ಸುಕ್ರಜ್ಜಿಗೆ ರೋಟರಿ ನೆರವು
•ಉಸಿರಾಟ ತೊಂದರೆ ನಿವಾರಣೆಗೆ ವೈದ್ಯಕೀಯ ಉಪಕರಣ ವಿತರಣೆ
Team Udayavani, Jul 14, 2019, 11:39 AM IST
ಕಾರವಾರ: ಜಾನಪದ ಕೋಗಿಲೆ ಸುಕ್ರಜ್ಜಿಗೆ ಇಲ್ಲಿನ ರೋಟರಿ ಕ್ಲಬ್ ಸದಸ್ಯರು ನೆರವು ನೀಡಿದರು.
ಕಾರವಾರ: ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ನೆರವಾಗುವ ವೈದ್ಯಕೀಯ ಉಪಕರಣ ನೆಬ್ಯುಲೈಸರ್ನ್ನು ಕಾರವಾರ ರೋಟರಿ ಕ್ಲಬ್ ಪದಾಧಿಕಾರಿಗಳು ಸುಕ್ರಜ್ಜಿಯ ಸ್ವಗೃಹದಲ್ಲಿ ವಿತರಿಸಿದರು.
ಸುಕ್ರಜ್ಜಿಗೆ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಉಂಟಾಗಿ ಜು.5 ರಂದು ಕಾರವಾರದ ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಉಬ್ಬಸದ ಚಿಕಿತ್ಸೆಗೆ ನೆಬುಲೈಸರ್ ಉಪಕರಣ ನೀಡಲಾಗಿತ್ತು. ಆ ಉಪಕರಣ ಸುಕ್ರಜ್ಜಿಗೆ ಚೇತರಿಸಿಕೊಳ್ಳಲು ನೆರವಾಗಿತ್ತು. ಈ ಮಾಹಿತಿ ತಿಳಿದ ಕಾರವಾರ ರೋಟರಿ ಕ್ಲಬ್ ಪದಾಧಿಕಾರಿಗಳು ಸುಕ್ರಜ್ಜಿಯ ಕ್ಷೇಮವನ್ನು ವಿಚಾರಿಸಲು ಕಿಮ್ಸ್ ಆಸ್ಪತ್ರೆಗೆ ತೆರಳಿ, ಅವರಿಗೆ ಅಗತ್ಯ ಇರುವ ಉಸಿರಾಟದ ಉಪಕರಣ ನೀಡಲು ನಿರ್ಧರಿಸಿದ್ದರು. ಸುಕ್ರಜ್ಜಿಯ ಮನದಾಸೆಗೆ ಸ್ಪಂದಿಸಿದ ಕಾರವಾರ ರೋಟರಿ, ಉಪಕರಣವನ್ನು ಖರೀದಿಸಿ ನೀಡುವುದಾಗಿ ತಿಳಿಸಿದ್ದರು.
ಸುಕ್ರಜ್ಜಿ ಸಂಪೂರ್ಣ ಗುಣಮುಖರಾದ ನಂತರ ಜು.10 ರಂದು ಸ್ವಗೃಹಕ್ಕೆ ಕಳುಹಿಸಿಕೊಡಲಾಗಿತ್ತು. ಅವರ ಆರೋಗ್ಯದ ನಿಗಾ ಇಟ್ಟಿರುವ ವೈದ್ಯ ಡಾ| ಅಮಿತ್ ಕಾಮತ್ ಸುಕ್ರಜ್ಜಿಗೆ ನೆಬುಲೈಸರ್ ಉಪಕರಣ ಉಪಯೋಗಿಸುವ ಬಗ್ಗೆ ಅಂಕೋಲಾ ಸರಕಾರಿ ಆಸ್ಪತ್ರೆ ಸಿಬ್ಬಂದಿ ನೆರವು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ್ದರು.
ಸುಕ್ರಜ್ಜಿ ಮನೆಗೆ ತೆರಳಿದ ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ ಜೋಷಿ, ಸಮುದಾಯ ಸೇವಾ ನಿರ್ದೇಶಕ ಮಾರುತಿ ಕಾಮತ್, ಕ್ಲಬ್ ಸೇವಾ ನಿರ್ದೇಶಕ ಅಮರನಾಥ ಶೆಟ್ಟಿ, ಕ್ಲಬ್ ನಿರ್ವಹಣಾ ಚೇರ್ಮನ್ ಪ್ರಸನ್ನ ತೆಂಡೂಲಕರ್ ಹಾಗೂ ಪಬ್ಲಿಕ್ ಇಮೇಜ್ ಚೇರ್ಮನ್ ಪ್ರದೀಪ ನಾಯ್ಕ ನೆಬುಲೈಸರ್ ಉಪಕರಣ ವಿತರಿಸಿದರು. ಉಪಕರಣ ಸ್ವೀಕರಿಸಿದ ಸುಕ್ರಜ್ಜಿ ಕಾರವಾರ ರೋಟರಿಕ್ಲಬ್ನ ಪದಾಧಿಕಾರಿಗಳ ನೆರವು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ