ಪರೇಶ್ ಸಾವು ಕೇಸ್; ತಂದೆ ಕಮಲಾಕರ್ ಹೇಳೋದೇನು ಗೊತ್ತಾ?
Team Udayavani, Dec 13, 2017, 1:52 PM IST
ಹೊನ್ನಾವರ: ಪೊಲೀಸರು ಹೇಳುವ ರೀತಿ ಕಾಲು ಜಾರಿ ಬಿದ್ದು ನನ್ನ ಮಗ ಸಾವನ್ನಪ್ಪಿಲ್ಲ. ಪರೇಶ್ ಸಾವು ಸಹಜ ಸಾವಲ್ಲ, ಕೊಲೆ ಮಾಡಿಯೇ ಕೆರೆಯಲ್ಲಿ ಬಿಸಾಕಲಾಗಿದೆ…ಇದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪರೇಶ್ ಮೇಸ್ತ ತಂದೆ ಕಮಲಾಕರ್ ಅವರ ನುಡಿ.
ಪರೇಶ್ ಮೇಸ್ತ ಸಾವಿನ ಕುರಿತು ಖಾಸಗಿ ಟಿವಿ ಚಾನೆಲ್ ವೊಂದರ ಜತೆ ಮಾತನಾಡಿದ ಅವರು, ನನ್ನ ಮಗನನ್ನು ಕೊಲೆ ಮಾಡಿಯೇ ಕೆರೆಗೆ ಬಿಸಾಕಲಾಗಿದೆ. ಅವನ ತಲೆಗೆ ರಾಡ್ ನಿಂದ ಹೊಡೆಯಲಾಗಿದೆ, ಕೈಯಲ್ಲಿದ್ದ ಟ್ಯಾಟೊವನ್ನು ಚೂರಿಯಿಂದ ಕತ್ತರಿಸಿದ್ದರು ಎಂದು ಆರೋಪಿಸಿದರು.
ನಮ್ಮ ಮಗನನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ನಮ್ಮ ಸಮಾಜದ ಬಂಧುಗಳು ಸೇರಿ 10ಸಾವಿರಕ್ಕೂ ಹೆಚ್ಚು ಮಂದಿ ಶವವನ್ನು ನೋಡಿದ್ದೇವೆ, ಇದರಲ್ಲಿ ಯಾವ ಸುಳ್ಳು ಹೇಳಿಕೆಯೂ ಇಲ್ಲ. ನನ್ನ ಮಗನಿಗೆ ಈಜು ಬರುತ್ತದೆ, ಆತ ಕಾಲು ಜಾರಿ ಬಿದ್ದು ಸಾವನ್ನಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…