ಕಾಯಿಲೆ ಭೀತಿಯಲ್ಲಿ ಶಿರವಾಡ ಗ್ರಾಮಸ್ಥರು

•ಹಳ್ಳ-ಬಾವಿಗಳಿಗೆ ಸೇರುತ್ತಿದೆ ಕಲ್ಮಷಯುಕ್ತ ನೀರು•ಘನತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ

Team Udayavani, Jul 3, 2019, 10:40 AM IST

uk-tdy-1..

ಕಾರವಾರ: ಸಮೀಪದ ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕವೇ ತ್ಯಾಜ್ಯದ ವಾಸನೆ ಹಾಗೂ ನಿರ್ವಹಣೆ ಸಮಸ್ಯೆ ಎದುರಿಸುತ್ತಿದೆ. ಶಿರವಾಡ ಗ್ರಾಮಸ್ಥರು, ಜನಪ್ರತಿನಿಧಿಗಳು ಜಿಲ್ಲಾಡಳಿತ ಕಂಡು ಸಮಸ್ಯೆಯನ್ನು ನಿವೇದಿಸಿದ್ದಲ್ಲದೇ, ತ್ಯಾಜ್ಯ ಘಟಕದ ವಿಡಿಯೋ ಚಿತ್ರಣವನ್ನೂ ಸಲ್ಲಿಸಿದರು.

ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳ ಘನತ್ಯಾಜ್ಯವನ್ನು ಹಸಿಕಸ, ಒಣಕಸ ಹಾಗೂ ಪ್ಲಾಸ್ಟಿಕ್‌ಗಳನ್ನು ವಿಂಗಡಿಸಿ ನಗರ ಸಮೀಪದ ಶಿರವಾಡ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದೆಯಾದರೂ, ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಲಾಗುತ್ತಿಲ್ಲ. ಘನತ್ಯಾಜ್ಯ ಘಟಕದ ಗೋಡೆ ಒಡೆದು ತ್ಯಾಜ್ಯ ನೀರು ಹರಿಯುತ್ತಿದೆ. ಅದು ಬಾವಿ ಹಳ್ಳಕ್ಕೆ ಸೇರುತ್ತಿದೆ. ರೋಗ ರುಜಿನಿ ಹರಡುವ ಭೀತಿ ಎದುರಾಗಿದೆ.

ಕೆಯುಡಿಎಫ್‌ಸಿ ನಿಧಿಯಲ್ಲಿ ಘನತ್ಯಾಜ್ಯ ಘಟಕ: ನಗರಸಭೆಗೆ ಹರಿದು ಬಂದ ಕರ್ನಾಟಕ ಮೂಲಭೂತ ಸೌಕರ್ಯಗಳ ಜಾರಿ ಯೋಜನೆಯಲ್ಲಿ ಕಾರವಾರಕ್ಕೆ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಎರಡು ಎಕರೆ ಭೂಮಿಯಲ್ಲಿ 2 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾಗಿತ್ತು. ಆ ತ್ಯಾಜ್ಯ ಗುಂಡಿ 4 ವರ್ಷಗಳಲ್ಲಿ ತುಂಬಿತು. ಆಗ ಅದರ ಪಕ್ಕದ ಖಾಲಿ ಭೂಮಿಗೆ ತ್ಯಾಜ್ಯ ವಿಲೇವಾರಿ ಮಾಡಿ, ಮತ್ತಷ್ಟು ವ್ಯವಸ್ಥಿತವಾಗಿ ತ್ಯಾಜ್ಯ ಹೂಳುವ ವ್ಯವಸ್ಥೆಗೆ ನಗರಸಭೆ ಮುಂದಾಯಿತು. ಆದರೂ ತ್ಯಾಜ್ಯ ನಿರ್ವಹಣೆ ಮತ್ತಷ್ಟು ಸಮಸ್ಯೆಯಾಯಿತು, ನಗರದಲ್ಲಿ 19321 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿವೆ. ಹೋಟೆಲ್, ಸಂತೆ, ವಸತಿ ಗೃಹಗಳು, ವಸತಿಗಳಿಂದ ತ್ಯಾಜ್ಯ ದಿನವೂ ಟನ್‌ಗಟ್ಟಲೆ ಉತ್ಪತ್ತಿಯಾಗುತ್ತಲೇ ಇದೆ. ಕೆಲ ವಾರ್ಡ್‌ಗಳಿಂದ 9ಕ್ಕೂ ಹೆಚ್ಚು ಮಿನಿ ಆಟೋ ಟಿಪ್ಪರ್‌ಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿ ಮನೆಯಿಂದ ಕಸ ಸಂಗ್ರಹಣೆಗೆ ವರ್ಷಕ್ಕೆ 180 ರೂ. ಸಂಗ್ರಹಿಸಲಾಗುತ್ತಿದೆ. ಆದರೂ ಕಸ ನಿರ್ವಹಣೆ ಬಗ್ಗೆ ದೂರುಗಳು ಕೇಳಿ ಬರಲಾರಂಭಿಸಿವೆ. ಈಚಿನ ಎರಡು ಮೂರು ವರ್ಷಗಳಲ್ಲಿ ಶಿರವಾಡದ ಗ್ರಾಮಸ್ಥರು ಘನತ್ಯಾಜ್ಯ ವಿಲೇವಾರಿ ಘಟಕವನ್ನೇ ಸ್ಥಳಾಂತರಿಸಿ ಎಂಬ ಕೂಗು ಎತ್ತಿದ್ದಾರೆ.

ಸತ್ತ ಪ್ರಾಣಿಗಳನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಬಿಸಾಡಲಾಗುತ್ತಿದೆ. ಸತ್ತ ಪ್ರಾಣಿಗಳನ್ನು ಹೂಳುತ್ತಿಲ್ಲ. ಸುತ್ತಮುತ್ತಲ ಜನತೆ ಬದುಕು ನರಕವಾಗಿದೆ ಎಂದಿದ್ದಾರೆ. ನಗರಸಭೆ ಒಂದಿಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುತ್ತದೆ. ಆದರೂ ಮಳೆಗಾಲದಲ್ಲಿ ಸಮಸ್ಯೆ ಉಲ್ಬಣಿಸುತ್ತದೆ. ಹಾಗೆ ಎದ್ದ ವಿವಾದವೂ ಬೇಗನೇ ತಣ್ಣಗಾಗುತ್ತಿದೆ.

2018 ರಿಂದ ಘನತ್ಯಾಜ್ಯ ವಿಲೇವಾರಿ ಘಟಕ ಶಿರವಾಡ ಗ್ರಾಪಂ ಪಾಲಿಗೆ ಮಗ್ಗಲ ಮುಳ್ಳಾಗಿದೆ. 2018 ರಿಂದ ಅಲ್ಲಿಂದ ಸಮಸ್ಯೆ ಆರಂಭವಾದುದು ಆಗಾಗ ಪ್ರತಿಧ್ವನಿಸುತ್ತಲೇ ಇದೆ.

ಶಿರವಾಡ ಗ್ರಾಮಸ್ಥರು ಹೇಳುವುದೇನು: ಘನತ್ಯಾಜ್ಯ ಘಟಕದಲ್ಲಿ ವಿಂಗಡಿಸಿ ಹಾಕುತ್ತಿಲ್ಲ. ಸತ್ತ ಪ್ರಾಣಿಗಳನ್ನು ಸಹ ತ್ಯಾಜ್ಯ ಘಟಕಕ್ಕೆ ತಂದು ಎಸೆಯಲಾಗುತ್ತಿದೆ. ಕೊಳಚೆ ನೀರು ಮಳೆ ನೀರಿನ ಜೊತೆ ಸೇರಿ ಬಾವಿಗಳನ್ನು ಮಲೀನ ಮಾಡಿದೆ. ಘಟಕದಿಂದ ವಾಸನೆ ಬರುತ್ತಿದೆ. ಸೊಳ್ಳೆ ಮತ್ತು ನೊಣಗಳು ಹೆಚ್ಚಿವೆ. ಆರೋಗ್ಯದ ಭಯ ಹುಟ್ಟಿದೆ. ಇದನ್ನು ಸರಿಯಾಗಿ ನಿರ್ವಹಿಸಿ ಇಲ್ಲವೇ ಸ್ಥಳಾಂತರಿಸಿ ಎಂದು ನಗರಸಭೆ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಜಿಲ್ಲಾಧಿಕಾರಿಗಳನ್ನು ಕಂಡ ಜನಪ್ರತಿನಿಧಿಗಳು: ಶಿರವಾಡ ಘನತ್ಯಾಜ್ಯ ಘಟಕದ ನೈಜ ಸ್ಥಿತಿಯ ವಿಡಿಯೋವನ್ನು ಗ್ರಾಪಂ ಅಧ್ಯಕ್ಷೆ ಗಂಗಮ್ಮ ಹಾಗೂ ಸದಸ್ಯರು ಜಿಲ್ಲಾಧಿಕಾರಿ ಡಾ| ಹರೀಶ್‌ ಕುಮಾರ ಅವರಿಗೆ ಮಂಗಳವಾರ ತೋರಿಸಿದರು.

ಘನತ್ಯಾಜ್ಯ ಘಟಕದ ಕೊಳಚೆ ನೀರು ಹಾಗೂ ಸತ್ತ ಪ್ರಾಣಿಗಳು ಜನರಲ್ಲಿ ರೋಗ ಹರಡುವ ಭೀತಿ ಮೂಡಿಸಿವೆ. ಇದಕ್ಕೆ ತಕ್ಷಣ ಸ್ಪಂದಿಸುವಂತೆ ಜಿ.ಪಂ ಸದಸ್ಯೆ ಚೈತ್ರಾ ಕೋಠಾರಕರ್‌ ವಿನಂತಿಸಿದರು.

ಜನ ವಿರೋಧ ಬಂದ ಮೇಲೆ ನಗರಸಭೆ ಹಲವು ಕ್ರಮಕ್ಕೆ ಮುಂದಾಗುತ್ತದೆ. ನಿರಂತರ ನಿರ್ವಹಣೆ ಇಲ್ಲ ಎಂದು ಜಿಲ್ಲಾಡಳಿತದ ಗಮನಸೆಳೆದರು.

ವಿಡಿಯೋ ವೀಕ್ಷಿಸಿದ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗೆ ತಕ್ಷಣ ಸ್ಥಳ ವೀಕ್ಷಣೆಗೆ ಆದೇಶಿಸಿದರು.

ವಾರದಲ್ಲಿ ಕ್ರಮ: ಶಿರವಾಡ ಘನತ್ಯಾಜ್ಯ ಸಮಸ್ಯೆ ಅರಿತ ಜಿಲ್ಲಾಧಿಕಾರಿಗಳು, ಘನತ್ಯಾಜ್ಯ ನಿರ್ವಹಣೆ ಈಗ ಸಮಸ್ಯೆಯಾಗುತ್ತಿದೆ. ಅತ್ಯುತ್ತಮ ನಿರ್ವಹಣೆ ಮೂಲಕ ಘನತ್ಯಾಜ್ಯ ವಿಲೇವಾರಿ ಘಟಕಗಳು ಬೇಕು ಎಂಬ ಭಾವನೆ ಗ್ರಾಮಸ್ಥರಲ್ಲಿ ಮೂಡಿಸಬೇಕಿದೆ. ಕುಮಟಾದ ಕಸವನ್ನು ಪಕ್ಕದ ಹಳ್ಳಿಯವರು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಮೂರು ನಾಲ್ಕು ಗ್ರಾಮಗಳಿಗೆ ಒಂದರಂತೆ ಘನತ್ಯಾಜ್ಯ ಘಟಕಗಳ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಇದಕ್ಕಾಗಿ ಹಣ ಸಹ ಬಿಡುಗಡೆಯಾಗುತ್ತಿದೆ. ಹಾಗಾಗಿ ಇರುವ ಘನತ್ಯಾಜ್ಯ ಘಟಕಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಬೇಕಿದೆ ಎಂದರು.

 

ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯೇ ಇಲ್ಲ. ಅಲ್ಲಿ ಕಸ ವಿಂಗಡಿಸುತ್ತಿಲ್ಲ. ಸತ್ತ ಪ್ರಾಣಿಗಳನ್ನು ಹಾಗೆ ಬಿಸಡಲಾಗುತ್ತಿದೆ. •ಚೈತ್ರಾ ಕೋಠಾರಕರ್‌,ಜಿ.ಪಂ ಸದಸ್ಯೆ.

ಒಂದು ವಾರದಲ್ಲಿ ಶಿರವಾಡ ಘನತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಬಗೆಹರಿಸಲಾಗುವುದು. ನಿರ್ವಹಣೆಗೆ ಬೇಕಾದ ಅನುದಾನ ಬಿಡುಗಡೆ ಮಾಡಲಾಗುವುದು. ಸಮಸ್ಯೆ ಅರಿಯಲು ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿದೆ.•ಡಾ| ಹರೀಶ್‌ಕುಮಾರ್‌ ಜಿಲ್ಲಾಧಿಕಾರಿ ಕಾರವಾರ

 

•ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.