ಭಗವಂತನ ಅಭಯ ಹಾಗೂ ವರ ಪಡೆಯಲು ನಿಷ್ಠೆಯಿಂದ ಪ್ರಾರ್ಥಿಸಿ: ಸ್ವರ್ಣವಲ್ಲೀ ಶ್ರೀ

ಚಾತುರ್ಮಾಸ್ಯ ವ್ರತಾಚರಣೆ ಸೆ.10ರಂದು ಪೂರ್ಣ

Team Udayavani, Sep 9, 2022, 4:14 PM IST

1—dsdsad

ಶಿರಸಿ: ನಿಷ್ಠೆಯಿಂದ ದೇವರ ಪ್ರಾರ್ಥನೆ ಮಾಡಿದರೆ ಭಗವಂತ ಅಭಯ ನೀಡುತ್ತಾನೆ, ವರವನ್ನೂ ಕೊಡುತ್ತಾನೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಂಕಲ್ಪಿಸಿದ 32ನೇ ಚಾತುರ್ಮಾಸ್ಯ ವೇಳೆಯಲ್ಲಿ ಮರಾಠಿ ಸಮಾಜದವರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು. ದೇವರು ನೀಡಿದ ಅದೃಷ್ಟದಿಂದ ಕಳೆದ ಎರಡು ವರ್ಷಗಳಿಂದ ಕಾಡಿದ ರೋಗವು ಕಡಿಮೆ ಆಯಿತು. ಔಷಧವೂ ಸಿಕ್ಕಿತು. ನಾವು ನಮಗೆ ಇದ್ದ ಭಯದ ವಾತಾವರಣದಿಂದ ಹೊರ ಬಂದಿದ್ದೇವೆ. ಆದರೆ, ನಿರಂತರ ಭಯದ ವಾತಾವರಣದಿಂದ ದೂರವಾಗಲು ಅಭಯ ಪಡೆಯಬೇಕು. ಅಭಯದ ಸ್ಥಿತಿಗೆ ಗಟ್ಟಿಯಾದದ್ದನ್ನು ಹಿಡಿದುಕೊಳ್ಳಬೇಕು. ಅದು ಭಗವಂತನಿಂದ ಮಾತ್ರ ಸಾಧ್ಯ. ಮನಸ್ಸಿಗೆ ಬಂದ ಅಭಯ ಹೋಗಲಾಡಿಸಲು ದೇವರನ್ನು ಪ್ರಾಮಾಣಿಕವಾಗಿ, ಸರಿಯಾಗಿ ಪ್ರಾರ್ಥಿಸಬೇಕು ಎಂದರು.

ಮುಳುಗುವವನು ಗಟ್ಟಿಯಾದದ್ದು ಹಿಡಿದುಕೊಂಡರೆ ಪಾರಾಗುತ್ತಾನೆ. ಭಯದ ಸ್ಥಿತಿಯಿಂದ ಹೊರಗೆ ಬರಲು, ಅಭಯ ನೀಡುವ ವಸ್ತು ಹಿಡಿದುಕೊಳ್ಳಬೇಕು. ಅಭಯ ಕೊಡುವವನೇ ದೇವರು. ದೇವರು ಅಭಯ ಹಾಗೂ ವರ ಎರಡೂ ನೀಡುವವನು ಹೌದು. ನಾವು ಸರಿಯಾಗಿ ದೇವರೆಲ್ಲಿ ಭಕ್ತಿ, ಪ್ರಾರ್ಥನೆ ಮಾಡಿದರೆ ಪ್ರಾರ್ಥಿಸಿದ್ದು ಸಿಗುತ್ತದೆ. ದೇವರ ಅಭಯ ಕೊಡುವದನ್ನು ಸಿಗಬೇಕಾದರೆ ಶ್ರದ್ಧೆಯಿಂದ ಪ್ರಾರ್ಥಿಸಬೇಕು ಎಂದರು.

ಮನೆಯ ಮೇಲೆ ವಿದ್ಯುತ್ ಲೈನ್ ಹೋದರೂ ಕರೆಂಟ್ ಇಲ್ಲ ಎಂದು ಪರಿತಪಿಸಿದರೆ ಆಗದು. ಅದಕ್ಕೆ ಸಂಪರ್ಕ ಕೊಡಬೇಕು. ಹಾಗೇ ದೇವರ ಸಂಪರ್ಕಕ್ಕೆ ಭಕ್ತಿ ಭಜನೆ ಪ್ರಾರ್ಥನೆ ಮಾಡಬೇಕು. ದೇವರು ಹಾಗೂ ಭಕ್ತನಿಗೆ ಈ ಮೂಲಕ ಸಂಬಂಧ ಏರ್ಪಡುತ್ತದೆ. ಆಗ ಭಗವಂತ ನೀಡುವ ಅಭಯ ಸಿಗುತ್ತದೆ. ವರ ಕೂಡ ಸಿಗುತ್ತದೆ. ಭಗವಂತ ಸರ್ವಶಾಕ್ತ. ಜಗತ್ತಿನ ವ್ಯವಸ್ಥೆ ನೀಡಿಕೊಳ್ಳುತ್ತಾನೆ. ಅತ್ಯಂತ ದುರಾಚಾರಿ ಆದರೂ ಅನನ್ಯ ಮನಸ್ಸಿನಿಂದ ಭಗವಂತನಲ್ಲಿ ಶರಣಾಗತಿ ಆದರೆ ಅವರನ್ನೂ ಕಾಪಾಡುತ್ತಾನೆ ಎಂದ ಅವರು, ವ್ಯಕ್ತಿಗೆ ಭಯ, ಚಿಂತೆ, ಕ್ರೋಧ ಸದಾ ಕಾಡಿದರೆ ಆರೋಗ್ಯವೂ ಹಾಳಾಗುತ್ತದೆ. ಈ ಮೂರನ್ನೂ ಪರಿಹರಿಸಿಕೊಳ್ಳಲು ಭಗವಂತನ
ಸಾನ್ನಿಧ್ಯ ಉತ್ತಮ ಮಾರ್ಗ ಎಂದರು.

ಮಠದ ಎಲ್ಲ ಸೀಮೆಯಲ್ಲಿಯೂ ಮರಾಠಿ ಸಮಾಜದವರು ಇದ್ದಾರೆ. ಮಠಕ್ಕೂ ಮರಾಠಿ ಸಮಾಜಕ್ಕೂ ಅನನ್ಯ ಬಾಂಧವ್ಯ ಹಿಂದಿನಿಂದಲೂ ಇದೆ ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.

ಈ ವೇಳೆ ಪ್ರಮುಖರಾದ ಉದಯ ಮರಾಠಿ ದೇವನಳ್ಳಿ, ಸಂತೋಷ ಮರಾಠಿ, ನಾರಾಯಣ ಮರಾಠಿ, ಮಂಜು ಮರಾಠಿ ಮಂಜುಗುಣಿ ಇತರರು ಇದ್ದರು.

ನಾಳೆ ಸಂಪನ್ನ
ಸೋಂದಾ ಸ್ವರ್ಣವಲ್ಲೀ ಶ್ರೀಗಳು ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿಸಿದ ತಮ್ಮ 32 ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಸೆ.10ರಂದು ಪೂರ್ಣವಾಗಲಿದೆ. ಕಳೆದ ಜು.13 ರಿಂದ ಶ್ರೀಗಳು ವ್ಯಾಸ ಪೂಜೆ ನಡೆಸಿ ಸಂಕಲ್ಪಿಸಿದ ಚಾತುರ್ಮಾಸ್ಯ ವ್ರತವನ್ನು ಸೀಮೋಲಂಘನಗೊಳಿಸಲಿದ್ದಾರೆ.

ಟಾಪ್ ನ್ಯೂಸ್

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.