ಶಿರಸಿ: ಐಎಂಎ ಕನ್ನಡ ಬಳಗದ ಉದ್ಘಾಟನೆ
Team Udayavani, Jan 8, 2022, 4:59 PM IST
ಶಿರಸಿ: ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಐಎಂಎ ಕನ್ನಡ ಬಳಗದ ಉದ್ಘಾಟನಾ ಸಮಾರಂಭ ನಡೆಯಿತು.
ಕನ್ನಡ ಬಳಕೆಯನ್ನು ಹೆಚ್ಚಿಸುವ,ಕನ್ನಡ ವೈದ್ಯ ಸಾಹಿತ್ಯವನ್ನು ವಿಸ್ತಾರಗೊಳಿಸುವ ಉದ್ದೇಶದೊಂದಿಗೆ ಹಾಗೆ, ಸಂಘದ ಎಲ್ಲ ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಒಂದು ಗೂಡಿಸುವ ಕನಸಾದ ಈ ವೇದಿಕೆ ಹೊಂದಿದೆ. ಕವಿ ಹೃದಯಿಗಳನ್ನು ಒಂದು ಸಮಾನಸ್ಕ ವೇದಿಕೆಯಲ್ಲಿ ಒಗ್ಗೂಡಿಸಿ ಕನ್ನಡ ಭಾಷೆಯ ಸೊಗಸನ್ನು ಹಂಚಿಕೊಳ್ಳಲು ,ವಿಚಾರಪೂರ್ಣ ವಿನಿಮಯಕ್ಕೆ ಕನ್ನಡ ಬಳಗ ಕೆಲಸ ಮಾಡಲಿದೆ. ಅಸ್ತಿತ್ವಕ್ಕೆ ಬಂದಿದೆ ಎಂದು ಬಳಗದ ಅಧ್ಯಕ್ಷ ಡಾ.ಡಿ.ಎಮ್.ಹೆಗಡೆ ಹೇಳಿದರು. ಇದೇ ವೇಳೆ ಸ್ವತಃ ವೈದ್ಯರೇ ರಚಿಸಿದ ಕವನಗಳನ್ನು ವಾಚಿಸಿದರು.
ಬಳಗ ಉದ್ಘಾಟಿಸಿ ಮಾತನಾಡಿದ ಐಎಮ್ಎ ಶಿರಸಿ ಅಧ್ಯಕ್ಷ ಡಾ.ರಾಮ.ಹೆಗಡೆ, ದೈನಂದಿನ ಕೆಲಸ ಕಾರ್ಯಗಳ ಆಯಾಸವನ್ನು ನೀಗುವ ಶಕ್ತಿ ಸಾಹಿತ್ಯದಲ್ಲಿದೆ ,ಅದರ ಉಪಯುಕ್ತತೆಯನ್ನು ನಾವು ಅರಿಯಬೇಕು ಅಂದರು. ಡಾ.ಕೃಷ್ಣಮೂರ್ತಿ ರಾಯಸದ ಅವರು ಕನ್ನಡದ ಸೊಗಡಿನ ವೈಭವವನ್ನು, ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿಯನ್ನು ಸೊಗಸಾಗಿ ವರ್ಣಿಸಿದರು. ಗೌರವ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವೈದ್ಯ ಸಾಹಿತಿ ಡಾ.ಕೆ.ಬಿ.ಪವಾರ್, ಕನ್ನಡ ಭಾಷೆಯ ಅಸ್ಮಿತೆ ಉಳಿಸಿಕೊಳ್ಳಬೇಕು. ಅವಳ ತೊಡಪು ಇವಳಿಗಿಟ್ಟು, ಇವಳ ತೊಡುಪು ಅವಳಿಗಿಟ್ಟು, ಚಂದ ನೋಡು ಎಂದು ಬಿ.ಎಮ್. ಶ್ರೀ ಅವರನ್ನು ಉಲ್ಲೇಖಿಸಿ ಎಲ್ಲ ಭಾಷೆಗಳನ್ನು ಗೌರವಿಸುತ್ತ ಸ್ವಭಾಷೆಯನ್ನು ಬೆಳೆಸಬೇಕು ಎಂದರು.
ಕನ್ನಡ ಬಳಗದ ಕಾರ್ಯದರ್ಶಿ ಡಾ.ತನುಶ್ರೀ ಹೆಗಡೆ ನಿರ್ವಹಿಸಿ , ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?