ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್
Team Udayavani, May 25, 2022, 10:33 PM IST
ಶಿರಸಿ: ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರು ತಮ್ಮ ಸಂಶೋಧನಾ ಪ್ರಬಂಧಕ್ಕಾಗಿ ಕೆನಡಾ ದೇಶದ ಲಿಟರರಿ ಅವಾರ್ಡ ಪಡೆದಿದ್ದಾರೆ.
ಕೆನಡಾ ಹಾಗೂ ಭಾರತದ ರಂಗಭೂಮಿಯಲ್ಲಿ ಪ್ರೀತಿಯ, ಸೌಹಾರ್ದ ಪಯಣಕ್ಕೆ ಸಂಬಂಧಿಸಿ ಲವ್ ಇನ್ ಇಂಡಿಯಾ ಎಂಡ್ ಇಂಡೀಜಿನಿಯಸ್ ಥಿಯೇಟರ್ ಇನ್ ಕೆನಡಾ ಎಂಬ
ಪ್ರಬಂಧಕ್ಕೆ ಕೆನಡಾದ ಪ್ರತಿಷ್ಠಿತ ಪುರಸ್ಕಾರ ಅರಸಿ ಬಂದಿದೆ.
ಶೀತಲ್ ಅವರು ನಾಡಿನ ಹೆಸರಾಂತ ರಂಗತಜ್ಞ ಡಾ.ಶ್ರೀಪಾದ ಭಟ್ ಮತ್ತು ಶಿಕ್ಷಕಿ ಶಾಂತಲಾ ಭಟ್ ಅವರ ಪುತ್ರಿ. ಪಿಯುಸಿ ವರೆಗೂ ಸರ್ಕಾರಿ ಶಾಲೆಗಳಲ್ಲಿ ಕಲಿತ ಈಕೆ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಣಿಪಾಲದ ಎಂ.ಸಿ.ಪಿ.ಎಚ್. ಸೆಂಟರಿನಲ್ಲಿ ಗಳಿಸಿದ್ದರು. ಈಗ ಕೆನಡಾದ ವಿಶ್ವವಿದ್ಯಾಲಯ ವೆಸ್ಟರ್ನ್ ಒಂಟೋರಿಯಾದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.
ಶೀತಲ್ ಭಟ್ ಅವರ ಮೊದಲ ಪುಸ್ತಕ ಪರ್ಪಾರಿಂಗ್ ಸೆಲ್ಪ ಹಾಗೂ ಪರ್ಪಾರಿಂಗ್ ಜೆಂಡರ್ ಪುಸ್ತಕವನ್ನು ಮಣಿಪಾಲ ಯುನಿವರ್ಸಿಟಿ ಪ್ರೆಸ್ ಮುದ್ರಿಸಿತ್ತು. ಶೀತಲ್ ರ ಸಂಶೋಧನಾ ಪ್ರಬಂಧಗಳಿಗೆ ಈಗಾಗಲೇ ಅಂತರಾಷ್ಟ್ರೀಯ ಫೆಡರೇಶನ್ ಆಫ್ ಥೀಯೇಟರ್ ರಿಸರ್ಚ ಸಂಸ್ಥೆಯಿಂದ ಹೆಲ್ಸಿಂಕಿ ಪ್ರಶಸ್ತಿ ಮತ್ತು ಇಂಟರನ್ಯಾಶನಲ್ ಅಸೋಸೊಯೇಶನ್ ಫಾರ್ ಪೆಂಟಾಸ್ಟಿಕ್ ಇನ್ ದಿ ಆರ್ಟ್ಸನಿಂದ ಅತ್ಯುತ್ತಮ ಸ್ಕಾಲರ್ ಪ್ರಶಸ್ತಿ ಸಂದಿದೆ. ಇದೀಗ ತನ್ನ ಸಂಶೋಧನೆಗಾಗಿ ಕೆನಡಾ ದೇಶದ ಲಿಟರರಿ ಅವಾರ್ಡ್ ಪಡೆದಿದ್ದು ಉತ್ತರ ಕನ್ನಡಕ್ಕೆ ಹೆಮ್ಮೆ ಮೂಡಿಸಿದೆ.
ಇದನ್ನೂ ಓದಿ : ವಾಡಿ : ಪ್ರೀತಿಸಿದ ಯುವತಿಯ ಸಹೋದರರಿಂದಲೇ ನಡೆಯಿತು ಯುವಕನ ಬರ್ಬರ ಹತ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ