ಮುಂಡಗೋಡ: ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲು
Team Udayavani, Mar 24, 2022, 11:01 AM IST
ಮುಂಡಗೋಡ: ಸ್ನೇಹಿತರ ಜೊತೆ ಈಜಲು ಹೊಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ಬುಧವಾರ ತಾಲೂಕಿನ ಮಳಗಿ ಧಮಾ೯ ಜಲಾಶಯದಲ್ಲಿ ನಡೆದಿದೆ.
ಭಟ್ಕಳ ತಾಲೂಕಿನ ಶಿರಾಲಿ ನಿವಾಸಿ ವಿನಾಯಕ (25) ಮೃತಪಟ್ಟ ಯುವಕ.
ವಿನಾಯಕ ಹಾಗೂ ಆತನ ಸ್ನೇಹಿತರು ಶಿರಸಿ ಮಾರಿಕಾಂಬಾ ಜಾತ್ರೆಗೆ ಬಂದು ದೇವಿಯ ದರ್ಶನ ಪಡೆದ ಬಳಿಕ ತಾಲೂಕಿನ ಮಳಗಿ ಜಲಾಶಯಕ್ಕೆ ಬಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಉಳ್ಳಾಲ: ಬಂಧಿಸಲು ಹೋದ ಎಸ್ಐಗೆ ಚೂರಿ ಇರಿದು ಪರಾರಿ; ಆರೋಪಿಯ ಸಹೋದರ ವಶಕ್ಕೆ
6 ಜನರಲ್ಲಿ ಇಬ್ಬರು ಜಲಾಶಯಕ್ಕೆ ಇಳಿದು ಈಜಲು ಹೋಗಿದ್ದರು. ಇದರಲ್ಲಿ ವಿನಾಯಕ ಎಂಬಾತ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮಳಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಯುವಕನ ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.