ಬಂಗೂರನಗರ ಶಾಲೆ ಪ್ರವೇಶ ದ್ವಾರವನ್ನೇರಿದ ಹೆಬ್ಬಾವು
Team Udayavani, Jul 3, 2021, 6:41 PM IST
ದಾಂಡೇಲಿ: ಶಾಲೆಗಳ ಪ್ರಾರಂಭೋತ್ಸವ ದಿನದಂದು ಬಹುತೇಕ ಶಾಲೆಗಳ ಪ್ರವೇಶಧ್ವಾರವನ್ನು ಬ್ಯಾನರ್ ಹಾಗೂ ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಅಂದೇ ಬಂಗೂರನಗರ ಸರಕಾರಿ ಉರ್ದು, ಕನ್ನಡ ಹಾಗೂ ಮರಾಠಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದ ನಾಮಫಲಕದ ಕಮಾನಿನಲ್ಲಿ ಹೆಬ್ಟಾವೊಂದು ಪ್ರತ್ಯಕ್ಷವಾಗಿ ಜನರ ಮನಸನ್ನು ಸೆಳೆದಿದೆ.
ಬಹಳ ಹೊತ್ತು ಹಾವಿರುವುದನ್ನು ಗಮನಿಸಿದ ಜನ ಉರಗ ಪ್ರೇಮಿ ರಝಾಕ್ ಶಾಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಸಲಕರಣೆಗಳೊಂದಿಗೆ ಧಾವಿಸಿದ ರಝಾಕ್, ಹಾವಿರುವ ಸ್ವಾಗತ ಕಮಾನಿನ ಮೇಲೆ ಹತ್ತಿ, ಹರಸಾಹಸ ಪಟ್ಟು ಹತ್ತನ್ನೆರಡು ಅಡಿ ಉದ್ದದ ಹೆಬ್ಟಾವನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬರುವುದರ ಮೂಲಕ ನಿಜವಾದ ವನ್ಯಕಾಳಜಿ ಮೆರೆದಿದ್ದಾರೆ.
ಸ್ವಲ್ಪ ಎಚ್ಚರ ತಪ್ಪಿದರು ಹಾವು ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಅರಿತ ರಝಾಕ್ ಶಾ, ಬಹಳ ಎಚ್ಚರಿಕೆ ವಹಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಇದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ