ಪೂರ್ವ ಸಿದ್ಧತೆ ಕೈಗೊಳ್ಳದ ಪುರಸಭೆ
Team Udayavani, May 25, 2019, 4:27 PM IST
ಕುಮಟಾ: ಸಧ್ಯದಲ್ಲೇ ಮಳೆ ಆರಂಭವಾಗಲಿದೆ. ಮಳೆಗಾಲವನ್ನು ಎದುರಿಸಲು ಕೈಗೊಳ್ಳಬೇಕಾದ ಯಾವ ಕಾಮಗಾರಿಯನ್ನೂ ಇಲ್ಲಿನ ಪುರಸಭೆ ಈ ವರೆಗೂ ಆರಂಭಿಸಿಲ್ಲ. ಬೆಂಕಿ ಬಿದ್ದ ಮೇಲೆ ಬಾವಿ ತೋಡುವಂತಹ ಇವರ ಆಡಳಿತದ ಅವ್ಯವಸ್ಥೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.
23 ವಾರ್ಡ್ ಹೊಂದಿರುವ ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಪ್ರಮುಖ ಹಾಗೂ ಉಪ ರಸ್ತೆಗಳೆಂದು ನೂರಕ್ಕೂ ಅಧಿಕ ರಸ್ತೆಗಳಿವೆ. ಇವುಗಳ ಅಂಚಿನಲ್ಲಿ ಒಳಚರಂಡಿ ಕಾಮಗಾರಿ ನಡೆಸಿದ್ದರಿಂದ ಉಬ್ಬು ತಗ್ಗುಗಳು ನಿರ್ಮಾಣವಾಗಿವೆ.
ಇದರ ಹೊರತಾಗಿ ಅನೇಕ ರಸ್ತೆಗಳಿಗೆ ಗಟಾರಗಳಿವೆ. ಎಲ್ಲ ಗಟಾರಗಳು ಕಸ, ಹೂಳು ಹಾಗೂ ಗಿಡಗಳಿಂದ ಮುಚ್ಚಿಹೋಗಿವೆ. ಮುಚ್ಚಿರುವ ಗಟಾರವನ್ನು ಸ್ವತ್ಛಗೊಳಿಸದಿದ್ದರೆ ಮತ್ತು ರಸ್ತೆಗಳಲ್ಲಿ ನಿರ್ಮಾಣವಾಗಿರುವ ಉಬ್ಬು ತಗ್ಗುಗಳನ್ನು ಸರಿಪಡಿಸದಿದ್ದರೆ ಮಳೆಗಾಲದಲ್ಲಿ
ಸುರಿಯವ ನೀರು ಸರಾಗವಾಗಿ ಹೋಗಲು ಸಾಧ್ಯವೇ ಇಲ್ಲ.
ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದಾಗಿ ಕಳೆದ ಸಾಲಿನ ಮಳೆಗಾಲದಲ್ಲಿ ಅನೇಕ ರಸ್ತೆಯಲ್ಲಿ ಜನರು ಓಡಾಟ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕೆಲಕಡೆಗಳ ಗಟಾರಗಳು ಮುಚ್ಚಿಹೋಗಿರುವುದರಿಂದ ಅಂಗಡಿ ಮುಂಗಟ್ಟುಗಳಿಗೆ ನೀರೇರಲಾರಂಭಿಸಿದ್ದವು. ಇದರಿಂದ ಬೇಸತ್ತ ಜನತೆ ಆಗಾಗ ರಸ್ತೆ ತಡೆದು, ಪ್ರತಿಭಟನೆ ನಡೆಸಿದ್ದರು. ಇಷ್ಟೆಲ್ಲಾ ಆದರೂ ಸಹ ಪುರಸಭೆ ಇನ್ನೂ ಪಾಠ ಕಲಿತಂತಿಲ್ಲ ಎಂಬುದಕ್ಕೆ ಈ ಸಲದ ಮಳೆಗಾಲವನ್ನು ಎದುರಿಸಲು ಕೈಗೊಂಡಿರದ ಪೂರ್ವ ಸಿದ್ಧತೆಯೇ ಸಾಕ್ಷಿ
ಏನಾಗಬೇಕು: ಮಳೆ ಬೀಳುವ ಮುನ್ನವೇ ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಯ ಗಟಾರಗಳಲ್ಲಿನ ಮಣ್ಣು, ಗಿಡ ಹಾಗೂ ಕಸಗಳನ್ನು ಸ್ವಚ್ಛಗೊಳಿಸುವ ಕಾರ್ಯವಾಗಬೇಕು. ಕೆಲಕಡೆಗಳ ಅನಾದಿಕಾಲದ ಗಟಾರಗಳು ಸಂಪೂರ್ಣ ಮುಚ್ಚಿಹೋಗಿವೆ. ಇದರಿಂದಾಗಿ ಮಳೆಗಾಲದಲ್ಲಿ ತ್ಯಾಜ್ಯನೀರು ಕೆಲ ಮನೆ ಹಾಗೂ ಅಂಗಡಿಗಳಿಗೆ ನುಗ್ಗುವ ಭೀತಿ ಎದುರಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಪುನಃ ಗಟಾರವನ್ನು ಕೊರೆಯುವ ಕಾರ್ಯವಾಗಬೇಕು.
ಕಳೆದ ವರ್ಷ ಮಳೆಗಾಲದ ಮುಂಚಿತವಾಗಿ ಪುರಸಭೆಗೆ ಗಟಾರದ ಸಮಸ್ಯೆಯ ಕುರಿತು ತಿಳಿಸಿದ್ದೆವು. ಆದರೆ ಮಳೆ ಬೀಳುವ ಮೊದಲು ಯಾವ ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿರಲಿಲ್ಲ. ಇದರಿಂದಾಗಿ ಎರಡು ಮೂರು ಬಾರಿ ನಮ್ಮ ಅಂಗಡಿಯೊಳಗೆ ನೀರು ನುಗ್ಗಿತ್ತು. ಪುರಸಭೆ ಈ ಬಾರಿಯಾದರೂ ಮಳೆ ಬೀಳುವ ಮುನ್ನವೇ ಗಟಾರವನ್ನು ಸ್ವಚ್ಛಗೊಳಿಸಲಿ.
•ಸಂಜಯ ನಾಯ್ಕ, ಗೂಡಂಗಡಿಕಾರ.
ಕೆ. ದಿನೇಶ ಗಾಂವ್ಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್