ಎಂ.ಇ.ಎಸ್ ಪುಂಡಾಟಿಕೆಗೆ ತಕ್ಕ ಕಾನೂನು ಶಿಕ್ಷೆ ಆಗಲಿದೆ: ಸಚಿವ ಶಿವರಾಮ್ ಹೆಬ್ಬಾರ್
Team Udayavani, Dec 19, 2021, 7:34 PM IST
ಅಂಕೋಲಾ : ಎಂ.ಇ.ಎಸ್ ಕಾರ್ಯಕರ್ತರು ಈ ನಾಡಿನ ವಿಷಯದಲ್ಲಿ ತೋರುತ್ತಿರುವ ಪುಂಡಾಟಿಕೆಯನ್ನು ನಿಲ್ಲಿಸದೆ ಹೊದರೆ ಸರ್ಕಾರ ಅವರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಳ್ಳಲು ಸರಕಾರ ಹಿಂಜರಿಯುವುದಿಲ್ಲ ಎಂದು ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಅಂಕೋಲಾದಲ್ಲಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಅವರು , ಎಂಇಎಸ್ ಅವರಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಿಡದೆ ಅದು ಎಷ್ಟೇ ದೊಡ್ಡ ಶಕ್ತಿ ಇದ್ದರು ಮೆಟ್ಟಿ ನಿಲ್ಲುತ್ತೇವೆ. ಕಳೆದ ಹಲವು ವರ್ಷಗಳಿಂದ ಎಂ.ಇ.ಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಹಲವಾರು ರೀತಿಯಲ್ಲಿ ಪುಂಡಾಟಿಕೆಯನ್ನು ನಡೆಸುತ್ತಾ ಬಂದಿದ್ದು ವಿಧಾನಸಭೆಯಲ್ಲಿ 5 ರಷ್ಟು ಇದ್ದ ಎಂ.ಇ.ಎಸ್ ಶಾಸಕರ ಸಂಖ್ಯೆ ಈಗ ಸೊನ್ನೆಗೆ ಬಂದು ತಲುಪಿದೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅವರ ಸದಸ್ಯರ ಸಂಖ್ಯೆ ಬೆರಳೆಣಿಕೆಗೆ ಬಂದು ತಲುಪಿದೆ ಬೆಳಗಾವಿಯ ಜನ ಎಂ.ಇ.ಎಸ್ ಅಸ್ಥಿತ್ವ ಕಳೆದುಕೊಳ್ಳುವಂತೆ ಮಾಡಿದ್ದಾರೆ.
ಕಾನೂನನ್ನು ಕೈಗೆ ತೆಗೆದುಕೊಂಡು ಮಾಡುವ ಪುಂಡಾಟಿಕೆ ವಿರುದ್ಧ ಖಡಾಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಹೆಬ್ಬಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ