ಲಾಕ್ಡೌನ್ ಸಡಿಲ; ಸಂಚಾರ ವಿರಳ
Team Udayavani, May 21, 2020, 4:58 AM IST
ಸಿದ್ದಾಪುರ: ಲಾಕ್ಡೌನ್ ಸಡಿಲಗೊಳಿಸಿದ್ದರೂ ಜನರು ಈಗಾಗಲೇ ಅದಕ್ಕೆ ಒಗ್ಗಿಕೊಂಡಿರುವ ಕಾರಣವೋ ಏನೋ ಪಟ್ಟಣದಲ್ಲಿ ಜನರು ಕಳೆದ ಎರಡು ತಿಂಗಳಿಂದ ಅನುಸರಿಸಿಕೊಂಡು ಬರುತ್ತಿರುವಂತೆ ಸಡಿಲಿಕೆ ಆದ ನಂತರವೂ ಅನುಸರಿಸುತ್ತಿರುವುದು ಕಂಡುಬಂದಿದೆ.
ಜಿಲ್ಲೆಯಲ್ಲಿ ಬೆಳಗಿನ 7ರಿಂದ ಸಂಜೆ 6ರ ವರೆಗೆ ಲಾಕ್ಡೌನ್ ಸಡಿಲಗೊಳಿಸಿದ್ದು, ಬುಧವಾರ ಪಟ್ಟಣದಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಅಲ್ಲದೇ ಸರಿಯಾಗಿ ಸಂಜೆ 6ಕ್ಕೆ ಅಂಗಡಿ, ಮಳಿಗೆಗಳನ್ನು ಮುಚ್ಚಿ ತಮ್ಮ ಮನೆಗಳತ್ತ ಸಾಗಿದ್ದರು. ಸಂಜೆ 6:30ರ ವೇಳೆಗೆ ಕಚೇರಿ, ಖಾಸಗಿ ಸಂಸ್ಥೆಗಳಿಂದ ತೆರಳುವ ಬೆರಳೆಣಿಕೆಯ ಉದ್ಯೋಗಿಗಳನ್ನು ಹೊರತುಪಡಿಸಿದರೆ ಜನರು ಸಂಚರಿಸದೇ ರಸ್ತೆಗಳು ಬಿಕೋ ಎನ್ನತೊಡಗಿದ್ದವು. ಅಧಿ ಕಾರಿಗಳು ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೆ ಸಾರ್ವಜನಿಕರೂ ಅದಕ್ಕೆ ಸ್ಪಂದಿಸುತ್ತಾರೆ ಎಂದು ಹಿರಿಯರೊಬ್ಬರು ಈ ದೃಶ್ಯವನ್ನು ಉದಾಹರಣೆಯಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ