ಕುಮಟಾ: ಪ್ರದೀಪ್ಗೆ ಬೆಂಬಲಿಸಲು ಸೂರಜ್ಗೆ ಮಧು ಮನವಿ!
Team Udayavani, Apr 24, 2018, 4:19 PM IST
ಕುಮಟಾ: ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಬಿಜೆಪಿ ಮುಖಂಡ ಸೂರಜ ನಾಯ್ಕರನ್ನು ಸೋಮವಾರ ಭೇಟಿಯಾಗಿ ಜೆಡಿಎಸ್ ಅಭ್ಯರ್ಥಿ ಪ್ರದೀಪ ಅವರಿಗೆ ಬೆಂಬಲ ನೀಡುವಂತೆ ಕೇಳಿಕೊಂಡರು. ಕುಮಟಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯವೆದ್ದಿದ್ದ ಸೂರಜ ನಾಯ್ಕರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಏಕಾಂತದಲ್ಲಿ ಮಾತನಾಡಿದರು.
ಬಳಿಕ ಅಭ್ಯರ್ಥಿ ಪ್ರದೀಪ ನಾಯಕ ದೇವರಬಾವಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ, ಮುಖಂಡ ಗಜು ನಾಯ್ಕ ಮತ್ತಿತರರನ್ನು ಸೇರಿಸಿಕೊಂಡು ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ತಂದೆ ದಿ.ಬಂಗಾರಪ್ಪ ಅವರ ಕಾಲದಿಂದಲೂ ಸೂರಜ್ ನಾಯ್ಕ ಕುಟುಂಬದೊಂದಿಗೆ ಸ್ನೇಹಯುತ ಸಂಬಂಧವಿದೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದಾಗ ನೋವಾಗುವುದು ಸಹಜ. ಜೆಡಿಎಸ್ಗೆ ಸೇರ್ಪಡೆಯಾಗಲು ಮುಕ್ತ ಅವಕಾಶ ಕಲ್ಪಿಸಿದ್ದೇನೆ . ಅಲ್ಲದೆ ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಸಂಬಂಧ ಅವರ ಜತೆಗೆ ಮಾತನಾಡಿದ್ದೇನೆ ಎಂದರು.