ಮುರ್ಡೇಶ್ವರ:ಆಟವಾಡುತ್ತಿದ್ದ ಬಾಲಕರಿಬ್ಬರು ಸಮುದ್ರ ಪಾಲು
Team Udayavani, Oct 3, 2017, 10:29 AM IST
ಭಟ್ಕಳ: ಮುರ್ಡೇಶ್ವರದ ಸಣ್ಣಬಾವಿ ಕಡಲ ತೀರದಲ್ಲಿ ಆಡವಾಡುತ್ತಿದ್ದ ಬಾಲಕರಿಬ್ಬರು ನೀರುಪಾಲಾದ ದಾರುಣ ಘಟನೆ ಸೋಮವಾರ ಸಂಜೆ ನಡೆದಿದ್ದು, ಮಂಗಳವಾರ ಇಬ್ಬರು ಬಾಲಕರ ಶವಗಳು ಕಾಯ್ಕಿಣಿ ತೀರ ಪ್ರದೇಶದಲ್ಲಿ ಪತ್ತೆಯಾಗಿವೆ.
ಮೃತ ಬಾಲಕರು ಗಣೇಶ್ ನಾಯ್ಕ(11), ವಿನಾಯಕ ನಾಯ್ಕ(13) ಎಂದು ತಿಳಿದು ಬಂದಿದೆ.
ಬಾಲಕರು ಕಾಣೆಯಾದ ಬೆನ್ನಲ್ಲೇ ಮನೆಯವರು ಹುಡುಕಾಟಕ್ಕಿಳಿದಿದ್ದರು.