ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ
Team Udayavani, Jul 19, 2019, 4:11 PM IST
ಶಿರಸಿ: ವ್ಯಾಸರಾಯರ ಮೂಲ ವೃಂದಾವನ ಹಾಳು ಗೆಡವಿದ್ದನ್ನು ಖಂಡಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಶಿರಸಿ: ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿದ್ದ ವ್ಯಾಸರಾಯರ ಮೂಲ ವೃಂದಾವನಕ್ಕೆ ಕಿಡಿಕೇಡಿಗಳು ಮಾಡಿದ ಹಾನಿ ಖಂಡಿಸಿ ಇಲ್ಲಿನ ಭಕ್ತರು, ವಿವಿಧ ಸಂಘಟನೆಗಳ ಪ್ರಮುಖರು ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರಕಾರಕ್ಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಗುರುವಾರ ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿಗೆ ಮನವಿ ಸಲ್ಲಿಸಿದ ಪ್ರಮುಖರು, ಹದಿನೈದನೇ ಶತಮಾನದ ಶ್ರೀಕೃಷ್ಣ ದೇವರಾಯನ ಆಳ್ವಿಕೆ ಕಾಲದಲ್ಲಿ ತಮ್ಮದೇ ಕೊಡುಗೆ ನೀಡಿದ ಮಹಾ ತಪಸ್ವಿ ವ್ಯಾಸರಾಯರ ಮೂಲ ವೃಂದಾವನಕ್ಕೆ ಧಕ್ಕೆ ಉಂಟು ಮಾಡಿದ್ದು ಭಕ್ತರ ನೋವಿಗೆ ಕಾರಣವಾಗಿದೆ. ತಪಸ್ವಿ, ಮಧ್ವ ಮತ ಪರಂಪರೆಯ ಸರ್ವಮಾನ್ಯ ಯತಿಗಳ ವ್ಯಾಸರಾಯರ ಮೂಲ ಬೃಂದಾವನವನ್ನು ಹಾಳು ಗೆಡವಿರುವ ಕೃತ್ಯ ಖಂಡಿನೀಯ ಎಂದು ತಿಳಿಸಿದರು. ನಿಧಿ ಆಸೆಗೆ ಮಾಡಿದ ಕುಕೃತ್ಯ ಎಂದು ನಿರ್ಲಕ್ಷ್ಯ ಮಾಡದೇ ತಕ್ಷಣ ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಮಧ್ವ ಸೇವಾ ಸಮಿತಿ ರಾಘವೇಂದ್ರ ಆನವಟ್ಟಿ, ಗೋಪಾಲಕೃಷ್ಣ ಆನವಟ್ಟಿ, ಶ್ರೀನಿವಾಸ ಹೆಬ್ಟಾರ, ಕೆ.ವಿ. ಭಟ್ಟ, ಜೀವನ ಪೈ, ಅನಿತಾ ಪರ್ವತಿಕರ್, ಎ.ಆರ್. ಪರ್ವತಿಕರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ