ಅಭಿವೃದ್ಧಿ ಯೋಜನೆ ಹೆಸರೆತ್ತಿದರೆ ಜಿಲ್ಲೆ ಜನ ಬೆಚ್ಚಿ ಬೀಳ್ತಾರೆ!


Team Udayavani, Sep 30, 2018, 5:04 PM IST

30-sepctember-22.gif

ಹೊನ್ನಾವರ: ಸ್ವಾತಂತ್ರ್ಯಕ್ಕಾಗಿ ಸ್ವಂತ ಖುಷಿಯಿಂದ ಆಸ್ತಿ-ಪಾಸ್ತಿ, ಆಯುಷ್ಯ, ಆರೋಗ್ಯ ಕಳೆದು ಕೊಂಡು ಹೋರಾಡಿ ಇತಿಹಾಸ ಸೃಷ್ಟಿಸಿದ ಜಿಲ್ಲೆ ಜನ ಸ್ವಾತಂತ್ರ್ಯಾ ನಂತರ ಅಭಿವೃದ್ಧಿ ಯೋಜನೆಗಳು ಎಂದರೆ ನಿದ್ದೆಗೆಡುತ್ತಾರೆ, ಚಳಿಯಲ್ಲಿ ಬೆವರುತ್ತಾರೆ, ಬೆಚ್ಚಿ ಬೀಳುತ್ತಾರೆ ಯಾಕೆ ?

ನೆರೆ ಜಿಲ್ಲೆಯಂತೆ ಅಭಿವೃದ್ಧಿಯಾಗಬೇಕು, ಮಕ್ಕಳಿಗೆ ಉದ್ಯೋಗ ದೊರೆಯಬೇಕು, ಸೌಲಭ್ಯ ಹೆಚ್ಚಬೇಕು ಎಂಬ ಆಸೆ ಜಿಲ್ಲೆಯ ಜನಕ್ಕಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಬಂದ ಯೋಜನೆಗಳು ಜನರನ್ನು ಬೀದಿಪಾಲು ಮಾಡಿದವು. ಪರಿಹಾರ ಸರಿಯಾಗಿ ದೊರೆಯಲಿಲ್ಲ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ 25ವರ್ಷ ಕಳೆದರೂ ನ್ಯಾಯ ಸಿಗಲಿಲ್ಲ. ಒಂದಲ್ಲ ಎರಡಲ್ಲ ಜಿಲ್ಲೆಗೆ ಬಂದ ಹತ್ತಾರು ಅಭಿವೃದ್ಧಿ ಯೋಜನೆಗಳಲ್ಲಿ ಅಪವಾದ ಎಂಬಂತೆ ಕೊಂಕಣ ರೇಲ್ವೆ ಹೊರತಾಗಿ ಉಳಿದೆಲ್ಲ ಯೋಜನೆಗಳು ಜಾರಿಯಾಗುವಾಗ ರಾಜಕಾರಣಿಗಳಿಂದ ನಿರ್ಲಕ್ಷ, ಅಧಿಕಾರಿಗಳಿಂದ ಶೋಷಣೆಗೊಳಗಾಗಿ ಜನ ಹೈರಾಣಾಗಿ ಹೋದರು. ಚತುಷ್ಪಥ ವಿಸ್ತರಣಾ ಯೋಜನೆಯಲ್ಲೂ ಅದೇ ನಡೆದಿದೆ.

ಸ್ವಾತಂತ್ರ್ಯ ಬಂದಾಗ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಯಿತು. ಸಾಗರದಿಂದ ಶಿರಸಿ ತನಕ ನಿರಾಶ್ರಿತರು ಬಂದು ನೆಲೆಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಈವರೆಗೆ ದೊರೆತಿಲ್ಲ. ಅಣೆಕಟ್ಟಿನ ಹಿನ್ನೀರಿನಲ್ಲಿ ನೆಲೆಸಿದವರ ಸಮಸ್ಯೆ ಪ್ರತಿವರ್ಷ ಪತ್ರಿಕೆಗಳಲ್ಲಿ ಬರುತ್ತಿದೆ. ಕಾಳಿಯೋಜನೆ ನಿರಾಶ್ರಿತರ ಪುನರ್ವಸತಿ ಯೋಜನೆಯನ್ನು ರಾಮನಗರದಲ್ಲಿ ಜಾರಿಗೊಳಿಸಲಾಗಿತ್ತು. ಅದು ಮುಗಿದಿಲ್ಲ. ಸೀಬರ್ಡ್‌ ಯೋಜನೆ ಜಾರಿಗೆ ಬರುವಾಗ ರಾಹುಲ್‌ ಗಾಂಧಿ ಇವರು ಮಾಡಿದ ತ್ಯಾಗಕ್ಕೆ ಬೆಲೆಕಟ್ಟಲಾಗದು ಒಬ್ಬ ನಿರಾಶ್ರಿತರ ಕಣ್ಣೀರು ನೆಲದ ಮೇಲೆ ಬೀಳದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಪುನರ್ವಸತಿ ದೊಡ್ಡ ರಾಮಾಯಣವೇ ಆಗಿಹೋಯಿತು. ಕೇಂದ್ರ ಮಾನವಹಕ್ಕುಗಳ ಆಯೋಗ ಜೀವ ಉಳಿಸಲು ನೆರವಾಯಿತು. ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಕಾಲುಶತಮಾನ ಕಳೆದರೂ ನ್ಯಾಯ ಮರೀಚಿಕೆಯಾಗಿದೆ. ಹಿರೇಗುತ್ತಿ, ಮಾದನಗೇರಿ ರೈತರನ್ನು ಬೀದಿಗೆಸೆಯಲಾಯಿತು. ಭೂಮಾಲಕರು ಪರಿಹಾರ ಜೇಬಿಗಿಳಿಸಿದರು. ಭೂಮಿ ಈಗಲೂ ಬರಡಾಗಿದೆ. ಶರಾವತಿ ಟೇಲರೀಸ್‌ಗೆ ಪುನರ್ವಸತಿ ಸಮಸ್ಯೆ ಬರಲಿಲ್ಲ, ಪುನಃ ಅರಣ್ಯ ನಿರ್ಮಾಣವನ್ನು ಬೇರೆ ಜಿಲ್ಲೆಯಲ್ಲಿ ಮಾಡುತ್ತೇವೆ ಎಂದು ಹಣ ಖಾಲಿ ಮಾಡಿದರು. ಕೈಗಾ ಪುನರ್ವಸತಿ ಸಮಸ್ಯೆ ಬಗೆಹರಿದಿಲ್ಲ.

ಹಲವು ಕಡೆ ಬೈಪಾಸ್‌ ಕೇಳಿದರೂ ಕೊಡದೆ ವಿರೋಧವಿದ್ದ ಕುಮಟಾಕ್ಕೆ ಬೈಪಾಸ್‌ ಹೇರಲಾಗುತ್ತಿದೆ. ಮೂರು ವರ್ಷ ತೂಕಡಿಸಿದ ಕಂದಾಯ ಇಲಾಖೆ ಈಗ ಏಕಾಏಕಿ ಖಾಸಗಿ ಭೂಮಿ ಖುಲ್ಲಾಪಡಿಸುತ್ತಿದೆ. ಶಾಸಕ ದಿನಕರ ಶೆಟ್ಟಿ ಎದೆಗೊಟ್ಟು ನಿಲ್ಲದಿದ್ದರೆ ಹೊನ್ನಾವರ ಕುಮಟಾ ಮಧ್ಯೆ ನೂರಾರು ಕುಟುಂಬಗಳು ಪರಿಹಾರ, ಪುನರ್ವಸತಿ ಇಲ್ಲದೆ ಬೀದಿಪಾಲಾಗುತ್ತಿತ್ತು.

ತಮ್ಮದೇ ಸರ್ಕಾರದ ವಿರುದ್ಧ ಮಾದನಗೇರಿ, ಹಿರೇಗುತ್ತಿ ರೈತರ ಪರವಾಗಿ ಹೋರಾಡಿದ ಬಿ.ವಿ. ನಾಯ್ಕ ರಾಜಕೀಯ ಭವಿಷ್ಯ ಇತಿಶ್ರೀ ಆಯಿತು. ಕೈಗಾ, ಶರಾವತಿ ಟೇಲರೀಸ್‌ ವಿರುದ್ಧ ಹೋರಾಟ ನಡೆಸುತ್ತಾ ಕೈಸೋತ ಡಾ| ಕುಸುಮಾ ಆ ಕೆಲಸಕ್ಕೆ ಬೆಂಗಳೂರಿಗೆ ಹೊರಟಾಗಲೇ ಮಾರ್ಗ ಮಧ್ಯೆ ಅಪಘಾತಕ್ಕೀಡಾದರು. ಪ್ರೇಮಾನಂದ ಭಟ್‌ ಎಂಬ ಪ್ರಸಿದ್ಧ ಕೃಷಿಕ ದೇಶಕ್ಕೆ ಮಾದರಿಯಾದ ತೋಟ ನಿರ್ಮಿಸಿದ್ದರು. ಮೂರುಕಾಸು ಪರಿಹಾರ ನೀಡಿ ಅವರನ್ನು ಸೀಬರ್ಡ್‌ ಪ್ರದೇಶದಿಂದ ಹೊರತಳ್ಳಿದರು. ಹೇಗೋ ಇನ್ನೊಂದು ಕಡೆ ತೋಟ ಮಾಡಿದರು. ಅಲ್ಲಿಂದಲೂ ಎಬ್ಬಿಸಿದ್ದಾರೆ. ಇಂತಹ ಅಮಾನವೀಯ ಅದೆಷ್ಟೋ ಘಟನೆಗಳು ಪ್ರತಿಬಾರಿ ಪುನರ್ವಸತಿ ಕಾರ್ಯದಲ್ಲಿ ನಡೆದಿವೆ. ಕೊಂಕಣ ರೇಲ್ವೆ ವಶಪಡಿಸಿಕೊಂಡ ಭೂಮಿಯ ಎಡಬಲದ ಸಹಸ್ರಾರು ಎಕರೆ ಹಾಳುಬಿದ್ದಿದೆ. ಪೂರ್ವ ಪಶ್ಚಿಮವಾಗಿ ನೀರು ಹರಿದುಹೋಗಲು ಮಾಡಿದ ವ್ಯವಸ್ಥೆ ಕುಲಗೆಟ್ಟು ರಾಜಾಕಾಲುವೆಯಲ್ಲಿ ಮರಗಳು ಬೆಳೆದುನಿಂತ ಕಾರಣ ಸಣ್ಣ ಮಳೆಗೂ ನೆರೆ ಬರುತ್ತದೆ. ರೈತರು ಗದ್ದೆ ಮಾಡುವುದನ್ನು ಬಿಟ್ಟಿದ್ದಾರೆ.

ಜನ ಒಗ್ಗಟ್ಟಿನಿಂದ ಹೋರಾಡಿಲ್ಲ, 25-30ವರ್ಷಗಳಿಂದ ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಈ ಸಮಸ್ಯೆ ತಟ್ಟಲಿಲ್ಲ, ಅಧಿಕಾರಿಗಳಿಗೆ ಸುಗ್ಗಿಯಾಯಿತು. ಯೋಜನೆಯ ಲಾಭವೂ ಜನರಿಗೆ ಸಿಗಲಿಲ್ಲ. ಚತುಷ್ಪಥ ಕಾಮಗಾರಿಯಲ್ಲೂ ಇದೇ ಕಥೆ, ಇದೇ ವ್ಯಥೆ. ಆದ್ದರಿಂದಲೇ ಜನ ಯೋಜನೆ ಎಂದರೆ ನಡುಗುತ್ತಾರೆ, ಅಸಹಾಯರಾಗಿ ರಸ್ತೆಯಲ್ಲಿ ಕೂಗಾಡುತ್ತಾರೆ. ಇವರ ಅರಣ್ಯ ರೋದನ ಸಂಬಂಧಿ ಸಿದವರಿಗೆ ಕೇಳಿಸುವುದಿಲ್ಲ.

. ಜೀಯು, ಹೊನ್ನಾವರ

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.