ಸೇತುವೆ ಇಲ್ಲವೆಂದು ಊರನ್ನೇ ತೊರೆದ ಜನ!
Team Udayavani, May 9, 2019, 4:40 PM IST
ಯಲ್ಲಾಪುರ: ತಾಲೂಕಿನ ಚಂದ್ಗುಳಿ ಗ್ರಾಪಂ ವ್ಯಾಪ್ತಿಯ ನಾಗುಂದ ಭಾಗದವರು ಸರಕಾರಕ್ಕೆ ಹಿಡಿಶಾಪ ಹಾಕುತ್ತ ಕಾಲು ಸಂಕದ ಮೇಲೆ ಓಡಾಡುತ್ತಿದ್ದಾರೆ. ಇಲ್ಲಿನ ಕೆಲ ಕುಟುಂಬಗಳು ಸೇತುವೆ ಇಲ್ಲವೆಂದು ಊರನ್ನೇ ತೊರೆದಿವೆ. ಚುನಾವಣೆ ವೇಳೆ ಕೋಟಿ ವೆಚ್ಚದ ಮಾತನಾಡುವ ಸರಕಾರಕ್ಕೆ ಈ ಜನರ ಕಷ್ಟ ಇನ್ನೂ ಕಂಡಿಲ್ಲ.
ಮಳಲಗಾಂವ್ ಸಮೀಪದ ನಾಗುಂದ ಬೃಹತ್ ಹಳ್ಳ ಮಳೆಗಾದಲ್ಲಿ ಗ್ರಾಮಸ್ಥರಿಗೆ ಆಚೆ-ಈಚೆ ಹೋಗುವುದಾದರೆ ಸಾವಿನ ನೆನಪಾಗುತ್ತದೆ. ನಾಗುಂದ ಮಜರೆಯ ಆರೆಂಟು ಮನೆಗಳು ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳದಿಂದಾಗಿ ಅತಂತ್ರಸ್ಥಿತಿ ಅನುಭವಿಸಬೇಕಾಗುತ್ತದೆ. ಸಣ್ಣ ವಸ್ತುಗಳನ್ನು ತರಲು ಕನಿಷ್ಠ 5-6 ಕಿ.ಮೀ ದೂರದ ಉಪಳೇಶ್ವರಕ್ಕೆ ಬರಬೇಕು. ಮಕ್ಕಳು ಶಾಲೆಗೆ ಬರಬೇಕೆಂದರೆ ಹಳ್ಳ ಮಳೆಗಾಲದಲ್ಲಿ ಅಡ್ಡಿಯಾಗಿ ನಿಲ್ಲುತ್ತದೆ. ಅಪಾಯಕಾರಿ ಹಳ್ಳ ದಾಟಿದರೆ ಎರಡೂವರೆ ಕಿಮೀ ಕೃಮಿಸಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮಳಲಗಾಂವ್ ಶಾಲೆಗೆ ಬರಬೇಕು. ಏರಿಳಿತದ ಬೆಟ್ಟ-ಗುಡ್ಡ ಕಾಡು ಕಣಿವೆಯ ದಾರಿಯಲ್ಲಿ ಬರಬೇಕು. ಕೃಷಿಯನ್ನು ನಂಬಿಕೊಂಡು ಬಂದಿರುವ ಇಲ್ಲಿನವರ ಏಕೈಕ ಬೇಡಿಕೆ ಎಂದರೆ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಿ ಎಂಬುದಾಗಿದೆ.
ಸೇತುವೆಯ ಸಲುವಾಗಿ ಮನವಿ ಕೊಟ್ಟು ಸಾಕಾಗಿದೆ. ಗ್ರಾಮಸ್ಥರು ಹಳ್ಳದಲ್ಲಿರುವ ಮರಕ್ಕೆ ಸಂಕಕಟ್ಟಿ ಹಳ್ಳದಾಟಲು ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಶಿಥಿಲಗೊಂಡ ಕಾಲುಸಂಕ ಮೇಲೆ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುವ ಹಳ್ಳವನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕಾದ ಸ್ಥಿತಿ ಇದೆ. ಶಾಲೆಯ ಮಕ್ಕಳು ಇಂತಹ ಸ್ಥಿತಿಯಲ್ಲಿ ಶಾಲೆಗೆ ಹೋಗುವುದು ದುಸ್ತರವಾಗಿದೆ. ಕಾರಣ ಸೇತುವೆ ನಿರ್ಮಿಸಿಕೊಡಬೇಕಾಗಿದೆ. ಕೆಲವರು ಈ ಹಳ್ಳದ ಕಾಲುಸಂಕದ ಹಿನ್ನೆಲೆಯಲ್ಲಿ ಜಮೀನನ್ನೇ ಬಿಟ್ಟು ಬಂದಿದ್ದಾರೆ. ಕೆಲವೇ ಜನರಿರುವ ಹಳ್ಳಿಯಾದ್ದರಿಂದ ಇವರ ಕೂಗು ಈವರೆಗೆ ಯಾರಿಗೂ ಕೇಳಿಸಿಲ್ಲ.
ಸಾಮಾಜಿಕ ಕಾರ್ಯಕರ್ತರಾದ ಎನ್.ಎನ್. ಹೆಬ್ಟಾರ ಕಳಚೆ, ಮಹಾಬಲೇಶ್ವರ ಭಟ್ಟ, ಗ್ರಾ.ಪಂ. ಸದಸ್ಯ ಎಸ್.ಕೆ. ಭಾಗ್ವತ್, ಗ್ರಾಮಸ್ಥರಾದ ನಾರಾಯಣ ಗೌಡ, ಮಂಜುನಾಥ ಭಂಡಾರಿ, ರಾಜು ಭಂಡಾರಿ ಮುಂತಾದವರು ಸ್ಥಳಿಯರಿಗೆ, ಶಾಲಾ ಮಕ್ಕಳ ಓಡಾಟದ ಅನುಕೂಲತೆಯ ಸಲುವಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ