ರೈತ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ
Team Udayavani, Jan 27, 2021, 3:36 PM IST
ಶಿರಸಿ: ರೈತರ ಹೋರಾಟ ಬಲಪ್ರಯೋಗದಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರನಾಥ ನಾಯ್ಕ ಹೇಳಿದರು. ರೈತ ಗಣರಾಜ್ಯೋತ್ಸವದ ಅಂಗವಾಗಿ ಭೂಮಿ ಹಕ್ಕು ಹೋರಾಟಗಾರರು ಸ್ಥಳೀಯ ಬಿಡಕಿ ಬೈಲಿನ ಗಾಂಧಿ ಪ್ರತಿಮೆಗೆ ಗೌರವ ಅರ್ಪಿಸಿ ಟ್ರ್ಯಾಕ್ಟರ್ ಪೂಜಿಸಿ, ಸಂವಿಧಾನಬದ್ಧ ಹೋರಾಟದ ಹಕ್ಕಿನಿಂದಲೇ ರೈತ ವಿರೋಧಿ ಕಾನೂನನ್ನು ನಿರ್ಬಂಧಿಸುತ್ತೇವೆ. ರೈತ ವಿರೋಧಿ ಕಾನೂನಿನಿಂದ ಆಹಾರ ಭದ್ರತೆಗೆ ಆತಂಕ ಉಂಟಾಗುವುದಲ್ಲದೆ, ರೈತರ ಆರ್ಥಿಕ ಅಭಿವೃದ್ಧಿಗೆ ಮಾರಕವಾಗುವ ಹಿನ್ನೆಲೆಯಲ್ಲಿ ಬಹಿರಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ಕಾನೂನನ್ನು ರೈತರು ವಿರೋಧಿಸುತ್ತಿದ್ದಾರೆ ಎಂದರು.
ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಸಿದ್ದಾಪುರ, ಮುಂದಿನ ದಿನಗಳಲ್ಲಿ ತೀವ್ರತರ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ. ತಕ್ಷಣ ರೈತ ವಿರೋಧಿ ಕಾನೂನನ್ನು ಹಿಂದಕ್ಕೆ ಪಡೆಯಬೇಕು ಎಂದರು.
ಇದನ್ನೂ ಓದಿ:ದೆಹಲಿ ಪ್ರತಿಭಟನೆಗೆ ಪಾಕ್-ಕಾಂಗ್ರೆಸ್ ಕುಮಕ್ಕು: ಪಾಟೀಲ್
ರೈತ ಸಂಘಟನೆಯ ಪ್ರಮೋದ ಜಕಲಣ್ಣನವರ್, ನವೀನ ಜಡೆದರ, ನಾಗಪ್ಪ ನಾಯ್ಕ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ, ಎಂ.ವಿ. ಬೈಂದೂರು, ಜ್ಯೋತಿ ಮುಕ್ತೇಶ ಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮಣ ಬಿ. ಮಾಳಕ್ಕನವರ್ ಇದ್ದರು.