ಅರ್ಧದಿನ ಬಂದ್‌ಗಿಂತ ಜನರಿಂದ ನಿಯಮ ಪಾಲನೆ ಅಗತ್ಯ


Team Udayavani, Jul 9, 2020, 3:56 PM IST

ಅರ್ಧದಿನ ಬಂದ್‌ಗಿಂತ ಜನರಿಂದ ನಿಯಮ ಪಾಲನೆ ಅಗತ್ಯ

ಸಾಂದರ್ಭಿಕ ಚಿತ್ರ

ಹೊನ್ನಾವರ: ಜಿಲ್ಲೆಯ ಕುಮಟಾ, ಅಂಕೋಲಾ, ಭಟ್ಕಳಗಳಲ್ಲಿ ಮಧ್ಯಾಹ್ನ 2ರ ನಂತರ ಎಲ್ಲ ವ್ಯವಹಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಕೊರೊನಾ ತಡೆಗೆ ಎಷ್ಟು ಅನುಕೂಲ ಎಂಬುದನ್ನು ಅಧ್ಯಯನ ಮಾಡಿದಂತಿಲ್ಲ. ಮೂರು ತಿಂಗಳು ಸುಮಾರು ಪೂರ್ತಿ ಬಂದ್‌ ಆಚರಿಸಲಾಯಿತು, ಆಗ ಸಮಾಧಾನವಿತ್ತು.
ವ್ಯವಹಾರ ನಿಂತರೂ ಜೀವ ಉಳಿದಿತ್ತು. ಮುಂಬೈ, ಬೆಂಗಳೂರಿನಿಂದ ಜನ ಬರತೊಡಗಿದ ಮೇಲೆ ಜಿಲ್ಲೆಯಲ್ಲಿ ಕೋವಿಡ್‌ ವಿಸ್ತರಿಸುತ್ತಿದೆ. ಇನ್ನೂ ಹೊರಗಿನ ಜನ ನಿತ್ಯವೂ ಬರುತ್ತಿದ್ದಾರೆ. ಭಟ್ಕಳದಲ್ಲಿ ತೀವ್ರಸ್ವರೂಪ ಪಡೆದಿರುವುದರಿಂದ ಅರ್ಧದಿನ ಜಿಲ್ಲಾಧಿಕಾರಿಗಳು ಲಾಕ್‌ ಡೌನ್‌ ಘೋಷಿಸಿದ್ದಾರೆ. ಇದರಿಂದ ಸ್ಫೂರ್ತಿಗೊಂಡವರಂತೆ ಕುಮಟಾ, ಅಂಕೋಲಾ ಸ್ವಯಂ ಲಾಕ್‌ಡೌನ್‌ ಘೋಷಣೆಯಾಗಿದ್ದು, ಹೊನ್ನಾವರ ಸಿದ್ಧತೆಯಲ್ಲಿದೆ. ಕೆಲವು ವೃತ್ತಿಯವರು ಅರ್ಧದಿನ ಬಂದ್‌ ಘೋಷಿಸಿದ್ದಾರೆ.

ಸಂಜೆ ಬಂದ್‌ ಆದರೆ ಜನ ತಮ್ಮ ಕೆಲಸವನ್ನು ಅರ್ಧದಿನದಲ್ಲಿ ಮುಗಿಸಲು ಧಾವಿಸಿ ಬರುತ್ತಾರೆ. ದಟ್ಟಣೆಯೇನೂ ಕಡಿಮೆಯಾಗುವುದಿಲ್ಲ. ಸಂಜೆ ತಲೆ ಎತ್ತಲಾರಂಭಿಸಿದ ಗೂಡಂಗಡಿ, ತರಕಾರಿ, ಹಣ್ಣುಹಂಪಲು ವ್ಯಾಪಾರ ಸ್ಥಗಿತವಾಗಿ ಅವರ ಹೊಟ್ಟೆಗೆ ಕಲ್ಲುಬೀಳುತ್ತದೆ. ಗ್ರಾಮೀಣ ಬಸ್‌ಗಳು ಓಡಾಡುವುದಿಲ್ಲ. ಹೇಗೋ ಜನ 10ಗಂಟೆಗೆ ಬಂದರೆ ಮರಳಿ ಹೋಗುವ ಧಾವಂತದಲ್ಲಿರುತ್ತಾರೆ. ಹೊಟೇಲ್‌ನಲ್ಲಿ ಮಾಡಿದ ತಿಂಡಿಗಳು ಹಾಳಾಗುತ್ತವೆ. ಇದರಿಂದ ಅಂಗಡಿಕಾರರಿಗೂ, ಉದ್ಯೋಗಿಗಳಿಗೂ, ಸಣ್ಣಪುಟ್ಟ ಕೈಗಾರಿಕೆ ನಡೆಸುವವರಿಗೂ ತೊಂದರೆ. ಅರ್ಧದಿನ ಬಂದ್‌ ಮಾಡಿದರೆ ವ್ಯವಹಾರದ
ಮಟ್ಟಿಗೆ ಪೂರ್ತಿ ದಿನ ಬಂದ್‌ ಮಾಡಿದಂತೆ. ಜನ ಬರುವುದನ್ನು ತಡೆಯಲಾಗುವುದಿಲ್ಲ. ಇಂತಹ ಬಂದ್‌ಗಳು ಕೋವಿಡ್‌ ಎದುರಿಸಲು
ಸಹಕಾರಿಯೇ ? ಅಥವಾ ರಿಕ್ಷಾ ಸಹಿತ ಸಣ್ಣಪುಟ್ಟ ವ್ಯವಹಾರಸ್ಥರನ್ನು ಮುಳುಗಿಸಲು ಅರ್ಧದಿನ ಬಂದ್‌ ಆಚರಿಸಲಾಗುತ್ತಿದೆಯೇ ? ಜನ ಮಾಸ್ಕ್ ಧರಿಸದೆ ಓಡಾಡುತ್ತಾರೆ.

ಕಂಡಕಂಡಲ್ಲಿ ಉಗುಳುತ್ತಾರೆ, ಅಂತರ ಇಟ್ಟುಕೊಳ್ಳದೆ ಓಡಾಡುತ್ತಾರೆ. ಹೊರ ಜಿಲ್ಲೆಯಿಂದ ಬಂದವರನ್ನು ತುತ್ಛವಾಗಿ ಕಾಣುತ್ತಾರೆ. ಕೋವಿಡ್‌ ಬರದಿದ್ದರೂ
ರಿಕ್ಷಾದವರು ಇವರನ್ನು ಹತ್ತಿಸಿಕೊಳ್ಳುವುದಿಲ್ಲ. ಕ್ವಾರಂಟೈನ್‌ನಲ್ಲಿ ಉಳಿದು ಮನೆಗೆ ಹೋದರೂ ಸ್ವೀಕರಿಸಲು ಮನೆಯವರೂ, ಕೇರಿಯವರೂ
ಸಿದ್ಧರಿಲ್ಲ. ಇನ್ನು ಆಸ್ಪತ್ರೆಯಿಂದ ಮರಳಿದವರಿಗೆ ದೇವರೇ ಗತಿ. ಆಕಸ್ಮಾತ್‌ ಸತ್ತರೆ ಪಿಪಿಇ ಕಿಟ್‌ ಕೊಡುತ್ತೇವೆ, ಧರಿಸಿ ನಿಮ್ಮ ಪದ್ಧತಿಯಂತೆ ಸಂಸ್ಕಾರಮಾಡಿ ಎಂದರೂ ಮನೆಯ ಜನ ಮುಂದೆ ಬರುವುದಿಲ್ಲ. ಸ್ಮಶಾನದಲ್ಲಿ ಹೆಣ ಸುಡಲು ಬಿಡುವುದಿಲ್ಲ. ಕದ್ದುಮುಚ್ಚಿ ಹೆಣ ಸುಡಬೇಕಾದ ಪರಿಸ್ಥಿತಿ ಇದೆ. ಕೋವಿಡ್‌
ನವರಿಗೆ ದೂರ ಸ್ಮಶಾನ ಮಾಡಿ ಎಂದು ಜನಪ್ರತಿನಿಧಿಗಳೇ ಹೇಳುತ್ತಾರೆ. ಕ್ವಾರಂಟೈನ್‌ಗೆ ನಮ್ಮಲ್ಲಿ ಬೇಡ ಎಂದು ಹೋಟೆಲ್‌, ಹೊಸ್ಟೆಲ್‌ ಸುತ್ತಮುತ್ತಲಿನವರು ಹೇಳುತ್ತಾರೆ. ಮುಂಬೈ, ಬೆಂಗಳೂರಿನಿಂದ ಬಂದವರು ಕದ್ದುಮುಚ್ಚಿ ಮನೆ ಸೇರುತ್ತಾರೆ. ಹೊರಗಿನಿಂದ ಬಂದವರನ್ನೆಲ್ಲ ಕೋವಿಡ್‌ ಪೀಡಿತರಂತೆ ಕಾಣುತ್ತಾರೆ. ಈ
ಮನೋಭಾವ ಬದಲಾಗಿ ಯಾರು ಬಂದರೂ ಸಾಮಾನ್ಯ ಆರೋಗ್ಯದ ನಿಯಮಾವಳಿಯನ್ನು ಪಾಲಿಸಿ, ಸೋಂಕು ಬಂದವರನ್ನು ಸಾಂತ್ವನ ದೃಷ್ಟಿಯಿಂದ ನೋಡಿದರೆ ಮಾತ್ರ ಸಮಸ್ಯೆ ತಿಳಿಯಾಗುತ್ತದೆಯೇ ವಿನಃ ಎರಡು ಗಂಟೆಯವರೆಗೆ ವ್ಯಾಪಾರ ಮಾಡಿ ಬಂದ್‌ ಮಾಡುವುದರಿಂದ ಕೊರೊನಾ ತೊಲಗುವುದಿಲ್ಲ.
ಜನ ಬದಲಾಗದಿದ್ದರೆ ಕೊರೊನಾ ಓಡಿಸುವುದು ಕಷ್ಟ. ಇದನ್ನು ಜನ ಅರ್ಥಮಾಡಿಕೊಳ್ಳಲಿ. ಬಂದ್‌ನಿಂದ ಈಗಾಗಲೇ ಆರ್ಥಿಕ ವಲಯ ನೆಲಕಚ್ಚಿದ್ದು, ಮತ್ತೆ ಮತ್ತೆ ಬಂದ್‌ ಆಚರಣೆ ಎಂದಿಗೂ ತಲೆಎತ್ತದಂತೆ ಮಾಡುತ್ತದೆ.

ಜನ ಬದಲಾಗದಿದ್ದರೆ ನಿಯಂತ್ರಣ ಕಷ್ಟ
ಮುಂಬೈ, ಬೆಂಗಳೂರಿನಿಂದ ಬಂದವರು ಕದ್ದುಮುಚ್ಚಿ ಮನೆ ಸೇರುತ್ತಾರೆ. ಹೊರಗಿನಿಂದ ಬಂದವರನ್ನೆಲ್ಲ ಕೋವಿಡ್‌ ಪೀಡಿತರಂತೆ ಕಾಣುತ್ತಾರೆ. ಈ  ನೋಭಾವ ಬದಲಾಗಿ ಯಾರು ಬಂದರೂ ಸಾಮಾನ್ಯ ಆರೋಗ್ಯದ ನಿಯಮಾವಳಿಯನ್ನು ಪಾಲಿಸಿ, ಸೋಂಕು ಬಂದವರನ್ನು ಸಾಂತ್ವನ ದೃಷ್ಟಿಯಿಂದ ನೋಡಿದರೆ ಮಾತ್ರ ಸಮಸ್ಯೆ ತಿಳಿಯಾಗುತ್ತದೆಯೇ ವಿನಃ ಎರಡು ಗಂಟೆಯವರೆಗೆ ವ್ಯಾಪಾರ ಮಾಡಿ ಬಂದ್‌ ಮಾಡುವುದರಿಂದ ಕೊರೊನಾ ತೊಲಗುವುದಿಲ್ಲ. ಜನ
ಬದಲಾಗದಿದ್ದರೆ ಕೊರೊನಾ ಓಡಿಸುವುದು ಕಷ್ಟ.

ಜಿಯು

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Yakshagana ಕಲೆ ಅಪಾಯದಂಚಿನಲ್ಲಿ: ಪ್ರಭಾಕರ ಜೋಷಿ

Yakshagana ಕಲೆ ಅಪಾಯದಂಚಿನಲ್ಲಿ: ಪ್ರಭಾಕರ ಜೋಷಿ

crime (2)

Shocking; ಪತಿಯ ಮರ್ಮಾಂಗ ಹಿಸುಕಿ ಹತ್ಯೆಗೈದ ಪತ್ನಿ!

Dandeli; ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಂಭೀರ ಗಾಯ

1-asdsad

Dandeli ಯುವಕನ ಅಪಹರಣ; 2 ಕೋಟಿ ಬೇಡಿಕೆ: 18 ಗಂಟೆಯೊಳಗೆ ಅಪಹರಣಕಾರರ ಬಂಧನ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.