ಸಿಗಂಧಿನಿ ಕಾಳು ಮೆಣಸಿನ ತಳಿಗೆ ವಿಶ್ವಮಾನ್ಯತೆ

ರಮಾಕಾಂತ ಹೆಗಡೆಯವರಿಂದ ವಿಶಿಷ್ಟ ರೋಗ ಪ್ರತಿಬಂಧಕ ಶಕ್ತಿ ಹೊಂದಿದ ತಳಿಯ ರಕ್ಷಣೆ

Team Udayavani, Jul 11, 2021, 10:00 PM IST

rbt

ಗಂಗಾಧರ ಕೊಳಗಿ

ಸಿದ್ದಾಪುರ: ತಾಲೂಕಿನ ಸಿಗಂಧಿನಿ ಎನ್ನುವ ಹೆಸರಿನ ಸ್ಥಳೀಯ ಕಾಳುಮೆಣಸಿನ ತಳಿಗೆ ದೇಶದ ಭರವಸೆಯ ತಳಿ ಎನ್ನುವ ಪ್ರಮಾಣಿಕರಣದ ಜೊತೆಗೆ ಅದನ್ನು ಅಭಿವೃದ್ಧಿಪಡಿಸಿದ ಕಾನಸೂರು ಸಮೀಪದ ಹುಣಸೆಕೊಪ್ಪ-ಕಲ್ಕಟ್ಟೆ ರಮಾಕಾಂತ ಹೆಗಡೆಯವರ ಹೆಸರಿನಲ್ಲಿ ಪೇಟೆಂಟ್‌ ದೊರಕಿದೆ.

ಭಾರತ ಸರಕಾರ ಪ್ಲಾಂಟ್‌ ವೆರೈಟೀಸ್‌ ರಿಜಿಸ್ಟಿಯ ಪ್ರಮಾಣ ಪತ್ರ ನೀಡುವ ಮೂಲಕ ಸಿಗಂಧಿನಿ ಎನ್ನುವ ಹೆಸರಿನ ಈ ತಳಿ ಪ್ರಪಂಚದಲ್ಲಿನ ಕಾಳುಮೆಣಸಿನ ತಳಿಗಳಲ್ಲಿ ವಿಶಿಷ್ಠವಾದದ್ದು ಎಂದು ಗುರುತಿಸಿಕೊಂಡಿದ್ದು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಮಾನ್ಯತೆ ಪಡೆದ ಕಾಳಿಮೆಣಸಿನ ತಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಮ್ಮ ಸಾಂಪ್ರದಾಯಿಕ ತೋಟದಲ್ಲಿ ಹಲವು ವರ್ಷಗಳ ಹಿಂದೆ ಕಾಳುಮೆಣಸಿಗೆ ರೋಗ ಬಂದು ನಾಶವಾದ ನಂತರದಲ್ಲಿ ವೆನಿಲ್ಲಾವನ್ನು ಬೆಳೆಸಿದ್ದೆ. ಈ ಸಂದರ್ಭದಲ್ಲಿ ತಮ್ಮ ತೋಟಕ್ಕೆ ಭೇಟಿ ನೀಡಿದ ವಿಜ್ಞಾನಿ ಡಾ| ವೇಣುಗೋಪಾಲ್‌ ತೋಟದಲ್ಲಿ ರೋಗ ಬಂದು ಎಲ್ಲ ಮೆಣಸಿನ ಬಳ್ಳಿಗಳು ನಾಶವಾದರೂ ಉಳಿದುಕೊಂಡ ಎರಡು ಕಾಳುಮೆಣಸಿನ ಬಳ್ಳಿಗಳನ್ನು ಕಂಡು ಕುತೂಹಲಗೊಂಡು ಆ ಬಗ್ಗೆ ಅಧ್ಯಯನ ನಡೆಸಿದರು. ನಂತರ ಆ ತಳಿಯನ್ನು ಸಂರಕ್ಷಿಸಿಕೊಂಡುಬರುವ ಕುರಿತು ಅಗತ್ಯ ಸಲಹೆ ನೀಡಿದರು ಎಂದು ಕಲ್ಕಟ್ಟೆ ರಮಾಕಾಂತ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು.

ಕಳೆದ 9 ವರ್ಷಗಳಿಂದ ಆ ಎರಡು ಬಳ್ಳಿಗಳ ಬುಡದಲ್ಲಿನ ಕುಡಿಗಳನ್ನು ನೆಟ್ಟು ಈಗ ತೋಟದಲ್ಲಿ ಈ ತಳಿಯ 100 ಬಳ್ಳಿಗಳಾಗಿವೆ. ಯಾವುದೇ ವಿಶೇಷ ಆರೈಕೆ, ಔಷಧಿ ಇಲ್ಲದೇ ಅವುಗಳನ್ನು ಬೆಳೆಸಿದ್ದು ಇದು ವೈಶಿಷ್ಟಪೂರ್ಣ ರೋಗ ಪ್ರತಿಬಂಧಕ ಶಕ್ತಿ ಹೊಂದಿದೆ. ಈಗ ಪ್ರತಿ ಬಳ್ಳಿಯಿಂದ ಸರಾಸರಿ ನಾಲ್ಕೂವರೆ ಕೆ.ಜಿ. ಕಾಳುಮೆಣಸು ದೊರಕುತ್ತಿದೆ. ಇದೇ ಬಳ್ಳಿಗಳ ಕುಡಿಗಳನ್ನು ನರ್ಸರಿಯಲ್ಲಿ ಬೆಳೆಸಿ ಈವರೆಗೆ 1 ಲಕ್ಷಕ್ಕೂ ಹೆಚ್ಚು ಬಳ್ಳಿಗಳನ್ನು ಕೃಷಿಕರಿಗೆ ನೀಡಿದ್ದೇನೆ. ಈ ತಳಿಗೆ ಡಾ| ವೇಣುಗೋಪಾಲ್‌ ಅವರೇ ಈ ತಳಿಗೆ ಸಿಗಂಧಿನಿ ಎನ್ನುವ ಹೆಸರನ್ನು ಇಟ್ಟಿದ್ದು ಈ ತಳಿಯನ್ನು ರೈತರ ಹೆಸರಲ್ಲಿ ನೋಂದಣಿ ಮಾಡಲು ಸಲಹೆ ನೀಡಿದರು.

ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ದಾದಾಸಾಹೇಬ್‌ ದೇಸಾಯಿ, ಮಹಾಬಲೇಶ್ವರ ಅವರ ಮಾರ್ಗದರ್ಶನ, ಸಹಕಾರದೊಂದಿಗೆ ಇದನ್ನು ತಮ್ಮ ಹೆಸರಿನಲ್ಲಿ ಪೇಟೆಂಟ್‌ ಪಡೆದುಕೊಳ್ಳಲು ಸಾಧ್ಯವಾಯಿತು. ಪರಿಸರ ತಜ್ಞ ಬಾಲಚಂದ್ರ ಹೆಗಡೆ ಸಾಯಿಮನೆ ಕೂಡ ಸಹಕಾರ ನೀಡಿದರು.

ಐಎಎಸ್‌ಆರ್‌ ಹಾಗೂ ಇನ್ನಿತರ ಸಂಸ್ಥೆಗಳ ಕೊಲ್ಕೊತ್ತಾ, ಕೇರಳ ಮುಂತಾದೆಡೆಯ ವಿಜ್ಞಾನಿಗಳು 3 ವರ್ಷ ಇದರ ಅಧ್ಯಯನ ಬೆಳವಣಿಗೆ, ಹೂ ಬಿಡುವ, ಕರೆಕಟ್ಟುವ, ಕಾಳು ಬಲಿಯುವುದನ್ನು ಹಾಗೂ ಕರೆಯಲ್ಲಿನ ಕಾಳಿನ ಸಾಂಧ್ರತೆ, ಗಾತ್ರ, ರುಚಿಗಳನ್ನು ಅಧ್ಯಯನ ನಡೆಸಿ, ತಮ್ಮ ತೋಟಕ್ಕೂ ಭೇಟಿ ನೀಡಿ ಅಂತಿಮವಾಗಿ ಪ್ರಮಾಣಪತ್ರವನ್ನು ನೀಡಿದ್ದಾರೆ. ಇದು ಯಾವುದೇ ಪ್ರದೇಶ, ಹವಾಮಾನ, ಮಣ್ಣಿನ ಗುಣದಲ್ಲೂ ಬೆಳೆದು ಉತ್ತಮ ಬೆಳೆ ನೀಡಬಲ್ಲದು ಎಂದು ದೃಢೀಕರಿಸಿದ್ದಾರೆ. ಸಿಗಂಧಿನಿ ಶಾಶ್ವತವಾಗಿರುತ್ತದೆ. ಈ ಭಾಗದಲ್ಲಿ ಇದೇ ಥರದ ಹಲವಾರು ವಿಶಿಷ್ಠ ಮೂಲ ತಳಿಗಳಿದ್ದು ಅವು ಕೂಡ ರೈತರ ಹೆಸರಿನಲ್ಲಿ ಮಾನ್ಯತೆ ಪಡೆದುಕೊಳ್ಳುವಂತಾಗಬೇಕು ಎಂದರು. ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.