ಬಳಕೆಗೆ ಬಾರದಂತಾದ ಕೊಂಡವಾಡೆ
Team Udayavani, Dec 21, 2019, 5:04 PM IST
ಶಿರಸಿ: ಒಂದೆಡೆ ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳ ಕಾಟ, ಇನ್ನೊಂದೆಡೆ ಬಿಡಾಡಿ ದನಗಳಿಗೆ ನೆಲೆ ಕೊಡಬೇಕಿದ್ದ ಕೊಂಡವಾಡೆಗೆ ಅನಾಥಭಾವದ ಸಂಕಟ. ನಗರದಲ್ಲಿ ಬಿಡಾಡಿ ದನಗಳ ಹಾವಳಿ ತಡೆಯಲು ಕಳೆದ ಮೂರು ವರ್ಷಗಳ ಹಿಂದೆ 8 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಿ ಕಟ್ಟಿದ ಕೊಂಡವಾಡೆ ಅಪೂರ್ಣವಾಗಿ, ಈಗ ಬಳಕೆಗೂ ತತಕ್ಷಣಕ್ಕೆ ಬಾರದಂತಹ ಸ್ಥಿತಿಗೆ ತಲುಪಿದೆ.
ಬೇಕಾಬಿಟ್ಟಿ ಜಾನುವಾರುಗಳು ಇರಬೇಕಿದ್ದ ಕಡೆ ಬೇಕಾಬಿಟ್ಟಿ ಗಿಡಗಳು ಬೆಳೆದಿವೆ. ಪಟ್ಟಣದ ರಾಘವೇಂದ್ರ ಮಠದ ಸಮೀಪದಲ್ಲಿರುವ ನಗರಸಭೆ ಅಂದಿನ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾಲದಲ್ಲೇ ನಿರ್ಮಾಣವಾಗಿದ್ದ ಕೊಂಡವಾಡೆ ಅರ್ಥಾತ್ ದನದ ದೊಡ್ಡಿ ಇಂದು ಅನಾಥವಾಗಿದೆ. ನಿರ್ವಹಣಾ ಅನುದಾನದ ಕೊರತೆಯಿಂದ ಬಳಲುತ್ತಲೇ ಹಾಕಿದ ಹಣವೂ ದಂಡವಾಗಿ, ನಿರ್ವಹಣೆಗೂ ಬಾರದಂತಾಗಿದೆ. ಇತ್ತ ಬಿಡಾಡಿ ದನಗಳು ನಗರದಲ್ಲಿ ನೂರಕ್ಕೂ ಹೆಚ್ಚಿದ್ದು, ಅವುಗಳ ಹಾವಳಿ ಕೂಡ ಮಿತಿ ಮೀರಿದೆ. ರಾತ್ರಿ ಹಗಲು ಸಂಚಾರ ಕೂಡ ಆತಂಕ ಮೂಡಿಸಿದೆ. ಜಾನುವಾರುಗಳ ನಡುವಿನ ಕಾದಾಟ ಕೂಡ ಪಾದಚಾರಿಗಳಿಗೂ ಅಪಾಯದಂತಿವೆ.
2015-16ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೊಂಡವಾಡೆಯಲ್ಲಿ ತಂದು ಕಟ್ಟುವ ಬಿಡಾಡಿ ದನಗಳ ನಿರ್ವಹಣೆ, ಆಹಾರ ವೆಚ್ಚ ಹಾಗೂ ದಂಡ ದರ ನಿಗದಿಪಡಿಸಿ ಠರಾಯಿಸಲಾಗಿತ್ತು. ಆದರೆ ನಿರ್ವಹಣೆಗೆ ದಂಡದ ಹಣ ನೆಚ್ಚಿಕೊಂಡು ಮುನ್ನಡೆಸುವುದು, ಬಿಡಾಡಿ ದನ ಹಿಡಿದು ತರುವುದು, ಪ್ರತ್ಯೇಕ ಸಿಬ್ಬಂದಿ, ನಿರ್ವಹಣಾ ವೆಚ್ಚಕ್ಕೆ ವ್ಯವಸ್ಥೆ ಆಗದೇ ಇದ್ದದ್ದೂ ಬಳಕೆಗೆ ಬಾರದಂತಾಗಿದೆ.
ಸರಿಸುಮಾರು 50 ಜಾನುವಾರುಗಳು ಇರಬಹುದಾದ ಕೊಂಡವಾಡೆಗೆ ಸುತ್ತಲೂ ಗೋಡೆ, ಕಂಬಗಳನ್ನು ನಿರ್ಮಿಸಲಾಗಿದೆ. ಆದರೆ ಮುಖ್ಯವಾಗಿ ಮೇಲ್ಛಾವಣಿ ಹಾಕಿಲ್ಲದಿರುವುದೂ ದನ ಬಿಡಲು ಆಗುವುದಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ. ತಕ್ಷಣ ನಗರಸಭೆ ಕೊಂಡವಾಡೆಯನ್ನು ದುರಸ್ತಿಗೊಳಿಸಿ, ಬಳಕೆಗೆ ಯೋಗ್ಯವಾಗಿಸಿ, ಜಾನುವಾರುಗಳ ನಿರ್ವಹಣೆಗೆ ಕೂಡ ಅನುದಾನ ಹೊಂದಿಸಿಕೊಂಡು ನಗರದ ಜನರಿಗೆ ಬಿಡಾಡಿ ದನಗಳ ಕಾಟ ತಪ್ಪಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ