ಜಿಟಿ ಜಿಟಿ ಮಳೆ: ಮೀನುಗಾರರ ಪರದಾಟ
ಕೃಷಿಯಲ್ಲಿ ಕೊಯ್ಲಿಗೆ ಬಂದ ಭತ್ತವನ್ನು ರಕ್ಷಿಸಿಕೊಳ್ಳಲಾಗದೆ ರೈತರು ಸಂಕಷ್ಟ ಪಡುತ್ತಿದ್ದಾರೆ.
Team Udayavani, Nov 20, 2021, 6:31 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಮಳೆ ಸುರಿದಿದೆ. ಶುಕ್ರವಾರವೂ ಮೋಡ ಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಕರಾವಳಿಯಲ್ಲಿ ಸುರಿದಿದೆ. ಘಟ್ಟದ ಮೇಲೆ ಒಂದೆರಡು ಸಲ ಮಳೆ ಬಿದ್ದಿದೆ. ಸಮುದ್ರ ಅಬ್ಬರಿಸುತ್ತಿರುವ ಕಾರಣ ದೋಣಿಗಳು ಕಡಲಲ್ಲಿ ಹಾಗೂ ಬಂದರಿನಲ್ಲಿ ಲಂಗುರ ಹಾಕಿವೆ. ಮೀನುಗಾರಿಕೆ ಅಸ್ತವ್ಯಸ್ತವಾಗಿದೆ.
ಕೃಷಿಯಲ್ಲಿ ಕೊಯ್ಲಿಗೆ ಬಂದ ಭತ್ತವನ್ನು ರಕ್ಷಿಸಿಕೊಳ್ಳಲಾಗದೆ ರೈತರು ಸಂಕಷ್ಟ ಪಡುತ್ತಿದ್ದಾರೆ. ಗದ್ದೆಯಲ್ಲಿ ಕೊಯ್ದ ಭತ್ತ ಮಳೆ ನೀರಿನ ಪಾಲಾಗಿದೆ. ಮೋಡ ಕವಿದ ವಾತಾವರಣ ಕಾರಣ ಜನರಲ್ಲಿ ನಿರುತ್ಸಾಹ ಕಾಣುತ್ತಿದೆ. ಜನರು ಮನೆಯಿಂದ ಅಷ್ಟಾಗಿ ಹೊರಗೆ ಬೀಳದ ಕಾರಣ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಇನ್ನು ಮೂರು ದಿನ ಮಳೆಯ ಕಾರಣ ಜನರು ಇನ್ನು ಮಳೆಗಾಲ ಮುಗಿಯಲಿಲ್ಲ. ನವೆಂಬರ್ ಮುಗಿಯುತ್ತಾ ಬಂದರೂ ಮಳೆ ನಿಲ್ಲುವುದಿಲ್ಲ ಎಂದು ಬೇಸರ
ವ್ಯಕ್ತಪಡಿಸುವುದು ಕೇಳಿ ಬರುತ್ತಿತ್ತು. ಶುಕ್ರವಾರದ ಬೆಳಗಿನ 8 ಗಂಟೆಯತನಕ ಕಳೆದ 24 ತಾಸಿನಲ್ಲಿ ಅಂಕೋಲಾದಲ್ಲಿ 2.5. ಮಿಮೀ ಮಳೆಯಾಗಿದೆ.
ಹಳಿಯಾಳದಲ್ಲಿ 1.2, ಹೊನ್ನಾವರದಲ್ಲಿ 0.3, ಕಾರವಾರದಲ್ಲಿ 1.4, ಕುಮಟಾದಲ್ಲಿ 3.6, ಮುಂಡಗೋಡದಲ್ಲಿ 1.2, ಸಿದ್ದಾಪುರದಲ್ಲಿ 2.4, ಶಿರಸಿಯಲ್ಲಿ 14.5, ಯಲ್ಲಾಪುರದಲ್ಲಿ 4.6 ಮಿಮೀ ಮಳೆ ಸುರಿದಿದೆ. 31.7 ಮಿಮೀ ಮಳೆ ಬಿದ್ದಿದೆ. ಮೋಡಕವಿದ ವಾತಾವರಣ ಮುಂದುವರಿದಿದೆ. ನ.18 ರಂದು 76.2, ನ.17 ರಂದು 384.4, ನ.16 ರಂದು 170.8, ನ.15 ರಂದು 100.6 ಮಿಮೀ ಮಳೆ ಜಿಲ್ಲೆಯಲ್ಲಿ ಸುರಿದಿದೆ. 900 ಹೆಕ್ಟೇರ್ ಭತ್ತದ ಬೆಳೆಗೆ ಹಾನಿಯಾಗಿದೆ. ಅಡಕೆ ಮತ್ತು ಜೋಳದ ಬೆಳೆಗೂ ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.
ಇನ್ನು ಮೂರು ದಿನ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಯಾವುದೇ ಕ್ಷಣ ಮಳೆ ಸುರಿಯಬಹುದಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಅಧಿಕ ಮಳೆಯ ಪಟ್ಟಿಯಲ್ಲಿ ಉತ್ತರ ಕನ್ನಡ ಸಹ ಇದ್ದು, ತಾಲೂಕು ಆಡಳಿತಗಳು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ