ಕಾರವಾರ ಬಂದರಿಗೆ 16.69 ಕೋಟಿ ಆದಾಯ


Team Udayavani, Apr 8, 2019, 2:09 PM IST

Udayavani Kannada Newspaper
ಕಾರವಾರ: ಕಾರವಾರದ ಸರ್ವಋತು ವಾಣಿಜ್ಯ ಬಂದರು ಏಪ್ರಿಲ್‌ 2018 ರಿಂದ ಮಾರ್ಚ್‌ 2019 ರವರೆಗೆ ದಾಖಲೆಯ ವಹಿವಾಟು ನಡೆಸಿದ್ದು, ಒಟ್ಟು 16.69 ಕೋಟಿ ಆದಾಯ ಗಳಿಸಿದೆ ಎಂದು ಬಂದರು ಅಧಿಕಾರಿ ಕ್ಯಾಪ್ಟನ್‌ ಸಿ.ಸ್ವಾಮಿ ಹೇಳಿದರು.
56 ನೇ ಮೆರಿಟೈಮ್‌ ಡೇ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಇಲ್ಲಿನ ವಾಣಿಜ್ಯ ಬಂದರು 2017-18 ನೇ ಆರ್ಥಿಕ ವರ್ಷಕ್ಕಿಂತ ಶೇ 43.89ರಷ್ಟು ಪ್ರಗತಿ ಕಂಡಿದೆ. ಬಂದರಿನ ಹಡಗು ಚಲಿಸುವ ಮಾರ್ಗದಲ್ಲಿದ್ದ ಹೂಳನ್ನು ತೆಗೆದ ಪರಿಣಾಮ ಹೆಚ್ಚಿನ ಹಡಗುಗಳು ಬರಲು ಸಾಧ್ಯವಾಯಿತು. ಇದರಿಂದಾಗಿ ಆದಾಯದಲ್ಲಿ ಏರಿಕೆ ಕಂಡಿದೆ ಎಂದು ಕ್ಯಾಪ್ಟನ್‌ ಸ್ವಾಮಿ ಹೇಳಿದರು. ಏಪ್ರಿಲ್‌ 2018 ರಿಂದ ಮಾರ್ಚ್‌ 2019 ರವರೆಗೆ ಸರಕು ಸಾಗಣೆಯ 157 ಹಡಗುಗಳು ಕಳೆದ ಕಾರವಾರ ಬಂದರಿಗೆ ಬಂದಿವೆ. ಕಳೆದ ಬಾರಿ 133 ಬಂದಿದ್ದವು. ಈ ಬಾರಿ ಶೇ 15.2ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಕಸ್ಟಮ್ಸ್‌ ಇಲಾಖೆ 283.60 ಕೋಟಿ ಆದಾಯ ಗಳಿಸಿದೆ. ಇಲಾಖೆ ಬರೋಬ್ಬರಿ 152 ಕೋಟಿ ಆದಾಯವನ್ನು ಕೇವಲ ಡಾಂಬರು ಆಮದು ಚಟುವಟಿಕೆಗಳಿಂದಲೇ ಪಡೆದಿದೆ. 2.99 ಕೋಟಿ ಸೇವಾ ತೆರಿಗೆಯೂ ಪಾವತಿಯಾಗಿದೆ ಎಂದರು.
ಕಾರವಾರ ವಾಣಿಜ್ಯ ಬಂದರನ್ನು ಕೇಂದ್ರ ಸರ್ಕಾರವು ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ ಅಳವಡಿಸಲು ಆಯ್ಕೆ ಮಾಡಿದೆ. ಇದಕ್ಕೆ ತಾಂತ್ರಿಕ ಮತ್ತು ಹಣಕಾಸು ಸೌಲಭ್ಯಕ್ಕಾಗಿ 11.08 ಕೋಟಿ ನಿಗದಿ ಮಾಡಿದೆ. ಇದರಿಂದ ಬಂದರಿನಲ್ಲಿ ಭದ್ರತೆ ಹೆಚ್ಚಲಿದೆ. ಈ ಆರ್ಥಿಕ ವರ್ಷದಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಕೇಂದ್ರ ಸರ್ಕಾರವು ನಮ್ಮ ಬಂದರಿಗೆ ತೈಲ ಮಾಲಿನ್ಯ ನಿಯಂತ್ರಣದ ಪರಿಕರಗಳನ್ನೂ ನೀಡಲಿದೆ. ಇದಕ್ಕಾಗಿ 1.25 ಕೋಟಿ ನೀಡಿದೆ. ಇದರೊಂದಿಗೆ ರಾಜ್ಯ ಸರ್ಕಾರವೂ 2.5 ಕೋಟಿ ಮೊತ್ತದ ಪರಿಕರಗಳನ್ನು ನೀಡಿದೆ. ಅಲ್ಲದೇ ರಾಜ್ಯ ಸರ್ಕಾರವು ಬಂದರಿಗೆ ಖಾಸಗಿ ಸಶಸ್ತ್ರ ಭದ್ರತಾ ಸಿಬ್ಬಂದಿ ನಿಯೋಜನೆ ಅನುಮತಿ ನೀಡಿದೆ. ಅವರ ವೇತನಕ್ಕಾಗಿ ವರ್ಷಕ್ಕೆ 60 ಲಕ್ಷ ನಿಗದಿ ಮಾಡಿದೆ ಎಂದರು.
ಬಂದರು ಬಳಕೆದಾರರಿಗೆ ರಾತ್ರಿ ಮಾರ್ಗದರ್ಶನ ಮೂಲಭೂತ ಸೌಲಭ್ಯಗಳನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ತರಲು ಅನುಮತಿ ಸಿಕ್ಕಿದೆ. ಇದರ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಸುಮಾರು 20 ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕ ಪರಿಕರಗಳನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಕಾರವಾರ ಮತ್ತು ಬೇಲೇಕೇರಿ ಬಂದರುಗಳಲ್ಲಿ ಹೆಚ್ಚು ದೂರದವರೆಗೆ ದೃಶ್ಯಗಳನ್ನು ಸೆರೆಹಿಡಿಯುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಬಂದರು ಅಭಿವೃದ್ಧಿ ಮತ್ತು ಒಳನಾಡು ಜಲಸಾರಿಗೆ ಅಭಿವೃದ್ಧಿ ಸಲುವಾಗಿ ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಈಚೆಗೆ
ರಚನೆಯಾಗಿದೆ. ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇಮಕವಾಗಿದ್ದು, ಕಾರವಾರದಲ್ಲಿ ಕಚೇರಿಯಿರಲಿದೆ.
ಇದರಿಂದ ಬಂದರು ಚಟುವಟಿಕೆಗಳಿಗೆ ಸಾಕಷ್ಟು ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರವಾರ ಬಂದರು ಚಟುವಟಿಕೆ: 7,56,434 ಮೆಟ್ರಿಕ್‌ ಟನ್‌ ಆಮದು ಮಾಡಿಕೊಂಡ ಸರಕಾಗಿದೆ. ರಫ್ತು ಮಾಡಿದ ಸರಕು 1,83,853 ಮೆಟ್ರಿಕ್‌ ಟನ್‌. ಒಟ್ಟು ನಿರ್ವಹಿಸಿದ ಸರಕು 9,40,287 ಮೆಟ್ರಿಕ್‌ ಟನ್‌ಗಳಾಗಿದೆ. 16,69,42,000 ರೂ. ಗಳಿಸಿದ ಆದಾಯ ಎಂದರು.
1919ರಲ್ಲಿ ಮುಂಬೈನಿಂದ ಲಂಡನ್‌ ಗೆ ಸಾಗಿದ ಮೊದಲ ಹಡಗು ಎಸ್‌.ಎಸ್‌. ಲಾಯಲ್ಟಿಯ ನೆನಪಿಗಾಗಿ ಈ ದಿನವನ್ನು
ಆಚರಿಸಲಾಗುತ್ತದೆ ಎಂದು ಕೋಸ್ಟ್‌ ಗಾರ್ಡ್‌ ಕಮಾಂಡಿಂಗ್‌ ಆಫೀಸರ್‌ ಕಮಾಂಡೆಂಟ್‌ ಎ.ಜೆ. ನಂದ ಹೇಳಿದರು. ಅಧಿಕಾರಿ ಕಶ್ಯಪ್‌, ಅಲ್ವಾರೆಸ್‌ ಮತ್ತು ಥಾಮಸ್‌ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಹೆಲೆನ್‌ ಅಲ್ವಾರೆಸ್‌ ಭಾಗವಹಿಸಿದ್ದರು. ಬಂದರು ಅಧಿಕಾರಿ ಕ್ಯಾ.ಅರುಣ್‌ ಗಾಂವ್ಕರ್‌ ಸ್ವಾಗತಿಸಿದರು. ಸುರೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.