ಎಪಿಎಂಸಿ ಗದ್ದುಗೆ ಏರಿದ್ರೂ ಸಿಕ್ಕಿಲ್ಲ ಅವಕಾಶ
ಗ್ರಾಪಂ-ಉಪ ಚುನಾವಣೆ, ಕೊರೊನಾಘಾತ , ಕಳೆದ 20 ತಿಂಗಳಲ್ಲಿ ಸಂಕಷ್ಟವೇ ಹೆಚ್ಚು,
Team Udayavani, Jun 6, 2021, 8:45 PM IST
ವರದಿ: ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ವಿಧಾನ ಸಭಾ ಉಪ ಚುನಾವಣೆ, ಗ್ರಾಪಂ ಚುನಾವಣೆ, ಕೊರೊನಾಘಾತ, ಎಪಿಎಂಸಿ ಕಾಯಿದೆ ತಿದ್ದುಪಡಿ ಗೊಂದಲಗಳ ನಡುವೆ ಇಲ್ಲಿನ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಗದ್ದುಗೆ ಅವಧಿ ಮುಗಿದಿದೆ.
ಅಧ್ಯಕ್ಷ ಸ್ಥಾನಕ್ಕೆ ಏರಿದರೂ ಸ್ವಂತ ಕ್ರಿಯಾಯೋಜನೆ ಅನುಷ್ಠಾನಕ್ಕೆ ಸಿಕ್ಕಿಲ್ಲ ಅವಕಾಶ ಎಂಬ ಸ್ಥಿತಿಯಲ್ಲಿ ಮುಗಿಸುವಂತಾಗಿದೆ. ಇಂಥ ವಿಲಕ್ಷಣ ಸ್ಥಿತಿಯಲ್ಲಿ ಎರಡು ವರ್ಷಗಳ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಇಪ್ಪತ್ತು ತಿಂಗಳು ಮುಗಿಯುತ್ತಿದೆ.
ರಾಜ್ಯದಲ್ಲೇ ಮಾದರಿ ಎಂದೇ ಹೆಸರಾದ ಶಿರಸಿ ಎಪಿಎಂಸಿಗೆ ಇಪ್ಪತ್ತು ತಿಂಗಳ ಹಿಂದೆ ನೂತನ ಅಧ್ಯಕ್ಷರಾಗಿ ವಿಶ್ವನಾಥ ಹೆಗಡೆ ಶೀಗೇಹಳ್ಳಿ, ಉಪಾಧ್ಯಕ್ಷೆಯಾಗಿ ವಿಮಲಾ ಹೆಗಡೆ ಆಯ್ಕೆ ಆಗಿದ್ದರು. ಬಿಜೆಪಿ ಆಳ್ವಿಕೆಯಲ್ಲಿದ್ದ ಪ್ರಥಮ ಹಂತದ ಅಧಿಕಾರಾವಧಿ ಪೂರ್ಣಗೊಂಡಿದೆ.
ಜೂ.18ಕ್ಕೆ ಇಪ್ಪತ್ತು ತಿಂಗಳು ಪೂರ್ಣವಾಗಲಿದೆ. ಜೂ.19ಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಬೇಕಿದೆ. ಹಿಂದಿನ ಅಧ್ಯಕ್ಷ ಸುನೀಲ ನಾಯ್ಕರ ಅವಧಿ ಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಲ್ಲಿ ಅನೇಕ ಯೋಜನೆಗಳಿಗೆ ಈಗ ಎಪಿಎಂಸಿ ನಿರ್ದೇಶಕರು ಅನುಮೋದನೆ ನೀಡಿದ್ದಾರೆ. 2019 ಅಕ್ಟೋಬರ್ 19ಕ್ಕೆ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಚುನಾವಣೆಯಲ್ಲಿ ಜಯಶೀಲರಾಗಿದ್ದರು. ಆದರೆ, ಸಂಕಷ್ಟದ ಅವಧಿಯಲ್ಲೇ 20 ತಿಂಗಳ ಕಂತಿನ ಅಧ್ಯಕ್ಷ ಸ್ಥಾನ ಪೂರ್ಣಗೊಳಿಸುವಂತಾಗಿದೆ.
ಶಿರಸಿ ಎಪಿಎಂಸಿಗೆ ಇಬ್ಬರು ಶಾಸಕರ ಕ್ಷೇತ್ರ ಬರಲಿದೆ. ಒಂದು ಶಿರಸಿ ಸಿದ್ದಾಪುರ, ಇನ್ನೊಂದು ಯಲ್ಲಾಪುರ ವಿಧಾನ ಸಭೆ. ಬನವಾಸಿ ಹೋಬಳಿಯ ಎಲ್ಲ ಪಂಚಾಯ್ತಿಗಳೂ ಯಲ್ಲಾಪುರ ವಿಧಾನ ಸಭೆಗೆ ಸೇರಲಿದೆ. ಒಂದುಕಡೆ ಸ್ಪೀಕರ್ ಕಾಗೇರಿ ಕ್ಷೇತ್ರ, ಇನ್ನೊಂದೆಡೆ ಸಚಿವ ಹೆಬ್ಟಾರ್ ಕ್ಷೇತ್ರ. ಇಂಥ ಬಲಾಡ್ಯರಿದ್ದೂ ಕೆಲಸ ತರಿಸಿಕೊಳ್ಳಲು ಕೊರೊನಾ ಏಟು ನೀಡಿದೆ.
2020ರ ಮಾರ್ಚ್ನಿಂದ ತಗುಲಿದ ಕೊರೊನಾಘಾತ, ಈ ಬಾರಿ ಬೇಸಗೆಯಲ್ಲಿ ತಗುಲಿದ ಏಟು ಎಪಿಎಂಸಿ ಚಟುವಟಿಕೆಗೆ ಕೂಡ ಹಿನ್ನಡೆ ಮಾಡಿದೆ. ಯಲ್ಲಾಪುರ ವಿಧಾನ ಸಭಾ ಉಪ ಚುನಾವಣೆ ಕೆಲ ಸಮಯ ನೀತಿ ಸಂಹಿತೆ ತಂದರೆ, ಗ್ರಾಪಂ ಚುನಾವಣಾ ನೀತಿ ಸಂಹಿತೆ ಕೂಡ ಏಟಾಗಿಸಿದೆ. ಈ ಮಧ್ಯೆ ವಿಧಾನ ಪರಿಷತ್ ಚುನಾವಣೆ ಕೂಡ ನಡೆದಿದೆ. ಎಪಿಎಂಸಿ ಕಾಯಿದೆ ಗೊಂದಲ ಮೂರ್ನಾಲ್ಕು ತಿಂಗಳು ಕಸಿದಿದೆ. ಈ ಕಾರಣದಿಂದ ಓಡಾಟ ನಡೆಸಿ ಈಗಿನ ಅಧ್ಯಕ್ಷರಿಗೆ ಕೆಲಸದ ವರ್ಚಸ್ಸು ತೋರಿಸಲೂ ಆಗಿಲ್ಲ. ಅನೇಕ ಐಡಿಯಾಗಳಿದ್ದರೂ ಅನುಷ್ಠಾನಕ್ಕೆ ಸಂಕಷ್ಟಗಳೇ ತೊಡಕಾಗಿದೆ. ಆದರೂ ನೈರ್ಮಲ್ಯ, ವಿದ್ಯುತ್, ಕುಡಿಯುವ ನಿರಿನ ಜೊತೆಗೆ ಸಿಟಿಟಿವಿ ಅಳಡಿಸಿಯೂ ರಕ್ಷಣಾತ್ಮಕ ಕೆಲಸ ಮಾಡಿದ್ದಾರೆ.
ಎಪಿಎಂಸಿ ಗೇಟು ಅಳವಡಿಸುವ ಕಾರ್ಯ ಕೂಡ ಪೂರ್ಣವಾಗಬೇಕಿದೆ. 18ರ ನಂತರ ಮತ್ತೆ 20 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ವಿಶ್ವನಾಥ ಹೆಗಡೆ ಅವರ ಪುನರಾಯ್ಕೆ ಜೊತೆಗೆ ಕಳೆದ ಬಾರಿ ಸ್ಪರ್ಧಿಸಿದ್ದ ಬನವಾಸಿ ದೇಸಾಯಿ ಗೌಡರು, ಸವಿತಾ ಹೆಗಡೆ, ಪ್ರಶಾಂತ ಗೌಡ, ಕೆರಿಯಾ ಬೋರಕರ್ ಅವರ ಹೆಸರು ಕೇಳಿ ಬರುತ್ತಿದೆ.
ನಾಮನಿರ್ದೇಶನ ಸಹಿತ ಒಟ್ಟೂ 17ರಲ್ಲಿ 11 ರೈತ ಪ್ರತಿನಿಧಿಗಳು ಬಿಜೆಪಿಗರೇ ಆಗಿದ್ದಾರೆ. ಸಹಕಾರಿ ಕ್ಷೇತ್ರದ್ದು ನ್ಯಾಯಾಲಯದಲ್ಲಿ ಇರುವುದರಿಂದ 16ಕ್ಕೆ ಲೆಕ್ಕಾಚಾರ ಆಗಬೇಕಿದೆ. 16ರಲ್ಲಿ ವರ್ತಕರ ಸಂಘದ ಪ್ರತಿನಿಧಿ, ತರಕಾರಿ ಬೆಳೆಗಾರರ ಸಂಘದ ಪ್ರತಿನಿಧಿಯಿದ್ದಾರೆ. ಮೂವರು ಕಾಂಗ್ರೆಸ್, ಇಬ್ಬರು ಪಕ್ಷೇತರರು ಇದ್ದಾರೆ. ಈ ಇಬ್ಬರ ಬೆಂಬಲ ಪಡೆದು ಯಾರು ಅಧ್ಯಕ್ಷರಾಗುತ್ತಾರೆ? ಉಭಯ ಶಾಸಕರು, ಸಂಸದರು ಸೇರಿ ಒಂದಾಗಿ ಅಂತಿಮ ನಿರ್ಣಯ ಕೈಗೊಂಡರೆ ಸುಲಭ ಆಗಬಹುದು.
ತುರುಸಿನ ನಡುವೆ ಹಳಬರಿಗೆ ಮಣೆ ಹಾಕುವವರೋ ಅಥವಾ ಹೊಸ ಮುಖವೋ? ಭಿನ್ನ ಮತ ಸ್ಫೋಟ ಆದರೆ ಬಿಜೆಪಿಯಿಂದ ಹೊರಗೆ ಇದ್ದವರೇ ನಿರ್ಣಾಯಕರಾಗಲಿದ್ದಾರೆ ಎಂಬುದಂತೂ ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ