ಹೆಬ್ಬಾರಗುಡ್ಡ ಅಭಿವೃದ್ಧಿ ಕೇಳ್ಳೋರಿಲ್ಲ 


Team Udayavani, Mar 28, 2019, 4:54 PM IST

28-March-15

ಕುಮಟಾ: ಮಳೆಗಾಲ ಮುಗಿದ ನಂತರ ಹೆಬ್ಟಾರಗುಡ್ಡ ಸ್ಥಳೀಯರೇ ರಸ್ತೆಯನ್ನು ತಕ್ಕಮಟ್ಟಿಗೆ ಸಿದ್ಧಪಡಿಸಿಕೊಳ್ಳುತ್ತಾರೆ.

ಕುಮಟಾ: ವರ್ಷದ ಹಿಂದೆ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಗುಡ್ಡಗಾಡು ಕುಗ್ರಾಮ ಹೆಬ್ಟಾರಗುಡ್ಡಕ್ಕೆ ವಿದ್ಯುತ್‌ ಬಂತು. ಶಾಸಕಿ ರೂಪಾಲಿ ನಾಯ್ಕ ಉದ್ಘಾಟನೆಗೆ ಊರಿಗೆ ಬರಲಿಲ್ಲ. 4-5 ಕಿಮೀ ದೂರದಲ್ಲೇ ರಿಬ್ಬನ್‌ ಕಟ್‌ ಮಾಡಿ ಮರಳಿದರು. ಗುಡ್ಡ ಹತ್ತಲಾಗದ ಜನಪ್ರತಿನಿಧಿಗಳ, ಅಧಿಕಾರಿಗಳ ಕಷ್ಟ ಸ್ಥಳೀಯರು ಅರ್ಥಮಾಡಿಕೊಂಡರು. ಆದರೆ ಹಲವು ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹೆಬ್ಟಾರಗುಡ್ಡದ ದಿನನಿತ್ಯದ ಸಂಕಟ ಅರ್ಥವಾಗದೇ ಬಾಕಿ ಉಳಿದಿದೆ.
ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿ ಈ ಮೂರೂ ತಾಲೂಕು ಗಡಿಯಲ್ಲಿ ಹೆಬ್ಟಾರಗುಡ್ಡವಿದೆ. ಇಲ್ಲಿನ ಸ್ಥಿತಿಗತಿಗಳು ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತವೆ. ನಿಸರ್ಗ ನೀಡಿದ ಎಲ್ಲ ಕೊಡುಗೆಗಳಿದ್ದರೂ ಆಡಳಿತ ವ್ಯವಸ್ಥೆಯ ಹೃದಯಹೀನತೆಯಿಂದ ಹೆಬ್ಟಾರಗುಡ್ಡದ ಜನ ಎಲ್ಲಿಯೂ ಸಲ್ಲದವರಾಗಿ ಕಠೊರ ತಪಸ್ಸಿನಂಥ ಬದುಕು ನಡೆಸುತ್ತಿದ್ದಾರೆ. ಹೆಬ್ಟಾರಗುಡ್ಡ ಹಿಂದುಳಿದ ಸಿದ್ದಿ ಜನಾಂಗದವರೇ ಹೆಚ್ಚಿರುವ 26-28 ಕುಟುಂಬಗಳು ವಾಸಿಸುವ ಸೌಕರ್ಯರಹಿತ ಕುಗ್ರಾಮ. ಇಲ್ಲಿನ ನಿವಾಸಿಗಳಿಗೆ ಪಡಿತರಕ್ಕಾಗಿ 17 ಕಿ.ಮೀ ದೂರದ ರಾಮನಗುಳಿಗೆ ಬರಬೇಕು. ಸಾರ್ವಕಾಲಿಕ ರಸ್ತೆಯಿಲ್ಲ. ಬಸ್‌ ವ್ಯವಸ್ಥೆ ಇಲ್ಲ. ಭಾರ ಹೊತ್ತು ಕಾಲ್ನಡಿಗೆಯಲ್ಲಿ ಸಾಗಬೇಕು. ಸ್ವಂತ ಬೈಕ್‌ ಇದ್ದರೆ ಸ್ವಲ್ಪ ಅನುಕೂಲ. ದೂರವಾಣಿ ಇಲ್ಲವೇ ಇಲ್ಲ. ಅನಾರೋಗ್ಯವಾದರೆ ಕನಿಷ್ಠ 18-20 ಕಿಮೀ ದೂರದಲ್ಲಿ ಪ್ರಾಥಮಿಕ ಚಿಕಿತ್ಸೆಗಳು ಸಿಗುತ್ತವೆ. ಸದ್ಯ ಇಲ್ಲಿ 5-6 ವಿದ್ಯಾರ್ಥಿಗಳಿದ್ದರೂ ಹಿಂದೆ ಮುಚ್ಚಿದ್ದ ಶಾಲೆ ಮತ್ತೆ ತೆರೆದಿಲ್ಲ. ಊರಿನಲ್ಲಿ ಶೇ. 90ರಷ್ಟು ಅನಕ್ಷರಸ್ಥರೇ.
ಬಹಳಷ್ಟು ಅಧಿಕಾರಿಗಳಿಗೆ ಈ ಊರಿನ ಪರಿಚಯವೇ ಇಲ್ಲ. ಕುರ್ಚಿಯ ಮೇಲೆ ಕುಳಿತಲ್ಲೇ ಹೆಬ್ಟಾರಗುಡ್ಡದ ಅಭಿವೃದ್ಧಿ ಅಸಾಧ್ಯ ಎಂದು ತೀರ್ಮಾನಿಸಿದಂತಿದೆ. ಸಂಸದರು, ಶಾಸಕರು, ಸಚಿವರು ಊರೊಳಗೆ ಒಮ್ಮೆ ಕಾಲಿಟ್ಟಿದ್ದರೆ ಜನರ ಕಷ್ಟ ಅನುಭವಕ್ಕೆ ಬರುತ್ತಿತ್ತು. ಚುನಾವಣಾ ಸಂದರ್ಭದಲ್ಲಿ ಮತಯಾಚಿಸಲು ಬರುವುದಕ್ಕೂ ಗುಂಡಿಗೆ ಗಟ್ಟಿ ಇಲ್ಲದ ಅಭ್ಯರ್ಥಿಗಳಿಗೆ ಆತ್ಮಸಾಕ್ಷಿಯ ಅಳುಕು ಕಾಡಿರಬಹುದು ಎಂಬುದು ಜನರ ಮಾತು.
ಇಲ್ಲಿನ ಸಂಕಟಗಳ ಸರಮಾಲೆಗೆ ಸ್ಪಂದಿಸಬೇಕಾದವರ ಮಾನವೀಯತೆ, ಹೃದಯವಂತಿಕೆ ಸತ್ತು ಹೋಗಿದೆಯೆಂದು ಗುಡ್ಡದ ಜನ ಸದ್ಯ ನಿರ್ಲಿಪ್ತರಾಗಿದ್ದಾರೆ. ಆದರೆ ಅಟ್ಟ ಸೇರಿದ ನಿರೀಕ್ಷೆಗಳ ಮೂಟೆ ಮಾತ್ರ ಜರಿದುಬಿದ್ದರೂ ಜೀವಂತವಾಗಿದೆ.
ಮಳೆಗಾಲ ಬದುಕು ಭಯಂಕರ
ಮಳೆಗಾಲದಲ್ಲಿ ಇಲ್ಲಿನ ಬದುಕು ಇನ್ನೂ ಭಯಂಕರ. ಕಡಿದಾದ ಇಳುಕಲ ಕಚ್ಚಾ ರಸ್ತೆ ಮೊದಲ ಮಳೆಗೇ ಕೊಚ್ಚಿಹೋಗಿರುತ್ತದೆ. ಆ ಸಂದರ್ಭದಲ್ಲಿ ಹೊರ ಜಗತ್ತಿನೊಂದಿಗೆ ಸಂಪರ್ಕವೇ ಅಸಾಧ್ಯ. ಕಾಯಿಲೆ ಪೀಡಿತರನ್ನು ಕಂಬಳಿಯಲ್ಲಿ ಕಟ್ಟಿ ಹೊತ್ತು ತರುವುದು ಇಲ್ಲಿನವರಿಗೆ ಮಾಮೂಲು ಸಂಗತಿ. ಪ್ರತಿ ಮಳೆಗಾಲದ ನಂತರ ಊರಿನ ಜನರೇ ತಕ್ಕಮಟ್ಟಿಗೆ ರಸ್ತೆ ಸಂಚಾರ ಯೋಗ್ಯ ಮಾಡಿಕೊಳ್ಳುವುದು ಅನಿವಾರ್ಯ. ಹೀಗಾಗಿ ವರ್ಷದ ಮೊದಲ ದೊಡ್ಡ ಮಳೆಗೆ ಮುನ್ನವೇ ಮುಂದಿನ 4-5 ತಿಂಗಳ ಮುಂಜಾಗ್ರತೆ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಸಾಕಷ್ಟು ಬಾರಿ ನಮ್ಮ ಶಾಸಕರನ್ನು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಮೂಲ ಸೌಕರ್ಯ ಕಲ್ಪಿಸುವಂತೆ ಹಲವು ಮನವಿಗಳನ್ನೂ ನೀಡಲಾಗಿದೆ. ಆದರೆ ಸ್ಥಳೀಯರ ಯಾವುದೇ ಕೋರಿಕೆಗೆ ಅಧಿಕಾರಗಳ, ಜನಪ್ರತಿನಿಧಿಗಳ ಉತ್ತರವಿಲ್ಲ. ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯನ್ನು ಬಹಿಸ್ಕರಿಸುವ ನಿರ್ಧಾರ ಕೈಗೊಂಡಾಗ ಸ್ಥಳಕ್ಕಾಗಮಿಸಿದ ಕೆಲ ಅಧಿಕಾರಿಗಳು ಸಾಕಷ್ಟು ಭರವಸೆ ನೀಡಿದ್ದರು. ಚುನಾವಣೆ ನಂತರ ಯಾವ ಯೋಜನೆಯೂ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ.
ಕೃಷ್ಣ ಗಾಂವ್ಕರ, 
ಗ್ರಾಮದ ಹಿರಿಯ
ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಊರಿನ ನೆನಪಾಗುತ್ತದೆ. ಊರಿನ ಸಮಸ್ಯೆಗಳನ್ನು ಅವರ ಮುಂದಿಟ್ಟಾಗ ಊರೇ ಮರೆತುಹೋಗುತ್ತದೆ. ನಾವೇ ಆರಿಸಿತಂದ ಶಾಸಕರಿಗೆ ನಮ್ಮ ಊರಿನ ಪರಿಚವಿಲ್ಲ. ಮುಂದಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿಯತ್ತ ಮುನ್ನೆಡೆಸಲಿ ಎಂಬುದು ಗ್ರಾಮಸ್ಥರ ಆಶಯ.
ರವಿ ಪೂಜಾರಿ,
ಸ್ಥಳೀಯ ನಿವಾಸಿ
 ಕೆ. ದಿನೇಶ ಗಾಂವ್ಕರ 

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.