ಹಸನ್ಮಾಳದಲ್ಲಿ ದನಗರ ಗೌಳಿ ಸಮುದಾಯದವರಿಂದ ಶಿಲಂಗಾಣ ಕಾರ್ಯಕ್ರಮ
Team Udayavani, Oct 17, 2021, 5:58 PM IST
ದಾಂಡೇಲಿ: ನಗರದ ಸಮೀಪದ ಹಸನ್ಮಾಳದಲ್ಲಿರುವ ದನಗರ ಗೌಳಿ ಬುಡಕಟ್ಟು ಸಮುದಾಯವರು ದಸರಾ ಹಬ್ಬದ ನಿಮಿತ್ತ ಅನಾದಿಕಾಲದಿಂದಲೂ ಬಳುವಳಿಯಾಗಿ ಬಂದಂತಹ ಬುಡಕಟ್ಟು ಸಂಸ್ಕೃತಿಯ ಪ್ರಕಾರವಾಗಿ ದಸರಾ ಹಬ್ಬವನ್ನು ಧಾರ್ಮಿಕವಾಗಿ ಶೃದ್ದಾಭಕ್ತಿಯಿಂದ ಹಸನ್ಮಾಳದಲ್ಲಿರುವ ಯಡಗೆಯವರ ಮನೆಯಲ್ಲಿ ಹಾಗೂ ಹತ್ತಿರದ ಕಾಡಲ್ಲಿ ಆಚರಿಸಿದರು.
ಯಡಗೆಯವರ ಮನೆಯಲ್ಲಿ ಸ್ಥಳೀಯ ದನಗರ ಗೌಳಿ ಸಮುದಾಯದ ಪ್ರತಿಯೊಬ್ಬರು ಭಾಗವಹಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಗೌಳಿ ನೃತ್ಯದ ಮೂಲಕ ಭಗವಂತನನ್ನು ಆರಾಧಿಸಿದರು. ಆನಂತರದಲ್ಲಿ ಹತ್ತಿರದ ಕಾಡಿಗೆ ಹೋಗಿ ಮರವೊಂದಕ್ಕೆ ಪೂಜೆ ಸಲ್ಲಿಸಿ, ಅಲ್ಲಿಯೂ ದನಗರ ಗೌಳಿ ಬುಡಕಟ್ಟು ಸಂಪ್ರಾದಾಯದಂತೆ ದಸರಾ ಆಚರಣೆಯಲ್ಲಿ ನಿರತರಾದರು.
ಕಾರ್ಯಕ್ರಮದಲ್ಲಿ ದನಗರ ಗೌಳಿ ಸಮುದಾಯದ ಸಮೂಹ ನೃತ್ಯ ಎಲ್ಲರ ಗಮನ ಸೆಳೆಯಿತು. ಆಧುನಿಕತೆ ವೇಗವಾಗಿ ಬೆಳೆಯುತ್ತಿದ್ದರೂ ಪೂರ್ವಜರಿಂದ ಬಳುವಳಿಯಾಗಿ ಬಂದ ಆಚರಣೆಗಳನ್ನು ಶೃದ್ದಾಭಕ್ತಿಯಿಂದ ಹಾಗೂ ನಿಷ್ಟೆಯಿಂದ ಪಾಲಿಸಿ ತಮ್ಮ ನೆಲಮೂಲದ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಬರುತ್ತಿರುವ ದನಗರ ಗೌಳಿ ಸಮುದಾಯದ ಸಂಪ್ರದಾಯಬದ್ದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು