ರಿಕ್ಷಾದವರ ಕೋಣೆಯಲ್ಲಿ ಕಂಟ್ರೋಲರ್‌

ಹೊನ್ನಾವರದಲ್ಲಿ ರಸ್ತೆಯಲ್ಲೇ ಬಸ್‌ನಿಲ್ದಾಣ,ಚಾಲಕ-ನಿರ್ವಾಹಕ-ಪ್ರಯಾಣಕರಿಗೆ ತಪ್ಪದ ಗೋಳು

Team Udayavani, Oct 30, 2020, 6:38 PM IST

ರಿಕ್ಷಾದವರ ಕೋಣೆಯಲ್ಲಿ ಕಂಟ್ರೋಲರ್‌

ಹೊನ್ನಾವರ: ಹಿಂದಿನ ತಲೆಮಾರಿನ ಜನಪ್ರತಿನಿಧಿಗಳು ಸಾರ್ವಜನಿಕ ಬಳಕೆಗಾಗಿ ಸ್ಥಳ ಕಾದಿಡದ ಕಾರಣ ಇಂದಿನ ತಲೆಮಾರಿನವರು ರಸ್ತೆಯಲ್ಲೇ ಬಸ್‌ ಸ್ಟ್ಯಾಂಡ್‌ ನೋಡುವಂತಾಗಿದೆ. ಬಸ್‌ ನಿಯಂತ್ರಕರು ರಿಕ್ಷಾ ದವರು ಕೂರುವ ಕೋಣೆಯಲ್ಲಿ ಕೂರಬೇಕಾಗಿದೆ.

ನಗರಕ್ಕೆ ನೂತನ ಬಸ್‌ ನಿಲ್ದಾಣ ಮಂಜೂರು ಆಗಿರುವುದರಿಂದ ಹಂಗಾಮಿ ಬಸ್‌ ನಿಲ್ದಾಣಕ್ಕೆ ಪೊಲೀಸ್‌ ಮೈದಾನದಲ್ಲಿ ಸ್ಥಳ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಶೆಡ್‌ ನಿರ್ಮಾಣವಾಗಿ ಬಸ್‌ ಸ್ಟ್ಯಾಂಡ್‌ ಸ್ಥಳಾಂತರವಾಗಿತ್ತು. ಇಲಾಖೆಗಳಲ್ಲಿ ಹೊಂದಾಣಿಕೆಯಿಲ್ಲದ ಕಾರಣ ಪೊಲೀಸರು ತಕರಾರು ಮಾಡಿ ಬಸ್‌ ಸ್ಟ್ಯಾಂಡ್‌ ಓಡಿಸಿದರು. ಬಸ್‌ ಸ್ಟ್ಯಾಂಡ್‌ ಮರಳಿ ಮೊದಲಿನ ಸ್ಥಳಕ್ಕೆ ಬಂತು. ಗುತ್ತಿಗೆದಾರರು ಅಲ್ಲಿಂದ ಹೊರಹಾಕಿದ ಮೇಲೆ ರಸ್ತೆಗೆ ಬಂದಿದೆ. ನಗರದಲ್ಲೆಲ್ಲೂ ಹಂಗಾಮಿ ಬಸ್‌ ಸ್ಟ್ಯಾಂಡ್‌ ಗೆ ಸ್ಥಳವಿಲ್ಲ. 3ಕಿಮೀ ದೂರ ಪ್ರಭಾತನಗರದಲ್ಲಿ ಅರಣ್ಯ ಇಲಾಖೆಯ ಭೂಮಿ ಇದೆ.

ಫೋನು, ಫ್ಯಾನು, ಲೈಟು ಯಾವುದೂ ಇಲ್ಲದ ಇಬ್ಬರು ಕೂರುವ ಗೂಡಿನಲ್ಲಿ ನಿಯಂತ್ರಕರು ಮಾತ್ರ ಕೂರಬಹುದು. ಸಾರಿಗೆ ಸಿಬ್ಬಂದಿ ಮತ್ತು ಪ್ರಯಾಣಿಕರು ಅಂಗಡಿ ಬಾಗಿಲಿನಲ್ಲಿ ನಿಲ್ಲಬೇಕು. ಚಹಾ ಕುಡಿಯಲು ಒಂದು ಸರಿಯಾದ ಅಂಗಡಿಯಿಲ್ಲ. ದೂರದೂರ ಬಸ್‌ ನಿಲ್ಲಿಸಿ ಬರುವ ಚಾಲಕರು ಫೋನ್‌ ಬಂದ ಮೇಲೆ ಬಸ್‌ ಗಳನ್ನು ತರುತ್ತಾರೆ. ನಿತ್ಯ 350 ಬಸ್‌ಗಳು ಓಡಾಡುವಾಗ ಒಂದೇ ಬಾರಿ ನಾಲ್ಕು ಬಸ್‌ ಬಂದರೆ ನಿಲ್ಲಲು ಸ್ಥಳವಿಲ್ಲ. ಮಧ್ಯೆ ಟೆಂಪೋಗಳು ನುಸುಳುತ್ತವೆ, ಇಷ್ಟು ವಿಸ್ತಾರವಾದ ಸ್ಥಳ ಬೇರೆ ಇಲ್ಲ. ಶಾಸಕ ದಿನಕರ ಶೆಟ್ಟಿ ಪೊಲೀಸ್‌ ಮೈದಾನ ಸಿಗುವ ಭರವಸೆ ಹೊಂದಿದ್ದರು. ಅವರಿಗೂ ಬೇಜಾರಾಗಿದೆ. ಈಗ ದಿನಕರ ಶೆಟ್ಟಿಯವರು ಕಟ್ಟಿಸಿಕೊಟ್ಟ

ರಿಕ್ಷಾ ವಿಶ್ರಾಂತಿ ಶೆಡ್‌ನ‌ಲ್ಲಿ ಬಸ್‌ ನಿಯಂತ್ರಕರು ಕೂತಿದ್ದು ಬೋರ್ಡಿನ ಮೇಲಿದ್ದ ದಿನಕರ ಶೆಟ್ಟಿಯವರ ಮತ್ತು ಬಿಜೆಪಿ ಕಮಲದ ಚಿಹ್ನೆ ಮೇಲೆ ಕಾಗದ ಅಂಟಿಸಿದ್ದು ಯಾಕೆ ಎಂಬುದು ಅರ್ಥವಾಗಲಿಲ್ಲ. ರಿಕ್ಷಾದವರು ಉದಾರವಾಗಿ ಬಿಟ್ಟುಕೊಡದಿದ್ದರೆ ನಿಯಂತ್ರಕರೂ ಹಾದಿ ಮೇಲೆ ನಿಲ್ಲಬೇಕಿತ್ತು. ಬಂದರದಲ್ಲಿ ಸ್ಥಳವಿದೆ, ಅಲ್ಲಿ ಹೋಗಿ ಬರಲು ರಸ್ತೆ ಕಿರಿದಾಗಿದೆ. ಈ ಹಂಗಾಮಿ ವ್ಯವಸ್ಥೆಯನ್ನು ಜನ ಒಪ್ಪಿಕೊಂಡಿದ್ದಾರೆ. ಆದರೆ ಬಸ್‌ ಸ್ಟ್ಯಾಂಡ್‌ ನಿರ್ಮಾಣವಾಗಲು ಕನಿಷ್ಠ ಎರಡು ವರ್ಷ ಬೇಕು. ಅಷ್ಟರವರೆಗೆ ಸಮಸ್ಯೆಯ ಸರಮಾಲೆ ತಪ್ಪದು. ಹಂಗಾಮಿ ಬಸ್‌ ಸ್ಟ್ಯಾಂಡ್‌ ನಿರ್ಮಾಣವಾದ ಮೇಲೆ ಹಳೆಯ ಬಸ್‌ ಸ್ಟ್ಯಾಂಡ್‌ ಕಳಚಿದ್ದರೆ ಸರಿಯಾಗುತ್ತಿತ್ತು. ಯಾರ ಮಾತೂ ಕೇಳದ ಹಳೆ ಬಸ್‌ ಸ್ಟ್ಯಾಂಡ್‌ ಮುರಿಯುವವರು ಮುರಿದುಕೊಂಡು ಹೋದರು, ಹೊಸದು ಕಟ್ಟುವವರು ಹೊರಹಾಕಿದರು. ಸಾರಿಗೆ ಅಧಿಕಾರಿಗಳು ತಮಾಷೆ ನೋಡುತ್ತಿದ್ದಾರೆ. ಪತ್ರಿಕೆಗಳು ಸಲಹೆ ನೀಡಿದರೂ ಕಾಲಕಸ ಮಾಡಿದರು. ಶಾಸಕರು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜನ ಬಯಸಿದ್ದಾರೆ. ಸದ್ಯಕ್ಕಂತೂ ಬಸ್‌ ಸ್ಟ್ಯಾಂಡ್‌ ಗೆ ರಸ್ತೆಯೇ ವಿಳಾಸ, ರಸ್ತೆಯಲ್ಲೇ ವಾಸ.

 

ಜೀಯು, ಹೊನ್ನಾವರ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.