ಸಾರಾಯಿ ಮುಕ್ತ ಗ್ರಾಮವಾಗಿಸಿ
Team Udayavani, Feb 12, 2020, 4:19 PM IST
ಅಂಕೋಲಾ: ತಾಲೂಕಿನ ಅಗಸೂರು ಗ್ರಾಮ ಸಾರಾಯಿ ಮುಕ್ತ ಗ್ರಾಮವನ್ನಾಗೀಸಲು ಇಲ್ಲಿಯ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ತಾಪಂ ಇಒ ಪಿ.ವೈ.ಸಾವಂತಗೆ ಮಂಗಳವಾರ ಮನವಿ ಸಲ್ಲಿಸಿದರು.
ಅಗಸೂರು ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹಾವಳಿ ಹೆಚ್ಚಾಗಿದ್ದು ಇದನ್ನು ಸಂಪೂರ್ಣವಾಗಿ ನಿರ್ಮೂಲನೇ ಮಾಡಲು ಗ್ರಾ.ಪಂ. ಸದಸ್ಯ ಗೋಪಾಲ ನಾಯಕ ಅಡೂರು ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ ಮನವಿ ಸ್ವೀಕರಿಸಿದ ಪಿ.ವೈ. ಸಾವಂತ ಮದ್ಯಪಾನ ಮುಕ್ತ ಗ್ರಾಮವಾಗಿ ಹೋರಾಟ ಮಾಡುತ್ತಿರುವುದು ಇದೊಂದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಒಂದು ಮಾದರಿ ಸಂದೇಶವಾಗಿದೆ. ನಮ್ಮಿಂದ ಹೋರಾಗಾರ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಮತ್ತು ಸಂಬಂಧಪಟ್ಟ ಅಧಿಕಾರಿಗೆ ಸಹ ತಿಳಿಸುತ್ತೇನೆ ಎಂದರು. ಹೋರಾಟ ಸಮಿತಿ ಮುಖ್ಯಸ್ಥ ಗೋಪಾಲ ನಾಯಕ ಅಡೂರು ಮಾತನಾಡಿ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಅಕ್ರಮ ಸರಾಯಿ ಮಾರಾಟ ಹೆಚ್ಚಾಗುತ್ತಿದ್ದು, ಅದನ್ನು ಕಡಿವಾಣ ಹಾಕಲು ಪಣ ತೊಡಬೇಕಾದ ಸಂದರ್ಭ ಬಂದಿದೆ. ಸಾರಾಯಿ ಮುಕ್ತ ಗ್ರಾಮ ಮಾಡಬೇಕಾದರೆ ಸಾರ್ವಜನಿಕರ ಜೊತೆ ಸಂಬಂಧಪಟ್ಟ ಅಧಿಕಾರಿಗಳು ಕೈಜೋಡಿಸಬೇಕು.
ಇದಕ್ಕಾಗಿ ನಮ್ಮ ಗ್ರಾಪಂನಿಂದ ಕೆಲ ಸಾರಾಯಿ ಮಾರಾಟ ಮಾಡುವ ಗೂಡಂಗಡಿಯವರಿಗೆ ನೋಟಿಸ್ ಜಾರಿಗೆ ಮಾಡುತ್ತೇವೆ. ಸಾರಾಯಿ ಕಡಿವಾಣಕ್ಕೆ ಅಬಕಾರಿ ಇಲಾಖೆಯವರು ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಪಂ ಸದಸ್ಯೆ ನಿರ್ಮಾಲ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರಾಮಂಚ ನಾಯ್ಕ, ಉಪಾಧ್ಯಕ್ಷ ಯಶವಂತ ಗೌಡ, ಸದಸ್ಯ ರವಿ ನಾಯಕ, ಪ್ರಮುಖರಾದ ಶಂಕರ ಗೌಡ, ಸೋಮು ಗೌಡ, ರಾಮದಾಸ ನಾಯಕ, ವಸಂತ ಗೌಡ, ನೀಲಮ್ಮ ಗೌಡ, ಭಾರತಿ ಹರಿಕಂತ್ರ ಸೇರಿದಂತೆ ಹಲವರು ಮಾತನಾಡಿದರು. ಪಿಡಿಒ ಎಂ.ಯು. ಪಟೇಲ್, ಮಧುಸೂದನ ನಾಯಕ, ಲಕ್ಷ್ಮೀ ನಾಯಕ, ಚಂದ್ರಕಲಾ ಗೌಡ, ಜಾನಕಿ ಗೌಡ, ಗೀತಾ ಗೌಡ, ತುಳಸಿ ಗೌಡ, ಲಕ್ಷ್ಮೀ ನಾಯ್ಕ, ಶಾಂತಿ ಗೌಡ, ಇಂದಿರಾ ಗೌಡ, ಸರೋಜಾಗೌಡ, ಜಯಶ್ರೀ, ಶೀಲಾ ಗೌಡ, ಭವಾನಿ ಗೌಡ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ