ಮಹಾಗಣಪತಿ ಪ್ರತಿಷ್ಠಾ ಮಹೋತ್ಸವ 25ರಿಂದ
ನೂತನ ದೇವಾಲಯ ಉದ್ಘಾಟನೆ | ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
Team Udayavani, Jan 23, 2020, 5:10 PM IST
ಶಿರಸಿ: ಐನೂರು ವರ್ಷಗಳ ಇತಿಹಾಸವುಳ್ಳ, ಕರೂರು ಅರಸ ಶಿವಪ್ಪ ನಾಯಕನಿಂದ ಪ್ರತಿಷ್ಠಾಪಿತವಾಗಿದೆ ಎಂಬ ಐತಿಹ್ಯವುಳ್ಳ ತಾಲೂಕಿನ ತುಡಗುಣಿ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ನಿರ್ಮಾಣವಾಗಿದ್ದು, ಮಹಾಗಣಪತಿ ಮೂರ್ತಿ ಪ್ರತಿಷ್ಠಾ ಮಹೋತ್ಸವ ಜ.25 ರಿಂದ 27ರ ತನಕ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಹೆಗಡೆ
ಭತ್ತಗುತ್ತಿಗೆ ಹಾಗೂ ಇತರರು, ಜ.25 ರಿಂದ 27ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೀವಗಿ ರಮಾನಂದ ಸ್ವಾಮೀಜಿ ಹಾಗೂ ಸೋಂದಾ ಸ್ವರ್ಣವಲ್ಲೀ ಶ್ರೀಗಳು
ಸಾನ್ನಿಧ್ಯ ವಹಿಸಲಿದ್ದಾರೆ. ಆಗಮ ಪಂಡಿತ ಷಡಕ್ಷರಿ ಕೃಷ್ಣ ಭಟ್ಟ ಗೋಕರ್ಣ ಅವರ ಪ್ರಧಾನ ಆಚಾರ್ಯತ್ವದಲ್ಲಿ ಪ್ರತಿಷ್ಠಾ ವಿಧಿ ವಿಧಾನಗಳು ನಡೆಯಲಿವೆ ಎಂದು ವಿವರಿಸಿದರು.
ಐದು ಶತಮಾನದಾಚೆಯ ಈ ದೇಗುಲ ಜೀರ್ಣವಾಗಿದ್ದು, ಅದನ್ನು ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ. ಹಿಂದೆ ಕರೂರು ಅರಸ ಶಿವಪ್ಪ ನಾಯಕನು ವೈರಿಗಳಿಂದ ಸೋತು
ಜೀವ ರಕ್ಷಣೆಗಾಗಿ ಇಲ್ಲಿ ಬಂದು ನೆಲೆ ನಿಂತಿದ್ದನು. ಬಳಿಕ ಮಂದಿರ ನಿರ್ಮಾಣ ಮಾಡಿದ್ದಾನೆ ಎಂಬ ಉಲ್ಲೇಖವಿದೆ. 400 ವರ್ಷಗಳಿಂದ ಶಿವಪ್ಪ ನಾಯಕನಿಂದಲೇ ಕಡತೋಕದ ಅರ್ಚಕ ಕುಟುಂಬದವರು ಈ ದೇವಾಲಯದ ದೇವರ ಅರ್ಚನೆಗೆ ಬಂದವರು. ಪೂಜೆ ಪುನಸ್ಕಾರಗಳನ್ನೂ ಅದೇ ಕುಟುಂಬ ನಡೆಸಿಕೊಂಡು ಬಂದಿದ್ದು ಕಾಲಾಂತರದಲ್ಲಿ ಇದು
ಗ್ರಾಮದ ದೇವಸ್ಥಾನವಾಗಿದೆ. 1988ರಲ್ಲಿ ಒಮ್ಮೆ ಜೀರ್ಣೋದ್ಧಾರ ಆಗಿದ್ದರೂ
ಪ್ರಶ° ಮಂಗಲದ ಪ್ರಕಾರ ವೆಂಕಟೇಶ ಭಟ್ಟ ಫಲಕಾಡರ ಮಾರ್ಗದರ್ಶನದಲ್ಲಿ ನೂತನ ದೇವಸ್ಥಾನ ಹಾಗೂ ದೇವರ ಮೂರ್ತಿ ನಿರ್ಮಾಣ ಮಾಡಲಾಗಿದೆ.
ವರ್ಲೆಗದ್ದೆ ವೆಂಕಟ್ರಮಣ ಹೆಗಡೆ ದೇವರ ಮೂರ್ತಿ ಕೆತ್ತನೆ
ಮಾಡಿಕೊಟ್ಟಿದ್ದಾರೆ. ವಾಸ್ತುಶಿಲ್ಪಿ ಮಹೇಶ ಮುನಿಯಂಗಳ ಅವರ
ಮಾರ್ಗದರ್ಶನಲ್ಲಿ ಕೇರಳ ಮಾದರಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿ ಗೋಪು ತಾಮ್ರ ಹೊದಿಕೆ ಮಾಡಲಾಗಿದೆ ಎಂದರು. ಗ್ರಾಮಸ್ಥರು, ಬೇರೆಡೆ
ಉದ್ಯೋಗದಲ್ಲಿರುವವರು ಹಾಗೂ ಈ ಗ್ರಾಮದ ತವರಿನ ಹೆಣ್ಣು ಮಕ್ಕಳು ಉದಾರವಾಗಿ ನೆರವಾಗಿದ್ದಾರೆ. ಈಗಾಗಲೇ 35 ಲಕ್ಷ ರೂ. ವಿನಿಯೋಗಿಸಲಾಗಿದೆ. 25ರಂದು ಬೆಳಗ್ಗೆ
ಸಾಮೂಹಿಕ ಪ್ರಾರ್ಥನೆ ಗಣೇಶ ಯಾಗ, ಬಿಂಬ ಪರಿಗ್ರಹ, ಬಿಂಬಾ ವಾಸಗಳು, ರಾತ್ರಿ ಯಾಗಶಾಲಾ ಪ್ರವೇಶ, ಕುಂಡ ಸಂಸ್ಕಾರಗಳು ನಡೆಯಲಿವೆ.
26ರಂದು ಪ್ರತಿಷ್ಠಾಂಗ ಹೋಮಗಳು, ಬೆಳಗ್ಗೆ 10:48ಕ್ಕೆ ರಮಾನಂದ
ಶ್ರೀಗಳಿಂದ ಪ್ರತಿಷ್ಠಾಪನೆ, ಶಿಖರ ಪ್ರತಿಷ್ಠೆ ಹೋಮಗಳು ನಡೆಯಲಿವೆ. 27ರಂದು ಕಲಾ ಸಾನ್ನಿಧ್ಯ, ಸ್ವರ್ಣವಲ್ಲೀ ಶ್ರೀಗಳಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 4ಕ್ಕೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಬಳಿಕ ತಾಳಮದ್ದಲೆ ನಡೆಯಲಿದೆ ಎಂದರು.
ದೇವಸ್ಥಾನದ ಕಾರ್ಯದರ್ಶಿ ಶಿವಾನಂದ ಹೆಗಡೆ ಉಗ್ರೇಸರ, ಎಲ್. ಎಂ. ಹೆಗಡೆ, ವಿಶ್ವನಾಥ ಶರ್ಮಾ ನಾಡಗುಳಿ, ಗಣಪತಿ ಭಟ್ಟ, ರಾಮಚಂದ್ರ ಭಟ್ಟ, ಶ್ರೀಧರ ಭಟ್ಟ ದೊಡ್ಮನೆ, ಮಹಾಬಲ ಭಟ್ಟ, ಗಜಾನನ ಹೆಗಡೆ, ಲಕ್ಷೀಕಾಂತ ಭಟ್ಟ, ಮಂಜುನಾಥ ಹೆಗಡೆ, ನಾಗಪತಿ ಗಡೆ ಬಾವಿಕೈ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
MUST WATCH
ಹೊಸ ಸೇರ್ಪಡೆ
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್