ಪರೇಶ್ ಮೇಸ್ತ ಸಾವು: ಮತ್ತೋರ್ವನ ಬಂಧನ
Team Udayavani, Feb 5, 2018, 6:45 AM IST
ಹೊನ್ನಾವರ: ಪರೇಶ್ ಮೇಸ್ತ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ಮತ್ತೋರ್ವ ಆರೋಪಿ ಅಸೀಫ್ ರಫೀಕ್ ಎಂಬಾತನನ್ನು ಹೊನ್ನಾವರ ಪೊಲೀಸರು ಭಟ್ಕಳದ ಶಿರಾಲಿ ಬಳಿ ಬಂಧಿಸಿದ್ದಾರೆ.
ಈತ ಪರೇಶ್ ನಿಗೂಢ ಸಾವಿನ ಬಳಿಕ ತಲೆಮರೆಸಿಕೊಂಡಿದ್ದ. ಪ್ರಕರಣದ ಪ್ರಮುಖ ಆರೋಪಿ ಆಜಾದ್ ಅಣ್ಣಿಗೇರಿ ಈಗಾಗಲೇ ಬಂಧಿ ತನಾಗಿದ್ದು, ಇನ್ನಿತರ ನಾಲ್ವರು ಆರೋಪಿಗಳಲ್ಲಿ ಸಲೀಂ ಶೇಖ್ ಎಂಬಾತನನ್ನು ಸಾಗರದಲ್ಲಿ ಶುಕ್ರವಾರ ತಡರಾತ್ರಿ ಪೊಲೀಸರು ಬಂ ಧಿಸಿದ್ದರು. ಇದೀಗ ಮೂರನೇ ಆರೋಪಿ ಅಸೀಫ್ ರμàಕ್ ಸಹ ಶಿರಾಲಿಯಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದು, ಇನ್ನಿಬ್ಬರು ಆರೋಪಿತರಾದ ಮಹಮ್ಮದ್ ಫೈಸಲ್ ಅಣ್ಣಿಗೇರಿ, ಇಮಿ¤ಯಾಜ್ ಗನಿ ಅವರನ್ನು ಬಂಧಿ ಸಲು ಪೊಲೀಸರ ತಂಡ ಕಾರ್ಯಾಚರಣೆ ಮುಂದುವರಿಸಿದೆ.