ಮುಂಡಗೋಡ : ಪಿಡಿಒ ಮೇಲೆ ಎಸ್ಡಿಎಮ್ಸಿ ಅಧ್ಯಕ್ಷನಿಂದ ಹಲ್ಲೆ
Team Udayavani, Sep 23, 2021, 7:52 PM IST
ಮುಂಡಗೋಡ : ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಎಸ್ಡಿಎಂಸಿ ಅಧ್ಯಕ್ಷನೊಬ್ಬ ಪಂಚಾಯಿತಿಗೆ ನುಗ್ಗಿ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಗೌಸಸಾಬ್ ಎಳ್ಳುರ ಎಂಬಾತನೆ ಹಲ್ಲೆ ಮಾಡಿದ ವ್ಯಕ್ತಿ. ನಂದಿಕಟ್ಟಾ ಪಂಚಾಯಿತಿ ಅಧಿಕಾರಿ ವೆಂಕಪ್ಪ ಕೆ.ಲಮಾಣಿ ಎಂಬಾತರೆ ಹಲ್ಲೆಗೊಳ್ಳಗಾದ ಅಧಿಕಾರಿ.
ಘಟನೆ ವಿವರ :
ನಂದಿಕಟ್ಟಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಗೌಸಸಾಬ್ ಮೌಲಾಲಿ, ಶಾಲಾವರಣದಲ್ಲಿರುವ ನಾಲ್ಕೈದು ಸಾಗುವಾನಿ ಮರಗಳನ್ನು ಕಡಿಯಲು ಎನ್ಒಸಿ ಪತ್ರಕ್ಕೆ ಕೋರಿ ಪಂಚಾಯಿತಿಗೆ ಜುಲೈ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದನಂತೆ. ಈ ಅರ್ಜಿ ಪರಿಶೀಲನೆ ನಡೆಸಿದ ಪಿಡಿಒ ವೆಂಕಪ್ಪ, ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಎನ್ಒಸಿ ಪತ್ರ ಪಡೆಯುವಂತೆ ಹಿಂಬರಹ ನೀಡಿದ್ದರು. ಈ ವಿಷಯಕ್ಕೆ ಕೋಪಗೊಂಡ ಗೌಸಸಾಬ್ ಪಿಡಿಒ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಸದ್ಯ ಪ್ರಕರಣವು ಮುಂಡಗೋಡ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ