ನಾ.ಸು. ಭರತನಹಳ್ಳಿಗೆ ನುಡಿನಮನ
Team Udayavani, Jan 31, 2021, 4:11 PM IST
ಯಲ್ಲಾಪುರ: ತಾಲೂಕು ಕಸಾಪ ಆಶ್ರಯದಲ್ಲಿ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ದಿ| ನಾ.ಸು ಭರತನಹಳ್ಳಿ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ನಾ.ಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬರಹಗಾರ ಡಾ| ಶ್ರೀಧರ ಬಳಗಾರ ಮಾತನಾಡಿ, ನಾವು ಸಾಹಿತ್ಯ ಪರಿಷತ್ತಿನ ಮೂಲಕ ಸಾಹಿತ್ಯ ಸೇವೆ ನಿರಂತರವಾಗಿ ನಡೆಸಿದರೆ ಅದು ನಾ.ಸು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು.
ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ನಾಸು ಅವರ ಕಾರ್ಯವೈಖರಿ ಎಲ್ಲರಿಗೂ ಅಚ್ಚರಿ ತರುವಂಥದ್ದು. ಅವರು ಸಾಮಾಜಿಕ ಹಾಗೂ ಸಾಹಿತ್ಯಕವಾಗಿ ನಡೆದು ಬಂದ ಪರಿ ಮತ್ತು ವಹಿಸಿದ ಶ್ರಮ ಅಗಾಧ ಎಂದರು.
ಇದನ್ನೂ ಓದಿ:ಮೇ 22ಕ್ಕೆ ಜೀವ ವೈವಿಧ್ಯ ದಿನಾಚರಣೆ
ನಿವೃತ್ತ ತಹಶೀಲ್ದಾರ್ ದಿನಮಣಿ ಹೆಗಡೆ, ತಾಲೂಕು ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಶಿಕ್ಷಕ ಸತೀಶ ಯಲ್ಲಾಪುರ, ಉಪನ್ಯಾಸಕ ಸುಬ್ರಹ್ಮಣ್ಯ ಭಟ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಶಿಕ್ಷಕ ಗಂಗಾಧರ ಎಸ್.ಎಲ್ ಹಾಗೂ ಜೆ.ಎನ್. ಭಟ್ಟ ನುಡಿನಮನ ಸಲ್ಲಿಸಿದರು.