ಅಂಕೋಲಾ ಸಾರಿಗೆ ಘಟಕ ಗುಜರಿ ಅಡ್ಡೆ


Team Udayavani, Dec 23, 2019, 4:49 PM IST

uk-tdy-3

ಅಂಕೋಲಾ: ಇಲ್ಲಿನ ಸಾರಿಗೆ ಸಂಸ್ಥೆ ಘಟಕ ಸಾಕಷ್ಟು ಗುಜರಿ ಬಸ್‌ಗಳಿಂದ ಕೂಡಿದ್ದು, ಗುಜರಿ ಅಡ್ಡೆಯಾಗಿ ಮಾರ್ಪಟ್ಟಿದೆ! ಕಿತ್ತೂಗಿರುವ ಆಸನ, ಗಡಗಡ ಅಲುಗಾಡುವ ಕಿಟಕಿ, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ವಾಹನ, ಮಳೆ ಬಂದರೆ ಸೋರುವ ಬಸ್‌ ಅಂಕೋಲಾ ಘಟಕದಲ್ಲಿದೆ.

ಅಂಕೋಲಾ ಸಾರಿಗೆ ಘಟಕದಲ್ಲಿ ಗ್ರಾಮೀಣ ಮಾರ್ಗಗಳೇ ಹೆಚ್ಚಾಗಿದ್ದು, ಈ ಮಾರ್ಗಗಳೇ ಆದಾಯದ ಮೂಲಗಳಾಗಿವೆ. ಆದರೆ ಈ ಮಾರ್ಗಗಳಲ್ಲಿ ಸಂಚರಿಸುವ ಗುಜರಿ ಬಸ್‌ಗಳು ಮಾತ್ರ ಪ್ರಯಾಣಿಕರಿಗೆ ಹಿಂಸೆ ನೀಡುತ್ತಿವೆ.

ಹಳೇ ಬಸ್‌ ಓಡಿಸಿದರೆ ಬಡ್ತಿ: ಹಳೆಯದಾದ ಗರಿಷ್ಠ ಕಿ.ಮೀ ಓಡಿಸಿದ ಬಸ್‌ಗಳನ್ನು ಬಳಸಿದ ಡಿಪೋ ಅಧಿಕಾರಿಗಳಿಗೆ ಇಲಾಖೆ ಉತ್ತಮ ಅಧಿಕಾರಿಯೆಂದು ಪ್ರಮೋಶನ್‌ ನೀಡುತ್ತದೆ. ಹೀಗಾಗಿ ಅಧಿಕಾರಿಗಳು ಹಳೆ ಬಸ್ಸುಗಳನ್ನು ತೆಗೆದು ಹಾಕುವುದಿಲ್ಲ. ಬದಲಾಗಿ ಹೊಸ ಬಸ್ಸುಗಳನ್ನು ತರಿಸಿದರೆ ಮೇಲಾಧಿಕಾರಿಗಳು ಆ ಬಸ್‌ಗಳ ಗರಿಷ್ಠ ಆದಾಯ ನಿರೀಕ್ಷಿಸುತ್ತಾರೆ. ಇದು ಅಧಿಕಾರಿಗಳಿಗೆ ತಲೆನೋವಾಗುವುದರಿಂದ ಕೆಲ ಅಧಿಕಾರಿಗಳು ಹೊಸ ಬಸ್‌ ತರಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎನ್ನುತ್ತಾರೆ ಸಿಬ್ಬಂದಿವರ್ಗದವರು. ಕಳೆದ ಮಾರ್ಚ್‌ನಲ್ಲಿ ಎರಡು ಹೊಸ ಬಸ್‌ ಬಂದಿರುವುದು ಬಿಟ್ಟರೆ ವರ್ಷ ಪೂರ್ತಿ ಗುಜರಿ ಬಸ್‌ಗಳದ್ದೆ ಕಾರುಬಾರು.

ಬಿಡಿಬಾಗಗಳೇ ಇಲ್ಲ: ಯಾವುದೇ ಬಸ್‌ ಗಳು ಕೆಟ್ಟಿದರೆ ಅವುಗಳನ್ನು ದುರಸ್ತಿ ಮಡಲು ಘಟಕದಲ್ಲಿ ಬಿಡಿಭಾಗಗಳೇ ಸಮರ್ಪಕವಾಗಿ ಇಲ್ಲ. ಬಸ್‌ಗಳ ದುರಸ್ತಿ ಸಮಯದಲ್ಲಿ ಒಂದು ಬಸ್‌ ನಿಂದ ಇನ್ನೊಂದು ಬಸ್‌ಗೆ ಬಿಡಿಭಾಗ ವರ್ಗಾಯಿಸಿ ದುರಸ್ತಿ ಮಾಡುವಂತಹ ಪರಿಸ್ಥಿತಿ ಅಂಕೋಲಾ ಘಟಕದ್ದಾಗಿದೆ. ಇದರಿಂದಾಗಿ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿಯಿದೆ.

ಗುಜರಿ ಬಸ್‌ ಸಂಖ್ಯೆಯೇ ಹೆಚ್ಚು : ಅಂಕೋಲಾ ಘಟಕದಲ್ಲಿ 56 ರೂಟ್‌ಗಳು ಪ್ರತಿನಿತ್ಯ ಚಾಲನೆಯಲಿದ್ದು, ಇಲ್ಲಿ ಸಂಚರಿಸಲು 59 ಬಸ್‌ಗಳು ಮಾತ್ರ ಇಲ್ಲಿವೆ. ಸಾರಿಗೆ ನಿಯಮದ ಪ್ರಕಾರ 8 ಲಕ್ಷ ಕಿಮೀ ಮುಗಿದರೆ ಅದು ಗುಜರಿಗೆ ಸೇರಿಸಬೇಕು. ಇಲ್ಲಿ 14 ಲಕ್ಷ ಕಿಮೀ ಒಡಾಟ ನಡೆಸಿದರು ಗುಜರಿಗೆ ಸೇರದೆ ಘಟಕದಲ್ಲಿಯೇ ಇದೆ. ಘಟಕದಲ್ಲಿರುವ 59 ಬಸ್‌ನಲ್ಲಿ 25 ಬಸ್‌ ತನ್ನ ಒಡಾಟದ ಸಾಮರ್ಥ್ಯ ಮುಗಿಸಿಕೊಂಡು ಗುಜರಿ ಸೇರಿವೆ. ಆದರು ಈ ಬಸ್‌ ಗಳನ್ನು ಈ ಘಟಕದ ಅ ಧಿಕಾರಿಗಳು ರೂಟ್‌ಗಳಲ್ಲಿ ಚಲಾಯಿಸಿ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುವ ಡಕೋಟ್‌ ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ ಸಾರಿಗೆ ಘಟಕ ಅಧಿಕಾರಿಗಳು ಪ್ರಯಾಣಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಡಕೋಟಾ ಬಸ್‌ಗಳನ್ನು ತೆಗೆದು ಉತ್ತಮ ಬಸ್‌ಗಳನ್ನು ಓಡಾಟಕ್ಕೆ ಬಿಡದಿದ್ದರೆ ಸಂಘಟನೆ ವತಿಯಿಂದ ಬಸ್‌ ನಿಲ್ದಾಣ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು. ಉಮೇಶ ನಾಯ್ಕ, ವಕೀಲರು

 

-ಅರುಣ ಶೆಟ್ಟಿ

ಟಾಪ್ ನ್ಯೂಸ್

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.