾ, ವಿಶ್ವ ದಾಖಲೆ ಬರೆಯಲಿದೆ. ಕೈಗಾದ ಘಟಕ-1ರಲ್ಲಿ ಸತತ 894 ದಿನಗಳ ಕಾಲ ವಿದ್ಯುತ್‌ ಉತ್ಪಾದಿಸಿ ಜಾಗತಿಕ ದಾಖಲೆಯ ಗರಿಮೆ ಹೆಚ್ಚಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ 893 ದಿನ ಪೂರೈಸಿದ್ದು,
ಬುಧವಾರ ಬೆಳಗ್ಗೆ 9 ಗಂಟೆ 19 ನಿಮಿಷಕ್ಕೆ ಸತತ 894 ದಿನ ವಿದ್ಯುತ್‌ ಉತ್ಪಾದಿಸಿ ದಾಖಲೆ ಬರೆದ ಹಿರಿಮೆ ಘಟಕದ್ದಾಗಲಿದೆ.

ಆ ಮೂಲಕ ಕೈಗಾ ಘಟಕ-1, ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲಲಿದೆ. ಈ ಮಧ್ಯೆ, ವಿದ್ಯುತ್‌ ಉತ್ಪಾದನೆಯನ್ನು ಅ.24ರ ನಂತರವೂ ಮುಂದುವರಿಸಲು ಎಇಆರ್‌ಬಿ ಅಣು ವಿದ್ಯುತ್‌ ಶಕ್ತಿ ನಿಯಂತ್ರಣ ನಿಗಮ ಮತ್ತು ಭಾರತದ ಅಣುಸ್ಥಾವರ ವೀಕ್ಷಣಾ ಕೇಂದ್ರಗಳು ಅನುಮತಿ ನೀಡುವ ಸಾಧ್ಯತೆಗಳಿವೆ. ಸತತ 895 ದಿನ ವಿದ್ಯುತ್‌ ಉತ್ಪಾದಿಸಲು ಅನುಮತಿ ಸಿಕ್ಕಿದೆ. ಹಾಗಾದರೆ, ಉತ್ಪಾದನೆಯಲ್ಲಿ ಕೈಗಾ ಘಟಕ-1 ಮೈಲಿಗಲ್ಲು ಸ್ಥಾಪಿಸಲಿದೆ ಎಂದು ಇಲ್ಲಿನ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1999ರಲ್ಲಿ ಕೈಗಾ ಘಟಕ-2ನ್ನು ಅಂದಿನ ಪ್ರಧಾನಿ ಎ.ಬಿ.ವಾಜಪೇಯಿ ದೇಶಕ್ಕೆ ಸಮರ್ಪಿಸಿದ್ದರು. ನಂತರ 2000, ಸೆ.26ರಂದು ತನ್ನ ಕಾರ್ಯ ಪ್ರಾರಂಭಿಸಿದ ಕೈಗಾ ಘಟಕ-1, ವಿದ್ಯುತ್‌ ಉತ್ಪಾದನೆಯನ್ನು 2000ರ ನ.16ರಂದು ಪ್ರಾರಂಭಿಸಿತ್ತು. ಸಾಮಾನ್ಯವಾಗಿ
ಅಣುಸ್ಥಾವರಗಳನ್ನು 365 ದಿನ ಸತತ ನಡೆಸಿ ಘಟಕದ ರಿಯಾಕ್ಟರ್‌ ನಿರ್ವಹಣೆಗೆ 30 ದಿನ ಬಿಡುವು ನೀಡಲಾಗುತ್ತದೆ. ನಿರ್ವಹಣೆ ನಂತರ ಮತ್ತೆ ರಿಯಾಕ್ಟರ್‌ ಗಳನ್ನು ಚಾಲನೆ ಮಾಡುವುದು ವಾಡಿಕೆ. ಆದರೆ, ಭಾರತದ ಕೈಗಾ ಅಣುಸ್ಥಾವರದಲ್ಲಿ ಸತತ 500 ದಿನಗಳವರೆಗೆ ರಿಯಾಕ್ಟರ್‌ಗಳನ್ನು ನಡೆಸಿದ ದಾಖಲೆ ಈತನಕ ಇತ್ತು. ದೇಶದ ವಿವಿಧ ರಾಜ್ಯಗಳಲ್ಲಿನ ಅಣುಘಟಕಗಳನ್ನು 450
ದಿನ, 500 ದಿನ ನಡೆಸಿದ ದಾಖಲೆ ಇದೆ.

ಮೊದಲ ಸ್ಥಾನದಲ್ಲಿ ಕೆನಡಾ: ಅಣು ಸ್ಥಾವರದ ಘಟಕದ ರಿಯಾಕ್ಟರ್‌ವೊಂದನ್ನು ಸತತ 940 ದಿನಗಳ ಕಾಲ ಕಾರ್ಯ ನಿರ್ವಹಿಸಿ ವಿದ್ಯುತ್‌ ಉತ್ಪಾದಿಸಿದ ದಾಖಲೆ ಕೆನಡಾ ದೇಶದ ಹೆಸರಿನಲ್ಲಿದೆ. ಯುನೈಟೆಡ್‌ ಕಿಂಗ್‌ ಡಮ್‌ನ ಏಷ್ಯನ್‌ ಅಣುಸ್ಥಾವರದ ರಿಯಾಕ್ಟರ್‌ನಲ್ಲಿ 893 ದಿನ ಸತತ ವಿದ್ಯುತ್‌ ಉತ್ಪಾದಿಸಲಾಗಿದ್ದು, ಇದು ಸದ್ಯ ಎರಡನೇ ಸ್ಥಾನದಲ್ಲಿದೆ. ಭಾರತದ ಕೈಗಾ ಘಟಕ-1
ಮಂಗಳವಾರದಂದು ಈ ಸಾಧನೆಯನ್ನು ಸರಿಗಟ್ಟಿದೆ ಎಂದು ಕೈಗಾದ ವಿಜ್ಞಾನಿ ಮೋಹನ್‌ ರಾಮ್‌ ತಿಳಿಸಿದ್ದಾರೆ. ಕೈಗಾ ಸ್ಥಾವರದ ಡೈರೆಕ್ಟರ್‌ ಸಂಜಯ್‌ ಕುಮಾರ್‌, ಸ್ಟೇಶನ್‌ ಡೈರೆಕ್ಟರ್‌ ಜೆ.ಆರ್‌.ದೇಶಪಾಂಡೆ ಸಹ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, 895 ದಿನ ಪೂರೈಸಿ ಗುರಿ ತಲುಪುವ ಸಂತಸದ ಘಳಿಗೆಗಾಗಿ ಕಾದಿದ್ದಾರೆ.

ಭಾರತಕ್ಕೆ ಮೊದಲ ಸ್ಥಾನ
ಕೈಗಾ ಅಣುವಿದ್ಯುತ್‌ ಸ್ಥಾವರದಲ್ಲಿನ ಘಟಕಗಳು ಹೆವಿ ವಾಟರ್‌ ರಿಯಾಕ್ಟರ್‌ (ಪಿಎಚ್‌ಡಬುಆರ್‌) ತಂತ್ರಜ್ಞಾನದ್ದು. ಈ ಮಾದರಿಯ ರಿಯಾಕ್ಟರ್‌ಗಳ ಪೈಕಿ ಸತತ 893 ದಿನ ವಿದ್ಯುತ್‌ ಉತ್ಪಾದಿಸಿದ ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನ ಪ್ರಾಪ್ತವಾಗಿದೆ. ಈ ಮಾದರಿಯ ಅಣು ರಿಯಾಕ್ಟರ್‌ಗಳಲ್ಲಿ ಸತತ 893 ದಿನಗಳಿಗೂ ಹೆಚ್ಚು ಕಾಲ ಅಣು ವಿದ್ಯುತ್‌ ಉತ್ಪಾದನೆಯನ್ನು ಪ್ರಪಂಚದ ಯಾವುದೇ ದೇಶ ಮಾಡಿಲ್ಲ. ಈ ತಂತ್ರಜ್ಞಾನದಡಿ ಕೈಗಾ ಘಟಕ-1 ರಿಯಾಕ್ಟರ್‌ ದಾಖಲೆ ಬರೆದಿದೆ. ಬುಧವಾರ ಬೆಳಗ್ಗೆ 9 ಗಂಟೆ ದಾಟುತ್ತಿದ್ದಂತೆ ಇದು ಹೊಸ ಮೈಲುಗಲ್ಲನ್ನು  ಬರೆಯಲಿದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.