ಶಿರಸಿ ಮಾರಿಕಾಂಬಾ ದೇವಸ್ಥಾನದ ಪುನರ್ ನಿರ್ಮಾಣ : ನೀಲ ನಕ್ಷೆ ಬಿಡುಗಡೆ
Team Udayavani, Mar 5, 2020, 10:11 PM IST
ಶಿರಸಿ: ಕರ್ನಾಟಕದ ಪ್ರಸಿದ್ದ ಮಾರಿಕಾಂಬಾ ದೇವಸ್ಥಾನದ ಪುನರ್ ನಿರ್ಮಾಣ, ಮುಂದಿನ ಅಭಿವೃದ್ದಿ ಕಾಮಗಾರಿಗಳ ವಿಸ್ತೃತ ಯೋಜನಾ ವರದಿಯನ್ನು ಮಾರಿಕಾಂಬಾ ದೇವಿಯ ಜಾತ್ರಾ ಗದ್ದುಗೆಯಲ್ಲಿ ಗುರುವಾರ ಸಂಜೆ ಬಿಡುಗಡೆಗೊಳಿಸಲಾಯಿತು.
ಸುಮಾರು 200 ಕೋಟಿರೂ. ಮೊತ್ತದ ನೀಲ ನಕ್ಷೆ ಇದಾಗಿದ್ದು, ಹದಿಮೂರು ವಿಭಾಗದ ಅಭಿವೃದ್ದಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ. ನೂತನ ನೀಲ ನಕ್ಷೆಯನ್ನು ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ, ಸುನೀತಾ, ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಬಿಡುಗಡೆಗೊಳಿಸಿದರು.
ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ನೂತನ ಯೋಜನೆಗಳ ನೀಲನಕ್ಷೆ ಹಾಗೂ ಈಗಿನ ಸ್ಥಿತಿ ವಿವರಿಸಿದರು. ಈ ವೇಳೆ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ, ಶಾಂತಾರಾಮ ಹೆಗಡೆ, ಬಾಬಯದಾರ ಜಗದೀಶ ಗೌಡ, ರಾಮು ಕಿಣಿ ಇತರರು ಇದ್ದರು.