ಎಪಿಎಂಸಿ ಗದ್ದುಗೆ ಏರಿದ್ರೂ ಸಿಕ್ಕಿಲ್ಲ ಅವಕಾಶ

ಗ್ರಾಪಂ-ಉಪ ಚುನಾವಣೆ, ಕೊರೊನಾಘಾತ , ­ಕಳೆದ 20 ತಿಂಗಳಲ್ಲಿ ಸಂಕಷ್ಟವೇ ಹೆಚ್ಚು,

Team Udayavani, Jun 6, 2021, 8:45 PM IST

j5srs1

ವರದಿ: ರಾಘವೇಂದ್ರ ಬೆಟ್ಟಕೊಪ್ಪ

ಶಿರಸಿ: ವಿಧಾನ ಸಭಾ ಉಪ ಚುನಾವಣೆ, ಗ್ರಾಪಂ ಚುನಾವಣೆ, ಕೊರೊನಾಘಾತ, ಎಪಿಎಂಸಿ ಕಾಯಿದೆ ತಿದ್ದುಪಡಿ ಗೊಂದಲಗಳ ನಡುವೆ ಇಲ್ಲಿನ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಗದ್ದುಗೆ ಅವಧಿ ಮುಗಿದಿದೆ.

ಅಧ್ಯಕ್ಷ ಸ್ಥಾನಕ್ಕೆ ಏರಿದರೂ ಸ್ವಂತ ಕ್ರಿಯಾಯೋಜನೆ ಅನುಷ್ಠಾನಕ್ಕೆ ಸಿಕ್ಕಿಲ್ಲ ಅವಕಾಶ ಎಂಬ ಸ್ಥಿತಿಯಲ್ಲಿ ಮುಗಿಸುವಂತಾಗಿದೆ. ಇಂಥ ವಿಲಕ್ಷಣ ಸ್ಥಿತಿಯಲ್ಲಿ ಎರಡು ವರ್ಷಗಳ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಇಪ್ಪತ್ತು ತಿಂಗಳು ಮುಗಿಯುತ್ತಿದೆ.

ರಾಜ್ಯದಲ್ಲೇ ಮಾದರಿ ಎಂದೇ ಹೆಸರಾದ ಶಿರಸಿ ಎಪಿಎಂಸಿಗೆ ಇಪ್ಪತ್ತು ತಿಂಗಳ ಹಿಂದೆ ನೂತನ ಅಧ್ಯಕ್ಷರಾಗಿ ವಿಶ್ವನಾಥ ಹೆಗಡೆ ಶೀಗೇಹಳ್ಳಿ, ಉಪಾಧ್ಯಕ್ಷೆಯಾಗಿ ವಿಮಲಾ ಹೆಗಡೆ ಆಯ್ಕೆ ಆಗಿದ್ದರು. ಬಿಜೆಪಿ ಆಳ್ವಿಕೆಯಲ್ಲಿದ್ದ ಪ್ರಥಮ ಹಂತದ ಅಧಿಕಾರಾವಧಿ ಪೂರ್ಣಗೊಂಡಿದೆ.

ಜೂ.18ಕ್ಕೆ ಇಪ್ಪತ್ತು ತಿಂಗಳು  ಪೂರ್ಣವಾಗಲಿದೆ. ಜೂ.19ಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಬೇಕಿದೆ. ಹಿಂದಿನ ಅಧ್ಯಕ್ಷ ಸುನೀಲ ನಾಯ್ಕರ ಅವಧಿ ಯಲ್ಲಿ ಅನುಮೋದನೆಗೊಂಡ ಕ್ರಿಯಾಯೋಜನೆಯಲ್ಲಿ ಅನೇಕ ಯೋಜನೆಗಳಿಗೆ ಈಗ ಎಪಿಎಂಸಿ ನಿರ್ದೇಶಕರು ಅನುಮೋದನೆ ನೀಡಿದ್ದಾರೆ. 2019 ಅಕ್ಟೋಬರ್‌ 19ಕ್ಕೆ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಚುನಾವಣೆಯಲ್ಲಿ ಜಯಶೀಲರಾಗಿದ್ದರು. ಆದರೆ, ಸಂಕಷ್ಟದ ಅವಧಿಯಲ್ಲೇ 20 ತಿಂಗಳ ಕಂತಿನ ಅಧ್ಯಕ್ಷ ಸ್ಥಾನ ಪೂರ್ಣಗೊಳಿಸುವಂತಾಗಿದೆ.

ಶಿರಸಿ ಎಪಿಎಂಸಿಗೆ ಇಬ್ಬರು ಶಾಸಕರ ಕ್ಷೇತ್ರ ಬರಲಿದೆ. ಒಂದು ಶಿರಸಿ ಸಿದ್ದಾಪುರ, ಇನ್ನೊಂದು ಯಲ್ಲಾಪುರ ವಿಧಾನ ಸಭೆ. ಬನವಾಸಿ ಹೋಬಳಿಯ ಎಲ್ಲ ಪಂಚಾಯ್ತಿಗಳೂ ಯಲ್ಲಾಪುರ ವಿಧಾನ ಸಭೆಗೆ ಸೇರಲಿದೆ. ಒಂದುಕಡೆ ಸ್ಪೀಕರ್‌ ಕಾಗೇರಿ ಕ್ಷೇತ್ರ, ಇನ್ನೊಂದೆಡೆ ಸಚಿವ ಹೆಬ್ಟಾರ್‌ ಕ್ಷೇತ್ರ. ಇಂಥ ಬಲಾಡ್ಯರಿದ್ದೂ ಕೆಲಸ ತರಿಸಿಕೊಳ್ಳಲು ಕೊರೊನಾ ಏಟು ನೀಡಿದೆ.

2020ರ ಮಾರ್ಚ್‌ನಿಂದ ತಗುಲಿದ ಕೊರೊನಾಘಾತ, ಈ ಬಾರಿ ಬೇಸಗೆಯಲ್ಲಿ ತಗುಲಿದ ಏಟು ಎಪಿಎಂಸಿ ಚಟುವಟಿಕೆಗೆ ಕೂಡ ಹಿನ್ನಡೆ ಮಾಡಿದೆ. ಯಲ್ಲಾಪುರ ವಿಧಾನ ಸಭಾ ಉಪ ಚುನಾವಣೆ ಕೆಲ ಸಮಯ ನೀತಿ ಸಂಹಿತೆ ತಂದರೆ, ಗ್ರಾಪಂ ಚುನಾವಣಾ ನೀತಿ ಸಂಹಿತೆ ಕೂಡ ಏಟಾಗಿಸಿದೆ. ಈ ಮಧ್ಯೆ ವಿಧಾನ ಪರಿಷತ್‌ ಚುನಾವಣೆ ಕೂಡ ನಡೆದಿದೆ. ಎಪಿಎಂಸಿ ಕಾಯಿದೆ ಗೊಂದಲ ಮೂರ್‍ನಾಲ್ಕು ತಿಂಗಳು ಕಸಿದಿದೆ. ಈ ಕಾರಣದಿಂದ ಓಡಾಟ ನಡೆಸಿ ಈಗಿನ ಅಧ್ಯಕ್ಷರಿಗೆ ಕೆಲಸದ ವರ್ಚಸ್ಸು ತೋರಿಸಲೂ ಆಗಿಲ್ಲ. ಅನೇಕ ಐಡಿಯಾಗಳಿದ್ದರೂ ಅನುಷ್ಠಾನಕ್ಕೆ ಸಂಕಷ್ಟಗಳೇ ತೊಡಕಾಗಿದೆ. ಆದರೂ ನೈರ್ಮಲ್ಯ, ವಿದ್ಯುತ್‌, ಕುಡಿಯುವ ನಿರಿನ ಜೊತೆಗೆ ಸಿಟಿಟಿವಿ ಅಳಡಿಸಿಯೂ ರಕ್ಷಣಾತ್ಮಕ ಕೆಲಸ ಮಾಡಿದ್ದಾರೆ.

ಎಪಿಎಂಸಿ ಗೇಟು ಅಳವಡಿಸುವ ಕಾರ್ಯ ಕೂಡ ಪೂರ್ಣವಾಗಬೇಕಿದೆ. 18ರ ನಂತರ ಮತ್ತೆ 20 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ವಿಶ್ವನಾಥ ಹೆಗಡೆ ಅವರ ಪುನರಾಯ್ಕೆ ಜೊತೆಗೆ ಕಳೆದ ಬಾರಿ ಸ್ಪರ್ಧಿಸಿದ್ದ ಬನವಾಸಿ ದೇಸಾಯಿ ಗೌಡರು, ಸವಿತಾ ಹೆಗಡೆ, ಪ್ರಶಾಂತ ಗೌಡ, ಕೆರಿಯಾ ಬೋರಕರ್‌ ಅವರ ಹೆಸರು ಕೇಳಿ ಬರುತ್ತಿದೆ.

ನಾಮನಿರ್ದೇಶನ ಸಹಿತ ಒಟ್ಟೂ 17ರಲ್ಲಿ 11 ರೈತ ಪ್ರತಿನಿಧಿಗಳು ಬಿಜೆಪಿಗರೇ ಆಗಿದ್ದಾರೆ. ಸಹಕಾರಿ ಕ್ಷೇತ್ರದ್ದು ನ್ಯಾಯಾಲಯದಲ್ಲಿ ಇರುವುದರಿಂದ 16ಕ್ಕೆ ಲೆಕ್ಕಾಚಾರ ಆಗಬೇಕಿದೆ. 16ರಲ್ಲಿ ವರ್ತಕರ ಸಂಘದ ಪ್ರತಿನಿಧಿ, ತರಕಾರಿ ಬೆಳೆಗಾರರ ಸಂಘದ ಪ್ರತಿನಿಧಿಯಿದ್ದಾರೆ. ಮೂವರು ಕಾಂಗ್ರೆಸ್‌, ಇಬ್ಬರು ಪಕ್ಷೇತರರು ಇದ್ದಾರೆ. ಈ ಇಬ್ಬರ ಬೆಂಬಲ ಪಡೆದು ಯಾರು ಅಧ್ಯಕ್ಷರಾಗುತ್ತಾರೆ? ಉಭಯ ಶಾಸಕರು, ಸಂಸದರು ಸೇರಿ ಒಂದಾಗಿ ಅಂತಿಮ ನಿರ್ಣಯ ಕೈಗೊಂಡರೆ ಸುಲಭ ಆಗಬಹುದು.

ತುರುಸಿನ ನಡುವೆ ಹಳಬರಿಗೆ ಮಣೆ ಹಾಕುವವರೋ ಅಥವಾ ಹೊಸ ಮುಖವೋ? ಭಿನ್ನ ಮತ ಸ್ಫೋಟ ಆದರೆ ಬಿಜೆಪಿಯಿಂದ ಹೊರಗೆ ಇದ್ದವರೇ ನಿರ್ಣಾಯಕರಾಗಲಿದ್ದಾರೆ ಎಂಬುದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.