ನೆಡುತೋಪು ನಿರ್ಮಾಣಕ್ಕೆ ಸಜ್ಜು

•ಎಂಎಂಎಸ್‌ವಿ ಯೋಜನೆಯಡಿ ಶಾಲಾ ಮಕ್ಕಳು-ಶಾಲೆಗಳಿಗೆ ವಿವಿಧ ಸಸಿಗಳ ವಿತರಣೆ

Team Udayavani, May 26, 2019, 12:42 PM IST

uk-tdy-1..

ಕಾರವಾರ: ಅರಣ್ಯ ಇಲಾಖೆ ನೆಡುತೋಪು ನಿರ್ಮಾಣಕ್ಕೆ ತಯಾರಿ ನಡೆಸಿರುವುದು.

ಕಾರವಾರ: ಪ್ರಸಕ್ತ ಸಾಲಿನಲ್ಲಿ 1185 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ನೆಡುತೋಪು ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಜ್ಜಾಗಿದೆ ಎಂದು ಕಾರವಾರ ವಲಯದ ಡಿಎಫ್‌ಓ ವಸಂತ ರೆಡ್ಡಿ ಹೇಳಿದರು.

ಅವರು ಕಾರವಾರದ ಸಾಲುಮರದ ತಿಮ್ಮಕ್ಕ ವನದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಕಾರವಾರ ವಲಯದಲ್ಲಿ 2018-19ನೇ ಸಾಲಿನಲ್ಲಿ ಮುಂಗಡ ಕಾಮಗಾರಿ ಕೈಗೊಂಡು ನರ್ಸರಿಗಳಲ್ಲಿ 13,743 ಲಕ್ಷ ಪಾಲಿಥಿನ್‌ ಚೀಲಗಳಲ್ಲಿ ಸಸಿಗಳನ್ನು ಬೆಳಸಿಕೊಳ್ಳಲಾಗಿದೆ. ಈ ಸಸಿಗಳನ್ನು ಎಂಎಂಎಸ್‌ವಿ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಗೂ ಶಾಲೆಗಳಿಗೆ ವಿತರಿಸಲಾಗುವುದು. 4200 ಸಸಿಗಳನ್ನು ಆರ್‌ಎಸ್‌ಪಿ ಯೋಜನೆಯಡಿ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ರೈತರಿಗೆ ವಿತರಿಸಲು 29700 ಸಸಿಗಳನ್ನು ಮತ್ತು ಹಸಿರು ಕರ್ನಾಟಕ ಯೋಜನೆಯಡಿ ವನಮಹೋತ್ಸವ ಕಾರ್ಯಕ್ರಮಗಳಿಗೆ ಬಳಸಲಾಗುವುದು. 71500 ಸಸಿಗಳನ್ನು ವಿತರಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ 4.92 ಕಿ.ಮೀ. ಉದ್ದದ ರಸ್ತೆ ಬದಿ ಮಾನ್ಸೂನ್‌ ನೆಡುತೋಪು ಹಾಗೂ 3.03 ಕಿ.ಮೀ. ನಗರ ಪ್ರದೇಶದಲ್ಲಿ ಮಾನ್ಸೂನ್‌ ನೆಡುತೋಪು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

2018-19 ಸಾಲಿಗೆ ಸಿಎಸ್‌ಎಸ್‌ ಮ್ಯಾಂಗ್ರೋವ್‌ ಯೋಜನೆಯಡಿ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ 10 ಸೋಲಾರ್‌ ವಾಟರ್‌ ಹೀಟರ್‌, 60 ಎಲ್ಪಿಸಿ ಸೌಲಭ್ಯ ಹಾಗೂ ಮೀನುಗಾರರಿಗೆ ಆದಾಯ ಚಟುವಟಿಕೆಗೆ ಬಲೆಗಳನ್ನು ವಿತರಿಸಲಾಗಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡಗಳ ಫಲಾನುಭವಿಗಳಿಗೆ 395 ಜೇನು ಪೆಟ್ಟಿಗೆಗಳನ್ನು ಹಾಗೂ 130 ಫಲಾನುಭವಿಗಳಿಗೆ ಎಲ್ಪಿಜಿ ರೀಫಿಲ್ಲಿಂಗ್‌ ಸೌಲಭ್ಯ ಒದಗಿಸಲಾಗಿದೆ. ಅವರಿಗೆ ಬಳಕೆಯ ತರಬೇತಿ ಸಹ ಹಮ್ಮಿಕೊಳ್ಳಲಾಗಿತ್ತು ಎಂದು ವಸಂತ ರೆಡ್ಡಿ ವಿವರಿಸಿದರು.

ಕಾರವಾರ ಕೋಡಿಭಾಗ ವಲಯದಲ್ಲಿ 16 ಹೆಕ್ಟೇರ್‌ ಪ್ರದೇಶದಲ್ಲಿ ನಗರ ವಾಸಿಗಳಿಗೆ ಉತ್ತಮ ಪರಿಸರ ಮತ್ತು ಮಕ್ಕಳಿಗೆ ಅರಣ್ಯ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಸಾಲು ಮರದ ತಿಮ್ಮಕ್ಕ ವನ ರೂಪಿಸಲಾಗಿದೆ. ಇದಕ್ಕಾಗಿ 89.180 ಲಕ್ಷ ರೂ. ವೆಚ್ಚವಾಗಿದೆ. ಅಂಕೋಲಾ ತಾಲೂಕಿನಲ್ಲಿ ಸಸ್ಯೋದ್ಯಾನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರೆಡ್ಡಿ ವಿವರಿಸಿದರು. ಕಾರವಾರ ಅರಣ್ಯ ವಿಭಾಗ 1943ರಲ್ಲಿ ವೆಸ್ಟರನ್‌ ಡಿವಿಜನ್‌ ಆಗಿ ಅಸ್ತಿತ್ವಕ್ಕೆ ಬಂದಿದೆ. ಈ ವಿಭಾಗದ ಭೌಗೋಳಿಕ ಕ್ಷೇತ್ರ 1370.735 ಸ್ಕ್ವಯರ್‌ ಕಿ.ಮೀ.ಇದೆ. ಒಟ್ಟು ಅರಣ್ಯ ಪ್ರದೇಶ 1001.3117 ಸ್ಕ್ವಯರ್‌ ಕಿ.ಮೀ.ನಷ್ಟಿದೆ ಎಂದರು. ಕಾರವಾರ ಅಂಕೋಲಾ ತಾಲೂಕಿನಲ್ಲಿ 129 ಹಳ್ಳಿಗಳಿದ್ದು, ಕಾರವಾರ,ಗೋಪಿಶಿಟ್ಟಾ, ಕದ್ರಾ,ಅಂಕೋಲಾ, ಮಾಸ್ತಿಕಟ್ಟಾ, ರಾಮನಗುಳಿ ಸೇರಿ 6 ವಲಯಗಳಿವೆ. ಕೋಸ್ಟಲ್ ಏರಿಯಾ ವ್ಯಾಪ್ತಿಗೆ ಎರಡು ವಲಯ ಬರುತ್ತವೆ. ಉಳಿದವು ಪಶ್ಚಿಮಘಟ್ಟ ವಲಯದಲ್ಲಿ ಬರುತ್ತವೆ. ಕದ್ರಾ, ಹಟ್ಟಿಕೇರಿ ಮರ ಮಟ್ಟು ಸಂಗ್ರಹಾಲಯಗಳಾಗಿವೆ ಎಂದರು. ಇಲ್ಲಿ ಜನರು ಅರಣ್ಯ ರಕ್ಷಿಸಿದ್ದಾರೆ. ಅರಣ್ಯ ಜನರನ್ನು ರಕ್ಷಿಸಿದೆ. ಆದರೂ ಗಂಗಾವಳಿ ನದಿ ಬತ್ತಿದ ಸ್ಥಿತಿ ಇದೆ. 2000 ಮಿಲಿ ಮೀಟರ್‌ ಮಳೆ ಬರುವ ಪ್ರದೇಶದಲ್ಲಿ ನದಿ ಬತ್ತುವ ಸ್ಥಿತಿ ಬಂದದ್ದು ಯಾಕೆ ಎಂದು ಅಧ್ಯಯನ ಮಾಡಬೇಕಿದೆ ಎಂದರು. ಕೋಲಾರ ಜಿಲ್ಲೆಯಂತೆ ಇಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಕೊಡುವ ಸನ್ನಿವೇಶ ನಿರ್ಮಾಣವಾಗಿದೆ. ಇದನ್ನು ಗಂಭೀರವಾಗಿ ಯೋಚಿಸಬೇಕಿದೆ. ಅರಣ್ಯ ಬೆಳೆಸಬೇಕಿದೆ ಎಂದರು. ಎಸಿಎಫ್‌ ಮಂಜುನಾಥ ನಾವಿ, ಅಂಕೋಲಾ ಎಸಿಎಫ್‌ ನಂಜುಂಡಪ್ಪ ಇದ್ದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.