ತರಬೇತಿ ಶಿಬಿರದಿಂದ ಸ್ವಾಲಂಬನೆ ಸಾಧ್ಯ: ರಾಧಾ ಹೆಗಡೆ
Team Udayavani, Feb 23, 2020, 2:32 PM IST
ಯಲ್ಲಾಪುರ: ಗ್ರಾಮ ಮಟ್ಟದಲ್ಲಿ ಮಹಿಳೆಯರ ಸ್ವಾವಲಂಬನೆಗೆ ಅನೇಕ ಯೊಜನೆಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ತಾಪಂ ಸದಸ್ಯೆ ರಾಧಾ ಹೆಗಡೆ ಹೇಳಿದರು.
ತಾಲೂಕಿನ ಉಮ್ಮಚಗಿಯಲ್ಲಿ ಕರ್ನಾಟಕ ಸರಕಾರ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮ ಸ್ವರಾಜ್ ಯೋಜನೆಯಡಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮತನಾಡಿದರು. ಗ್ರಾಪಂ ಅಧ್ಯಕ್ಷ ಗ.ರಾ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಕೈತಾನ್ ಡಿಸೋಜಾ, ರಾಮಚಂದ್ರ ಭಟ್ಟ ಸೂರಿಮನೆ, ಶಿವರಾಯ ಪೂಜಾರಿ, ಮಂಜು ಮೊಗೇರ, ಸ್ವ-ಸಹಾಯ ಸಂಘಗಳ ಪ್ರಮುಖರಾದ ಅನುಪಮಾ, ನಾಗರತ್ನ, ಪಿಡಿಒ ಶ್ರೀಧರ ಪಟಗಾರ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಸ್. ಭಟ್ಟ ಆನಗೋಡ, ರೇಣುಕಾ ಸಿದ್ದಿ ತರಬೇತಿ ನೀಡಿದರು.