ಕಾಗೇರಿ ಮತ್ತೆ ಗೆಲುವಿನ ಸರದಾರ!


Team Udayavani, May 16, 2018, 12:49 PM IST

2541.jpg

ಶಿರಸಿ: ಮತ್ತೆ ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ಐದು ಬಾರಿ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೆ ಮುಂದುವರಿದಿದ್ದಾರೆ. ಕಳೆದ ಸಲಕ್ಕಿಂತ 15 ಸಾವಿರಕ್ಕೂ ಅಧಿ ಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶಿರಸಿ ಕ್ಷೇತ್ರದಲ್ಲಿ ಮೂವರೂ ಸಂಭಾವಿತ ಅಭ್ಯರ್ಥಿಗಳೇ ಆಗಿದ್ದರು. ಕಾಗೇರಿ ಬಿಜೆಪಿಯಿಂದ, ಭೀಮಣ್ಣ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಶಶಿಭೂಷಣ ಹೆಗಡೆ ಅವರ ನಡುವೆ ತ್ರಿಕೋನ ಸ್ಪರ್ಧೆ ಎಂದೇ ಹೇಳಲಾಗಿತ್ತು. ಆದರೆ, ಮತದಾರರು ಚಿತ್ರಣ ಬದಲಾಯಿಸಿದ್ದಾರೆ. ಈ ಅವಧಿಯಲ್ಲಿ ಕೆಲಸ ಆಗಿಲ್ಲ ಎಂಬ ಅಸಮಾಧಾನಗಳು ಇದ್ದ ಹುಲೇಕಲ್‌ ಜಿಪಂ ಕ್ಷೇತ್ರದಲ್ಲೂ ಕಾಗೇರಿ ಅವರ ಗೆಲುವಿಗೆ ಲೀಡ್‌ ನೀಡಿದೆ. ಅಲ್ಲಿಂದ ಶುರುವಾದ ಮತ ಬೇಟೆ ಇಡೀ ಕ್ಷೇತ್ರದ 264 ಮತಗಟ್ಟಗಳಲ್ಲೂ ಮುನ್ನಡೆಗೆ ನೆರವಾಗಿದೆ. ಸಿದ್ದಾಪುರ ತಾಲೂಕಿನಲ್ಲೂ ಕಾಗೇರಿ ಲೀಡ್‌ ಹೆಚ್ಚಿಸಲು ಕಾರಣವಾಗಿದೆ.

ಸಮೀಕರಣ ಆಗಲಿಲ್ಲ!: ಜೆಡಿಎಸ್‌ ತನ್ನೊಂದಿಗೆ ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ, ಬಿಜೆಪಿ ಮೂರನೇ ಸ್ಥಾನಕ್ಕೆ ಪೈಪೋಟಿ ಎಂದಿತ್ತು. ನಾಮಧಾರಿ ಮತಗಳು ಅವರ ಸಮುದಾಯದ ಅಭ್ಯರ್ಥಿಗೆ ವಾಲುತ್ತವೆ, ಹವ್ಯಕರ ಮತಗಳು ಒಡೆಯುತ್ತವೆ ಎಂಬ ಲೆಕ್ಕಾಚಾರವೂ ಇತ್ತು. ಗೆಲುವಿನ ಅಂತರ ಕಡಿಮೆ ಇರುತ್ತದೆ ಎಂದೂ ಹೇಳಲಾಗುತ್ತಿತ್ತು. ಆದರೆ, ಇದ್ಯಾವುದೂ ನಡೆಯಲೇ ಇಲ್ಲ.

ಕಾಗೇರಿಗೆ ಅವರೊಂದಿಗೆ ಇರುವ ಸಜ್ಜನಿಕೆ ಪ್ಲಸ್‌ ಆದರೆ, ಅಲೆಗಳ ಓಡಾಟವೂ ನೆರವಾಯಿತು. ಭೀಮಣ್ಣರ ಸೋಲಿಗೆ ವಿಳಂಬ ಟಿಕೆಟ್‌ ನೀಡಿಕೆ, ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ಹೆಚ್ಚಿದ್ದೂ ಕಾರಣವಾಯಿತು. ಉತ್ತರ ಪ್ರದೇಶ, ಗುಜರಾತ್‌ ಜೊತೆ ಕರ್ನಾಟಕವೂ ಸೇರಿ ಉತ್ತರ ಕನ್ನಡಕ್ಕೆ ಒಂದು ಸ್ಥಾನದಿಂದ ಮೂರಕ್ಕೇರಿಸಿತು! ಶಿರಸಿಗೆ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರು ಬರದೇ ಇರುವುದು, ಬಿಜೆಪಿಗೆ ಯೋಗಿ ಆದಿತ್ಯನಾಥ, ಯಶ್‌, ಕೇಂದ್ರ ಸಚಿವ ಅನಂತಕುಮಾರ, ಅನಂತಕುಮಾರ ಹೆಗಡೆ ಅವರೂ ಬಂದಿದ್ದು ಬಲ ಹೆಚ್ಚಿಸಿತು.

ಕೈಕೊಟ್ಟ ಕರೆಂಟ್‌: ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಮಳೆ ಗಾಳಿ ಜೋರಾಗಿ ಸೋಮವಾರ ನಡೆದಿತ್ತು. ಇದರ ಪರಿಣಾಮ ಎಂಬಂತೆ ಮಂಗಳವಾರ ಕರೆಂಟ್‌ ಅರ್ಧ ಗಂಟೆಯೂ ಬಂದದ್ದು ನಿಲ್ಲಲಿಲ್ಲ. ಈ ಕಾರಣದಿಂದ ಟಿವಿ ಮುಂದೆ ಕುಳಿತು ರಾಜ್ಯದ, ಜಿಲ್ಲೆಯ ಚುನಾವಣಾ ಫಲಿತಾಂಶ ಪಡೆದುಕೊಳ್ಳಲು ವಿಶೇಷವಾಗಿ ಗ್ರಾಮೀಣ ಭಾಗದ ಮತದಾರರಿಗೆ ಹಿನ್ನಡೆ ಉಂಟಾಯಿತು.

ಕೆಲವರು ಮೊಬೈಲ್‌ ಬಳಸಿ ಟಿವಿಗಳ ಲೈವ್‌ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್‌ ಪವರ್‌ ಬಳಸಿ ಗ್ರಾಮಸ್ಥರು ಟಿವಿ ನೋಡಿದರು.

ಕಾರ್ಯಕರ್ತರ ದಂಡು: ಇಲ್ಲಿನ ರಾಘವೇಂದ್ರ ಮಠದ ಬಳಿ ಇರುವ ಶಾಸಕ ವಿಶ್ವೇಶ್ವರ ಹೆಗಡೆ ಕಚೇರಿಯಲ್ಲಿ ಕಾರ್ಯಕರ್ತರು ಒಟ್ಟಾಗಿ ಕುಳಿತು ಟಿವಿ ವೀಕ್ಷಿಸಿದರು. ಮೋದಿಗೆ, ಕಾಗೇರಿಗೆ ಜೈ ಎಂದರೆ, ಬಿಜೆಪಿ ಹವಾ ಎಬ್ಬಿಸಿದ ಪ್ರಧಾನಿಗೆ ನಮೋ ಎಂದರು. ಸಹಕಾರಿ ಶಾಂತಾರಾಮ  ಹೆಗಡೆ ಅವರ ಕಚೇರಿ ಆವಾರದಲ್ಲೂ ಮತದಾರರು, ಪ್ರಮುಖರು ಟಿವಿ ನೋಡಿದರು.

ಏನಾದೀತು?: ಕಾಗೇರಿ ಗೆಲುವಿಗೆ ಡಬಲ್‌ ಧಮಾಕ ಆಗಬಹುದೇ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಹಿನ್ನೆಲೆಯಲ್ಲಿ ಏನಾಗಬಹುದು ಎಂಬ ಗೊಂದಲ ಉಂಟಾಯಿತು. ಬಿಜೆಪಿ ನೇತೃತ್ವದ ಸರಕಾರ ಆದರೆ ಮಾತ್ರ ಶಿರಸಿಗೆ ಮಂತ್ರಿ ಸ್ಥಾನ ಬಹುತೇಕ ಖಚಿತವಿತ್ತು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜೊತೆ ರಾಜ್ಯ ಸರಕಾರದಲ್ಲಿ ಕೂಡ ಹಿರಿಯ ಸಚಿವರಾಗಿ ಕಾಗೇರಿ ಅ ಧಿಕಾರ ಸ್ವೀಕರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ರಾಜ್ಯ, ರಾಷ್ಟ್ರ ರಾಜಕಾರಣದ ಚರ್ಚೆ ಆರಂಭಿಸಿದರು. ಕಾಂಗ್ರೆಸ್‌ ಜೆಡಿಎಸ್‌ ಅಧಿಕಾರ ಹಂಚಿಕೊಂಡರೆ ಕಾಗೇರಿಗೆ ಮಂತ್ರಿಸ್ಥಾನ ದೂರವಾಗಲಿದೆ ಎಂದೂ ಚರ್ಚೆಯಲ್ಲಿ ಮಾತನಾಡಿಕೊಂಡರು.

ಮತ ಮಾಹಿತಿ

ಕೆಲವರು ಮೊಬೈಲ್‌ ಬಳಸಿ ಟಿವಿಗಳ ಲೈವ್‌ ಶೋ ನೋಡಿದರೆ ಇನ್ನು ಕೆಲವರಿಗೆ ಬಿಜೆಪಿಯವರು ಕುಮಟಾ ಮೀಡಿಯಾ ಸೆಂಟರ್‌ನ ಡಿಸ್‌ಪ್ಲೇ ತೆಗೆದು ಕಳಿಸಿದ್ದು ಕುತೂಹಲ ತಣಿಸಲು ಕಾರಣವಾಯಿತು. ಉದಯವಾಣಿ ಸಹಿತ ಹಲವು ವೆಬ್‌ಸೈಟ್‌ಗಳೂ ಸಮರ್ಪಕ ಮಾಹಿತಿ ನೀಡಿದವು. ಕೆಲವು ಮನೆಗಳಲ್ಲಿದ್ದ ಇನ್ವರ್ಟರ್‌ ಪವರ್‌ ಬಳಸಿ ಗ್ರಾಮಸ್ಥರು ಟಿವಿ ನೋಡಿದರು

ಗೆಲುವಿಗೆ ಕಾರಣವೇನು?

ಪ್ರಧಾನಿ ನರೇಂದ್ರ ಮೋದಿ ಅಲೆ
ಕಾಗೇರಿ ಸಚಿವರಾಗಿದ್ದಾಗ ಮಾಡಿದ ಶೈಕ್ಷಣಿಕ ಅಭಿವೃದ್ಧಿ
ಪ್ರಖರ ಹಿಂದುತ್ವ
ಆರ್‌ಎಸ್‌ಎಸ್‌ ಕಾರ್ಯಕರ್ತರ
ಪ್ರಯತ್ನ
ಪೇಜ್‌ ಪ್ರಮುಖ ನಡೆ ವಕೌìಟ್‌

ಸೋಲಿಗೆ ಕಾರಣವೇನು?
ವಿಳಂಬವಾಗಿ ಅಭ್ಯರ್ಥಿ ಘೋಷಣೆ
ಜಿಲ್ಲಾಧ್ಯಕ್ಷರೂ ಅಭ್ಯರ್ಥಿ, ನಿರ್ವಹಣಾ ಒತ್ತಡ ಹೆಚ್ಚಳ
ಜೆಡಿಎಸ್‌ ಕಾಂಗ್ರೆಸ್‌ಗೆ ಒಡೆದ ಬಂಗಾರಪ್ಪ ಅಭಿಮಾನಿಗಳ ಮತ
ಸಮೀಕರಣಗೊಳ್ಳದ ನಾಮಧಾರಿ ಮತಗಳು
ಕೊನೇ ದಿನಗಳಲ್ಲಿ ವೇಗ ಪಡೆಯದ ಹುರುಪು

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.