ಸಮುದ್ರ ಕೊರೆತ ತಡೆ ಕಾಮಗಾರಿಗೆ ಆಗ್ರಹ
Team Udayavani, Jun 16, 2019, 12:54 PM IST
ಹೊನ್ನಾವರ: ಸಮುದ್ರ ಕೊರೆತ ತಡೆ ಕಾಮಗಾರಿ ಕೈಗೊಳ್ಳುವಂತೆ ಕರ್ಕಿ ಗ್ರಾಮಸ್ಥರು ಪ್ರಧಾನಿಯವರಿಗೆ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಹೊನ್ನಾವರ: ಹಲವಾರು ವರ್ಷಗಳಿಂದ ಸಮುದ್ರ ಕೊರೆತಕ್ಕೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿರುವ ಕರ್ಕಿಗ್ರಾಮದ ತೊಪ್ಪಲಕೇರಿಯ ಜನ ಪ್ರಧಾನಿ ಆ್ಯಪ್ ಮೂಲಕ ಮೋದಿಯವರಿಗೆ, ಟ್ವೀಟ್ ಮೂಲಕ ಮುಖ್ಯಮಂತ್ರಿಗಳಿಗೆ ಮೊರೆಹೋಗಿ ರಕ್ಷಣೆ ಕೇಳಿದ್ದಾರೆ.
ಹಲವಾರು ತಲೆಮಾರುಗಳಿಂದ ಈ ಭೂಮಿಯಲ್ಲಿ ಬದುಕುತ್ತ ಬಂದಿದ್ದೇವೆ. ಪ್ರತಿವರ್ಷ ಸಮುದ್ರ ಬಾಯಿ ತೆರೆದು ನಮ್ಮ ಭೂಮಿಯನ್ನು ನುಂಗುತ್ತಿದೆ. ಎರಡು ಮೂರು ವರ್ಷಗಳಿಂದ ಶಾಸಕರು, ಮಂತ್ರಿಗಳು, ಅಧಿಕಾರಿಗಳು ಹಲವು ಬಾರಿ ಬಂದು ಹೋಗುತ್ತಿದ್ದಾರೆ. ಮಾಧ್ಯಮಗಳಲ್ಲಿ ಭರವಸೆಯ ಸುದ್ದಿಯಾಗುತ್ತದೆಯೇ ವಿನಃ ಈವರೆಗೆ ಯಾವುದೇ ಕೆಲಸ ಆಗಿಲ್ಲ. ಮಾನವ ಹಕ್ಕುಗಳ ಆಯೋಗಕ್ಕೂ ವಿನಂತಿ ಮಾಡಿದ್ದೇವೆ. ನಮ್ಮ ಗೋಳನ್ನು ಕೇಳುವವರೇ ಇಲ್ಲ. ಆದ್ದರಿಂದ ನಿಮ್ಮ ಮೊರೆ ಹೋಗಿದ್ದೇವೆ ಎಂದು ಹೇಳಿದ್ದಾರೆ.
ಸಮುದ್ರ ಕೊರೆತದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ಊರ ಜನತೆಯ ಪರವಾಗಿ ಡಾ| ಮಾಧವ ನಾರಾಯಣ ನಾಯಕ ನ್ಯಾಯಕ್ಕಾಗಿ ದೇಶದ ಸರ್ವೋಚ್ಚ ನಾಯಕರ ಮೊರೆ ಹೋಗಿದ್ದಾರೆ.